ಹಳಿ ತಪ್ಪಿದ ಬೆಂಗಳೂರು-ಗುವಾಹಟಿ ಕಾಮಾಕ್ಯ ಎಕ್ಸ್‌ಪ್ರೆಸ್‌: ಹಲವು ಪ್ರಯಾಣಿಕರಿಗೆ ಗಾಯ

ಮಾರ್ಚ್ 30, 2025 - 16:01
 0  12
ಹಳಿ ತಪ್ಪಿದ ಬೆಂಗಳೂರು-ಗುವಾಹಟಿ ಕಾಮಾಕ್ಯ ಎಕ್ಸ್‌ಪ್ರೆಸ್‌: ಹಲವು ಪ್ರಯಾಣಿಕರಿಗೆ ಗಾಯ

ಒಡಿಶಾದ ಚೌದ್ವಾರ ಪ್ರದೇಶದ ಮಂಗುಲಿ ರೈಲು ನಿಲ್ದಾಣದ ಬಳಿ ಬೆಂಗಳೂರು- ಕಾಮಾಖ್ಯ ಎಕ್ಸ್ಪ್ರೆಸ್ರೈಲು ಹಳಿ ತಪ್ಪಿದೆ. ಬೆಂಗಳೂರು-ಕಾಮಾಖ್ಯ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ ರೈಲು ಒಡಿಶಾದಲ್ಲಿ ಹಳಿ ತಪ್ಪಿದೆ. ರೈಲಿನ 11 ಬೋಗಿಗಳು ಹಳಿ ತಪ್ಪಿವೆ. ಯಾರಿಗೂ ಗಾಯಗಳಾಗಿಲ್ಲ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಹಿರಿಯ ಅಧಿಕಾರಿಗಳು ಶೀಘ್ರದಲ್ಲೇ ಸ್ಥಳಕ್ಕೆ ತಲುಪಲಿದ್ದಾರೆ. ಡಿಆರ್ಎಂ ಖುರ್ದಾ ರಸ್ತೆ, ಜಿಎಂ/ಇಸಿಒಆರ್ ಮತ್ತು ಇತರ ಉನ್ನತ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಬಂದಿದ್ದರು.

ಖುರ್ದಾ ರಸ್ತೆ ವಿಭಾಗದ ಈಸ್ಟ್ ಕೋಸ್ಟ್ ರೈಲ್ವೆಯ ಕಟಕ್-ನೆರ್ಗುಂಡಿ ರೈಲ್ವೆ ಸೆಕ್ಷನ್ನಲ್ಲಿ ದುರ್ಘಟನೆ ಸಂಭವಿಸಿದೆ. ಸೂಪರ್ಫಾಸ್ಟ್ ರೈಲಿನ ಸುಮಾರು 11 ಬೋಗಿಗಳು ಹಳಿತಪ್ಪಿವೆ. ಸದ್ಯದ ಮಾಹಿತಿ ಪ್ರಕಾರ, ಯಾವುದೇ ಗಾಯ ಅಥವಾ ಸಾವು ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಸ್ಥಳೀಯ ಮೂಲಗಳ ಪ್ರಕಾರ, ಕೆಲ ಪ್ರಯಾಣಿಕ ಮೃತಪಟ್ಟಿರಬಹುದು ಮತ್ತು ಹಲವರಿಗೆ ಗಾಯಗೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಡಿಆರ್ಎಂ ಖುರ್ದಾ ರಸ್ತೆ ಮತ್ತು ಜನರಲ್ ಮ್ಯಾನೇಜರ್ ಈಸ್ಟ್ ಕೋಸ್ಟ್ ರೈಲ್ವೆ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಅಪಘಾತ ಪರಿಹಾರ ಮತ್ತು ವೈದ್ಯಕೀಯ ಪರಿಹಾರ ರೈಲನ್ನು ಸಹ ಸ್ಥಳಕ್ಕೆ ಕಳುಹಿಸಲಾಗಿದೆ. ಅಪಘಾತದಲ್ಲಿ ಸಿಲುಕಿರುವ ಪ್ರಯಾಣಿಕರಿಗೆ ಅಗತ್ಯ ನೆರವು ನೀಡಲಾಗಿದೆ ಎಂದು ರೈಲ್ವೆ ತಿಳಿಸಿದೆ.

ಈಸ್ಟ್ ಕೋಸ್ಟ್ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಅಶೋಕ್ ಕುಮಾರ್ ಮಿಶ್ರಾ ಮಾತನಾಡಿ, "NDRF ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇವೆ. ಸ್ಥಳಕ್ಕೆ ಪರಿಹಾರ ರೈಲನ್ನು ಕಳುಹಿಸಲಾಗಿದೆ" ಎಂದು ಅವರು ಹೇಳಿದರು. "ನಮ್ಮ ಮುಂಚೂಣಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದಾರೆ" ಎಂದು ಅವರು ತಿಳಿಸಿದರು.

ಬೆಂಗಳೂರಿನ ಬೈಯಪ್ಪನಹಳ್ಳಿ ಬಳಿಯ ಸರ್.ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಹೊರಟ್ಟಿದ್ದ ರೈಲು ಇದಾಗಿತ್ತು. ರೈಲಿನಲ್ಲಿ ಸಿಲುಕಿಕೊಂಡಿದ್ದ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ಕಳುಹಿಸಲು ವಿಶೇಷ ರೈಲನ್ನು ಯೋಜಿಸಲಾಗಿದೆ. ಸಹಾಯವಾಣಿ ಸಂಖ್ಯೆಗಳು: ಭುವನೇಶ್ವರ್ 8455885999 ಕಟಕ್ – 8991124238, 7205149591 ಭುವನೇಶ್ವರ್ – 8114382371 ಭದ್ರಕ್ – 9437443469 ಸಂಬಲ್ಪುರ ಜೂ. – 8249999674 ಖುರ್ದಾ ರಸ್ತೆ – 6742492245 ಜಾಜ್ಪುರ್ ಕಿಯೋಂಜರ್ – 9124639558

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow