ಸರ್ಕಾರಿ ಕೆಲಸದ ಆಸೆಗೆ ಗಂಡನನ್ನೇ ಕೊಂದ ಹೆಂಡತಿ: ತನಿಖೆಯಲ್ಲಿ ಶಾಕಿಂಗ್ ಸತ್ಯ ಬಯಲು!

ಎಪ್ರಿಲ್ 7, 2025 - 22:02
 0  8
ಸರ್ಕಾರಿ ಕೆಲಸದ ಆಸೆಗೆ ಗಂಡನನ್ನೇ ಕೊಂದ ಹೆಂಡತಿ: ತನಿಖೆಯಲ್ಲಿ ಶಾಕಿಂಗ್ ಸತ್ಯ ಬಯಲು!

ತೆಲಂಗಾಣ: ಹಣ, ಆಸ್ತಿ, ಆಭರಣಕ್ಕಾಗಿ ಕೊಲೆಗಳಾಗುತ್ತಿರುವ ಬಗ್ಗೆ ಆಗಾಗ್ಗೆ ವರದಿಗಳಾಗುತ್ತಿರುತ್ತವೆ. ಆದರೆ, ಇಲ್ಲಿನ ಮಹಿಳೆಯೊಬ್ಬಳು, ಸರ್ಕಾರಿ ಕೆಲಸಕ್ಕಾಗಿ ಗಂಡನನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ನಲ್ಗೊಂಡದ ಉಸ್ಮಾನಪುರದಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನಗಲ್ಲದಿದ್ದರೆ ಮಕ್ಕಳಿಗಾದರೂ ಸರ್ಕಾರಿ ಉದ್ಯೋಗ ಸಿಗಬಹುದು ಎಂಬ ಆಸೆಗೆ ಬಿದ್ದು ಗಂಡನನ್ನೇ ಕೊಲೆ ಮಾಡಿದ್ದಾಳೆ. ಈ ಕೊಲೆಯನ್ನು ಸಹಜ ಸಾವೆಂದು ಆಕೆ ನಂಬಿಸಿದ್ದು, ಪೊಲೀಸ್‌ ತನಿಖೆಯಲ್ಲಿ ಸದ್ಯ ಇದೊಂದು ಸಹಜ ಸಾವಲ್ಲ ಬದಲಿಗೆ ಕೊಲೆ ಎಂಬ ಸತ್ಯ ಬಯಲಾಗಿದೆ.

ಉಸ್ಮಾನಪುರ ನಿವಾಸಿ ಖಲೀಲ್‌ ಹುಸೇನ್‌ (44) ಕಣಗಲ್‌ ಮಂಡಲದ ಚಾರ್ಲಗೌರರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡುತ್ತಿದ್ದ. ಸ್ವಲ್ಪ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಈತನಿಗೆ ಕುಡಿತದ ಚಟವೂ ಇತ್ತು. ಹೀಗೆ ಈತನ ಮದ್ಯದ ಚಟದಿಂದ ಬೇಸತ್ತಿದ್ದ ಪತ್ನಿ,

ಈತನನ್ನು ಕೊಂದರೆ ಇವನ ಸರ್ಕಾರಿ ಕೆಲಸ ನನಗೆ ಅಥವಾ ಮಕ್ಕಳಿಗೆ ಸಿಗುತ್ತದೆ ಎಂದು ಸರ್ಕಾರಿ ಕೆಲಸದ ಆಸೆಗೆ ಗಂಡನನ್ನೇ ಕೊಲೆ ಮಾಡಿದ್ದಾಳೆ. ಹೌದು ಕಳೆದ ತಿಂಗಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಈಕೆ ತನ್ನ ಗಂಡನ ಕುನಾನ್‌ ಸ್ಟ್ಯಾಂಡ್‌ನಿಂದ ತೀವ್ರವಾಗಿ ಹೊಡೆದಿದ್ದಾಳೆ. ಕುಸಿದು ಬಿದ್ದು ಗಂಡನಿಗೆ ಹೀಗಾಯಿತು ಎಂದು ಆಕೆ ಎಲ್ಲರೆದುರಲ್ಲಿ ಬಿಂಬಿಸಿದ್ದಾಳೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಖಲೀಲ್‌ ಮೃತ ಪಟ್ಟಿದ್ದಾನೆ.

ಮೃತ ವ್ಯಕ್ತಿಯ ತಾಯಿ ಮೊಹಮ್ಮದ್ ಬೇಗಂ ತಮ್ಮ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ನಂತರ ಅದೇ ದಿನ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅದರಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದ ಕಾರಣ ಸಾವು ಸಂಭವಿಸಿದೆ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ತಕ್ಷಣ ಪೊಲೀಸರು ಪತ್ನಿ ಅಕ್ಸರ್‌ ಜಹಾನ್‌ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ವಿಚಾರಣೆಯ ವೇಳೆ ಕುಡಿತಕ್ಕೆ ದಾಸನಾಗಿದ್ದ ನನ್ನ ಗಂಡ ನನಗೂ ಹಾಗೂ ನನ್ನ ಮೂವರು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಇವನನ್ನು ಕೊಂದರೆ ಈತನ ಕಾಟವೂ ತಪ್ಪುತ್ತದೆ ಮತ್ತು ಇವನ ಸರ್ಕಾರಿ ಕೆಲಸ ನನಗಲ್ಲದಿದ್ದರೂ ನನ್ನ ಮಕ್ಕಳಿಗಾದರೂ ಸಿಗುತ್ತದೆ ಆಗ ಎಲ್ಲಾ ಸಮಸ್ಯೆಯೂ ಮುಗಿದು ಹೋಗುತ್ತದೆ ಎಂದು ಭಾವಿಸಿ ಗಂಡನನ್ನು ಹೊಡೆದು ಸಾಯಿಸಿದೆ ಎಂದು ಸತ್ಯ ಬಾಯಿ ಬಿಟ್ಟಿದ್ದಾಳೆ. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow