ಸೀತಾಗೆ ಗೊತ್ತಾಯ್ತು ಸಿಹಿಯ ಸಾವಿನ ವಿಚಾರ: ಹಾಗಿದ್ರೆ ಮುಂದೇನು?

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾರಾಮ ಧಾರವಾಹಿ ಹೆಚ್ಚು ಜನಮನ್ನಣೆ ಪಡೆದಿದೆ. ಧಾರಾವಾಹಿಯ ವಿಲನ್ ಎನಿಸಿಕೊಂಡಿರುವ ಭಾರ್ಗವಿಯು ಹೇಗಾದರೂ ಮಾಡಿ ಸೀತಾಳನ್ನು ಮಟ್ಟ ಹಾಕುವ ಪ್ರಯತ್ನದಲ್ಲಿ ಇದ್ದಾಳೆ. ಈ ಪ್ರಯತ್ನದಲ್ಲಿ ಅವಳು ಕೆಲವು ಸಮಯದಲ್ಲಿ ಯಶಸ್ಸು ಕಂಡಿದ್ದೂ ಇದೆ. ಸಿಹಿ ಸತ್ತ ವಿಚಾರವನ್ನು ಸೀತಾಗೆ ಹೇಳಬೇಕು ಎಂದು ಭಾರ್ಗವಿ ಅನೇಕ ಬಾರಿ ಪ್ರಯತ್ನಪಟ್ಟಿದ್ದನ್ನು ನೀವು ಕಾಣಬಹುದು. ಹಾಗೆ ಹೇಳಿದರೆ ಸೀತಾ ಮತ್ತೆ ಹುಚ್ಚಿಯಾಗಿ ಮಾರ್ಪಾಡಾಗುತ್ತಾಳೆ ಅನ್ನೋದು ಅವಳ ಆಲೋಚನೆ. ಆದರೆ, ಪ್ರತಿ ಹಂತದಲ್ಲು ಇದಕ್ಕೆ ರಾಮ್ ಬ್ರೇಕ್ ಹಾಕುತ್ತಾ ಬರುತ್ತಿದ್ದ. ಈಗ ಸಿಹಿಯ ಸಾವಿನ ವಿಚಾರ ಗೊತ್ತಾಗಿ ಹೋಗಿದೆ. ಆಕೆಯು ಹೇಗೆ ರಿಯಾಕ್ಟ್ ಮಾಡುತ್ತಾಳೆ ಎಂಬುದರ ಪ್ರೋಮೋ ಹಂಚಿಕೊಳ್ಳಲಾಗಿದೆ.
ಅಶೋಕನ ತಂದೆ-ತಾಯಿ ಸಾವಿಗೆ ರಾಮನ ಚಿಕ್ಕಪ್ಪ ಸತ್ಯ ಕಾರಣ ಎಂದು ಎಲ್ಲರೂ ಅಂದುಕೊಂಡಿದ್ದರು. ಇದನ್ನು ಸುಳ್ಳು ಮಾಡುವ ಪ್ರಯತ್ನದಲ್ಲಿ ಸತ್ಯ ಇದ್ದಾನೆ. ಈ ಕಾರಣಕ್ಕೆ ಆತ ನೇರವಾಗಿ ಭಾರ್ಗವಿಯ ಹೆಸರನ್ನು ತೆಗೆದುಕೊಂಡಿದ್ದಾನೆ. ಇದರಿಂದ ಸಿಟ್ಟಾದ ಭಾರ್ಗವಿಯು ಕೋಪಗೊಂಡಿದ್ದಾಳೆ ಮತ್ತು ಕೂಗಾಡಿದ್ದಾಳೆ.
ಈ ಮೊದಲು ಸಿಹಿಯ ಸಾವಿಗೆ ಭಾರ್ಗವಿ ಕಾರಣ ಎಂದು ಅಶೋಕ ಹೇಳಿದ್ದ, ಈಗ ಇವರ ಸಾವಿನ ಹೊಣೆಯನ್ನೂ ನನಗೆ ಕಟ್ಟಲಾಗುತ್ತಿದೆಯೇ ಎಂಬರ್ಥದಲ್ಲಿ’ ಭಾರ್ಗವಿ ಕೂಗಾಡಿದಳು. ಇದನ್ನು ಅಲ್ಲೇ ಇದ್ದ ಸೀತಾ ಕೇಳಿಕೊಂಡಿದ್ದಾಳೆ. ‘ಚಿಕ್ಕಿ, ಸಿಹಿ ಸತ್ತು ಹೋಗಿದ್ದಾಳಾ’ ಎಂದು ಶಾಕ್ನಲ್ಲಿ ಕೇಳಿದ್ದಾಳೆ ಅವಳು. ಈ ವಿಚಾರ ಸೀತಾಗೆ ತಿಳಿದರೆ ಆಕೆ ಹುಚ್ಚಿ ಆಗುವ ಸಾಧ್ಯತೆ ಇದೆ. ಈಗ ಎಲ್ಲರೂ ಆಕೆಯ ಮನ ಒಲಿಸುತ್ತಾರೆ ಎಂಬುದುನ್ನು ಕಾದು ನೋಡಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






