ಸಿಎಂ ಸಿದ್ದು ಕನಸಿನ ಯೋಜನೆಗೆ ಆರಂಭದಲ್ಲೇ ವಿಘ್ನ: 52 ಹೊಸ ಕ್ಯಾಂಟೀನ್ಗಳು ಓಪನ್ ಆಗೋದು ಡೌಟ್?

ಬೆಂಗಳೂರು:- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ರಾಜಧಾನಿ ಬೆಂಗಳೂರಿನಸ್ಲಿ ಹೊಸ ಇಂದಿರಾ ಕ್ಯಾಂಟೀನ್ಗಳ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಬೆಂಗಳೂರಿನಲ್ಲಿ ಕಳೆದ ವರ್ಷ ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಒಪ್ಪಿಗೆ ನೀಡಿತ್ತು. ಶೀಘ್ರದಲ್ಲೇ ಟೆಂಡರ್ ಕರೆದು ನಿರ್ಮಾಣ ಕಾರ್ಯ ಶುರು ಮಾಡುವಂತೆ ಸಚಿವ ಸಂಪುಟ ತೀರ್ಮಾನಿಸಿತ್ತು. ಕಳೆದ ಅಕ್ಟೋಬರ್ ತಿಂಗಳಲ್ಲಿ 52 ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಬಿಬಿಎಂಪಿ ಟೆಂಡರ್ ಕೂಡ ಕರೆದಿತ್ತು. ಆದರೆ ಬಿಬಿಎಂಪಿ ಕರೆದಿದ್ದ ಟೆಂಡರ್ಗೆ ಯಾವ ಕಂಪನಿಯಾಗಲೀ, ಯಾರೊಬ್ಬರಾಗಲೀ ಭಾಗವಹಿಸಿಲ್ಲ. ಹೀಗಾಗಿ 52 ವಾರ್ಡ್ಗಳಲ್ಲಿ ಹೊಸ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ.
ಇನ್ನೂ ಟೆಂಡರ್ನಲ್ಲಿರುವ ಇರುವ ಟಫ್ ರೂಲ್ಸ್ ನಿರ್ಮಾಣಕ್ಕೆ ಇರುವ ವೆಚ್ಚದ ಸಮಸ್ಯೆಯೇ ಯಾರೊಬ್ಬರು ಭಾಗವಹಿಸದೇ ಇರಲು ಕಾರಣವಾಗಿದೆ. ಜೊತೆಗೆ ಈಗ ಆಗುತ್ತಿರುವ ಇಂದಿರಾ ಕ್ಯಾಂಟೀನ್ಗಳ ಅವ್ಯವಸ್ಥೆ, ಬಾಕಿ ಬಿಲ್ ಸಮಸ್ಯೆಯೇ ಟೆಂಡರ್ನಲ್ಲಿ ಭಾಗಿವಹಿಸದೇ ಇರೋದಕ್ಕೆ ಕಾರಣ ಅಂತಾ ಹೇಳಲಾಗುತ್ತಿದೆ.
ನಿಮ್ಮ ಪ್ರತಿಕ್ರಿಯೆ ಏನು?






