ಹುಷಾರ್: ಗುರುವಾರ ಈ ಕೆಲಸ ಮಿಸ್ ಆಗಿ ನಡೆದರೂ ನಿಮಗೆ ಗುರು ದೋಷ ಗ್ಯಾರಂಟಿ!

ಹಿಂದೂ ಧರ್ಮದಲ್ಲಿ ಗುರುವಾರ ವಿಷ್ಣು ಪೂಜೆಗೆ ವಿಶೇಷ ಮಹತ್ವವಿದೆ. ಈ ದಿನದಂದು ವಿಷ್ಣುವನ್ನು ಪೂಜಿಸುವ ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಅನುಗ್ರಹ ಸಿಗುತ್ತದೆ ಎಂದು ನಂಬಲಾಗಿದೆ. ಗುರುವಾರದ ಉಪವಾಸವು ಎಲ್ಲಾ ತೊಂದರೆಗಳನ್ನು ನಿವಾರಿಸುತ್ತದೆ. ಜೀವನದಲ್ಲಿ ತಮ್ಮ ಕಾರ್ಯಗಳಲ್ಲಿ ಅಡೆತಡೆಗಳಿಂದ ತೊಂದರೆಗೊಳಗಾದವರು ಅಥವಾ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ತಮ್ಮ ಪ್ರಗತಿಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿರುವವರು ಗುರುವಾರ ವಿಷ್ಣು ಮತ್ತು ಬೃಹಸ್ಪತಿ ಇಬ್ಬರನ್ನೂ ಪೂಜಿಸಬೇಕು. ವಿಷ್ಣುವನ್ನು ಪೂಜಿಸುವುದರಿಂದ ಲಕ್ಷ್ಮಿ ದೇವಿಯೂ ಪ್ರಸನ್ನಳಾಗುತ್ತಾಳೆ ಮತ್ತು ಆರ್ಥಿಕ ಲಾಭವನ್ನು ನೀವು ಪಡೆಯುತ್ತೀರಿ.
ಗುರುವಾರದಂದು ಯಾರು ವಿಷ್ಣುವನ್ನು ಮನಃಪೂರ್ವಕವಾಗಿ ಸ್ಮರಿಸುತ್ತಾರೋ ಮತ್ತು ವಿಧಿ ವಿಧಾನಗಳ ಪ್ರಕಾರ ಆತನನ್ನು ಪೂಜಿಸುತ್ತಾರೋ ಅವರ ಜೀವನದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಇಷ್ಟೇ ಅಲ್ಲ, ಆ ವ್ಯಕ್ತಿಯು ಹಣಕ್ಕೆ ಸಂಬಂಧಿಸಿದಂತೆ ಯಾವುದೇ ನಷ್ಟವನ್ನು ಎಂದಿಗೂ ಅನುಭವಿಸಬೇಕಾಗಿಲ್ಲ ಎನ್ನಲಾಗಿದೆ. ಗುರುವಾರದಂದು ಕೆಲವೊಂದು ಕೆಲಸಗಳನ್ನು ಮಾಡಲೇಬಾರದು ಎಂದು ನಿಷೇಧಿಸಲಾಗಿದೆ. ಒಂದು ವೇಳೆ ನಾವು ಮರೆತು ಈ ಕೆಲಸಗಳನ್ನು ಮಾಡಿದರೂ ಅದು ನಾಶಕ್ಕೆ ಕಾರಣವಾಗಬಹುದು. ಹಾಗಾದರೆ, ಗುರುವಾರದಂದು ನಾವು ಯಾವ ಕೆಲಸಗಳನ್ನು ಮಾಡಬಾರದು..?
1. ಹಿರಿಯರನ್ನು ಅವಮಾನಿಸುವುದನ್ನು ತಪ್ಪಿಸಿ:
ನಾವು ಹಿರಿಯರನ್ನು ಎಂದಿಗೂ ಅವಮಾನಿಸಬಾರದು. ಅದರಲ್ಲೂ ವಿಶೇಷವಾಗಿ ಗುರುವಾರದಂದು ಈ ಕೆಲಸಗಳನ್ನು ಮಾಡಲೇಬಾರದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹಿರಿಯರನ್ನು ನಾವು ಯಾವುದೇ ಕಾರಣಕ್ಕೂ ದುಃಖಿಕ್ಕೆ ತಳ್ಳಬಾರದು. ಇವರಲ್ಲಿ ಪೋಷಕರು, ಗುರುಗಳು, ಋಷಿಗಳು ಮತ್ತು ಸಂತರು ಸೇರಿದ್ದಾರೆ. ಒಂದು ವೇಳೆ ಮರೆತು ನಾವು ಇವರನ್ನು ಅವಮಾನಿಸಿದರೂ ಜಾತಕದಲ್ಲಿ ಗುರು ಗ್ರಹವೂ ಅಶುಭ ಪ್ರಭಾವವನ್ನು ಬೀರುತ್ತದೆ.
2. ವ್ಯಾಪಾರವನ್ನು ತಪ್ಪಿಸಿ:
ಗುರುವಾರ ಯಾರಿಗೂ ಸಾಲ ನೀಡಬೇಡಿ ಅಥವಾ ಯಾರಿಂದಲೂ ಸಾಲ ತೆಗೆದುಕೊಳ್ಳಬೇಡಿ. ಈ ದಿನ ಸಾಲವನ್ನು ಕೊಡುವುದನ್ನು ಮತ್ತು ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ. ಗುರುವಾರದಂದು ಹಣದ ವ್ಯವಹಾರ ಮಾಡುವುದರಿಂದ ಆ ವ್ಯಕ್ತಿಯೂ ಬಡವನಾಗಬಹುದು ಎಂದು ಹೇಳಲಾಗುತ್ತದೆ. ಈ ದಿನ ಸಾಲ ತೆಗೆದುಕೊಂಡ ಜನರಿಗೆ ಆ ಸಾಲವನ್ನು ಎಂದಿಗೂ ಪಾವತಿಸಲು ಸಾಧ್ಯವಾಗುವುದಿಲ್ಲ. ಹಾಗೂ ಸಾಲ ನೀಡಿದವನು ಎಂದಿಗೂ ತನ್ನ ಹಣವನ್ನು ಮರಳಿ ಪಡೆಯುವುದಿಲ್ಲ.
3. ಮಹಿಳೆಯರು ತಮ್ಮ ಕೂದಲನ್ನು ತೊಳೆಯಬಾರದು:
ವಿವಾಹಿತ ಮಹಿಳೆಯರು ಗುರುವಾರ ತಮ್ಮ ಕೂದಲನ್ನು ಮರೆತು ಕೂಡ ತೊಳೆಯಬಾರದು. ಮಹಿಳೆಯರು ಈ ರೀತಿ ಮಾಡುವುದರಿಂದ ಆಕೆಯ ಗಂಡ ಮತ್ತು ಮಕ್ಕಳಿಬ್ಬರಿಗೂ ಸಮಸ್ಯೆಗಳನ್ನು ಉಂಟುಮಾಡಬಹುದು. ಇದಲ್ಲದೆ ಗುರುವಾರದಂದು ಕೂದಲು ತೊಳೆಯುವುದರಿಂದ ಕುಂಡಲಿಯಲ್ಲಿ ಗುರು ದುರ್ಬಲನಾಗುತ್ತಾನೆ ಎಂದು ಹೇಳಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದ್ದರಿಂದ ಗುರುವಾರದಂದು ಮಹಿಳೆಯರು ತಮ್ಮ ತಲೆಕೂದಲನ್ನು ತೊಳೆಯಬಾರದು.
ಗುರುವಾರದಂದು ಯಾವುದೇ ಓರ್ವ ವ್ಯಕ್ತಿಯು ಈ ಮೇಲಿನ ತಪ್ಪುಗಳನ್ನು ಮಾಡುವುದರಿಂದ ಅವನು ಅಥವಾ ಅವಳು ಹಣದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗೂ ಗ್ರಹಗಳಿಂದ ಅನೇಕ ರೀತಿಯ ದೋಷಗಳನ್ನು ಕೂಡ ಎದುರಿಸಬೇಕಾಗುತ್ತದೆ. ಹಾಗಾಗಿ, ಗುರುವಾರ ಈ ತಪ್ಪುಗಳನ್ನು ಮಾಡುವುದರಿಂದ ದೂರವಿರಬೇಕು.
ನಿಮ್ಮ ಪ್ರತಿಕ್ರಿಯೆ ಏನು?






