ಹುಡ್ಗೀರ್ ಕೈ ಹಿಡ್ಕೊಂಡು ಓಡಾಡೋರೆಲ್ಲಾ ನನ್ ಬಗ್ಗೆ ಮಾತಾಡೋ ಹಾಗೈತು: ಶಿಶೀರ್ ವಿರುದ್ಧ ರಜತ್ ಕಿಡಿ!

ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿರುವ ರಜತ್ ಸಖತ್ತಾತೆ ಆಟ ಆಡುತ್ತಿದ್ದು, ನಾನೊಬ್ಬ ಸ್ಟ್ರಾಂಗ್ ಸ್ಪರ್ಧಿ ಎಂದು ತೋರಿಸಿಕೊಟ್ಟಿದ್ದಾರೆ. ರಜತ್ ಕಿಶನ್ ಸ್ಟ್ರಾಂಗ್ ಆಗಿಯೇ ಇದ್ದಾರೆ. ಆಟ ಅಂತ ಬಂದ್ರೆ ಸೋಲಿಸೋದು ಕಷ್ಟ ಅಂತ ಹೇಳಬಹುದು. ಜಗಳಕ್ಕೆ ಬಂದರೂ ಸೋಲಿಸೋದು ಕಷ್ಟವೇ ಆಗುತ್ತದೆ. ಅದು ಆರಂಭದಲ್ಲಿ ಅಷ್ಟೇನೂ ಕಾಣಿಸಲಿಲ್ಲ. ಆದರೆ, ಗೋಲ್ಡ್ ಸುರೇಶ್ಗೆ ಬೈದ್ಮೇಲೆ ಎಲ್ಲವೂ ಉಲ್ಟಾ ಹೊಡೆಯಿತು…ಮನೆಮಂದಿಗೆ ರಜತ್ ಬಗ್ಗೆ ಅಭಿಪ್ರಾಯ ಬದಲಾಗಿಯೇ ಹೋಯಿತು.
ಬಿಗ್ ಬಾಸ್ ಮನೆಯಲ್ಲಿ ರಜತ್ ಕಿಶನ್ ಹಾವಳಿ ಜಾಸ್ತಿ ಆಗಿದೆ. ಇದರಿಂದ ಮನೆಯ ಮಂದಿಗೆ ಒಂದು ರೀತಿ ಕಷ್ಟನೂ ಆಗಿದೆ. ಮಾತುಗಳು ಬೇರೆ ಲೆವಲ್ಗೇನೆ ಇರುತ್ತವೆ. ಹಾಗಾಗಿಯೇ ಎಲ್ಲರೂ ಸೇರಿ ರಜತ್ ಕಿಶನ್ ಕಳಪೆ ಅಂತಲೂ ಘೋಷಣೆ ಮಾಡಿ ಆಗಿದೆ
ಶೋಭಾ ಶೆಟ್ಟಿ ಕೂಡ ನೀವು ಬಳಸಿರೋ ಪದ ಸರಿ ಇಲ್ಲ. ಅದಕ್ಕೆ ನಿಮಗೆ ಈ ಕಳಪೆ ಅಂದರು. ಹನುಮಂತ ಕೂಡ ರಜತ್ಗೆ ಕಳಪೆ ಕೊಟ್ಟರು. ಹಾಗೆ ಸಾಷ್ಟು ಸ್ಪರ್ಧಿಗಳು ಕಳಪೆ ಪಟ್ಟ ಕೊಟ್ಟೇ ಬಿಟ್ಟರು. ಆದರೆ, ಶಿಶಿರ್ ಹೇಳಿದ ಮಾತೇ ಅದ್ಯಾಕೋ ರಜತ್ಗೆ ಹರ್ಟ್ ಮಾಡಿವೆ ಅನಿಸುತ್ತಿದೆ.
ಬಿಗ್ ಬಾಸ್ ಗೆಲ್ಲೋದು ಅಷ್ಟು ಸುಲಭ ಅಲ್ವೇ ಅಲ್ಲ. ಹುಡ್ಗಿಯರ ಕೈಹಿಡಿದುಕೊಂಡು ಓಡಾಡಿದ ರೀತಿನೂ ಅಲ್ಲ. ಇದನ್ನ ಗೆಲ್ಲೋದು ಅಂತ ಕಳಪೆ ಪಟ್ಟ ಸ್ವೀಕರಿಸೋವಾಗಲೇ ರಜತ್ ಹೇಳಿದ್ದಾರೆ. ಇನ್ಮುಂದೆ ತೋರಿಸುತ್ತೇನೆ ಅಂತಲೂ ಸವಾಲು ಎಸೆದಿರೋದು ಇದೆ.
ಆದರೆ, ಶಿಶಿರ್ ಮೇಲೆ ರಜತ್ಗೆ ಏನು ಸಿಟ್ಟು ಅನ್ನೋದು ತಿಳಿಯಲೇ ಇಲ್ಲ ನೋಡಿ. ಆ ಸಿಟ್ಟು ಯಾವ ಮಟ್ಟಕ್ಕೆ ಹೋಯಿತು ಅಂದ್ರೆ ಜೈಲಿನಲ್ಲಿ ಕುಳಿತ ರಜತ್ ನೇರವಾಗಿಯೇ ಹೇಳಿಯೇ ಬಿಟ್ಟರು. ನಾನು ಹೇಳಿರೋದು ಬೇರೆ ಯಾರಿಗೋ ಅಲ್ಲ. ಅದು ಶಿಶಿರ್ಗೇನೆ ಅನ್ನೋದನ್ನ ತ್ರಿವಿಕ್ರಮ್ ಎದುರೇ ಹೇಳಿಕೊಂಡಿದ್ದಾರೆ.
ರಜತ್ ಕಿಶನ್ ವರ್ತನೆ ಅದ್ಯಾಕೋ ಓವರ್ ಅನಿಸುತ್ತಿದೆ. ಒಂದು ರೀತಿ ಅಗ್ರೇಷನ್ ಜಾಸ್ತಿನೇ ಇದೆ. ಹಾಗಾಗಿಯೇ ಮನೆ ಮಂದಿಯಲ್ಲಿ ಒಂದು ರೀತಿ ಬೇಸರ ಕೂಡ ಎದ್ದು ಕಾಣಿಸುತ್ತಿದೆ. ಇನ್ನು ಬಿಡೋದೇ ಇಲ್ಲ. ಸರಿಯಾಗಿಯೇ ಮಾಡುವೆ ಅನ್ನೋ ಚಾಲೆಂಜ್ಗಳು ಇಲ್ಲಿಯ ಮಂದಿಗೆ ಕಿರಿಕಿರಿ ಕೂಡ ಆಗಿರಬಹುದು ಅನಿಸುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






