ಹೇ ಯಾವ ಸೀಮೆ ಹೆಂಗಸು ನೀನು: ತುಕಾಲಿ ಮಾನಾಸಾಗೆ ಜಗದೀಶ್ ಹೇಳಿದ್ದು ಸರಿನಾ!? ಸುಮ್ನೆ ಬಿಡ್ತಾರಾ ಕಿಚ್ಚ!

ಅಕ್ಟೋಬರ್ 3, 2024 - 17:59
 0  28
ಹೇ ಯಾವ ಸೀಮೆ ಹೆಂಗಸು ನೀನು: ತುಕಾಲಿ ಮಾನಾಸಾಗೆ ಜಗದೀಶ್ ಹೇಳಿದ್ದು ಸರಿನಾ!? ಸುಮ್ನೆ ಬಿಡ್ತಾರಾ ಕಿಚ್ಚ!

ಬಿಗ್ ಬಾಸ್ ಸೀಸನ್ 11 ರಲ್ಲಿ ಲಾಯರ್ ಜಗದೀಶ್ ಅವರ ವರ್ತನೆ ಮಿತಿ ಮೀರಿದೆ. ಸ್ಪರ್ಧಿಗಳ ಬಗ್ಗೆ ಬಾಯಿಗೆ ಬಂದ ಹಾಗೇ ಮಾತನಾಡುತ್ತಿದ್ದಾರೆ. 

ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡುವ ಬರದಲ್ಲಿ ತುಕಾಲಿ ಸಂತು ಅವರ ಮಾನಸಗೆ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾರೆ. ನೀನು ಯಾವ ಸೀಮೆ ಹೆಂಗಸು ಅಂದಿದ್ದಾರೆ.

ಆ ಮಾತು ಕೇಳುತ್ತಿದ್ದಂತೆ ಮನೆಯಲ್ಲಿದ್ದ ಅಷ್ಟು ಜನ ಜಗದೀಶ್ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಆದರೆ ಈಗ ವಿಚಾರ ಏನಪ್ಪಾ ಅಂದ್ರೆ, ಕಳೆದ ಸೀಸನ್‌‌ನಲ್ಲಿ ಬಳೆ ವಿಚಾರಕ್ಕೆ ಕಿಚ್ಚ ಸುದೀಪ್ ಸ್ಪರ್ಧಿಗಳ ಬೆವರಿಳಿಸಿದ್ರು. ಈಗ ಸುಮ್ನೆ ಬಿಡ್ತಾರಾ ಅಂತ ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದಾರೆ.

ಸ್ವರ್ಗವಾಸಿಗಳು, ನರಕವಾಸಿಗಳು ಅಂತ ನೋಡದೇ ಎಲ್ಲರ ಬಳಿಯೂ ಕಿರಿಕ್‌ ಮಾಡಿದ್ದಾರೆ ಈ ಜಗದೀಶ್‌. ಟಾಸ್ಕ್‌ ಆಗಲಿ, ಇಲ್ಲ ಸುಮ್ನೆ ಇರಲಿ ಕಾಲು ಕೆರೆದುಕೊಂಡು ಜಗಳ ಮಾಡಿದ್ದಾರೆ.

ಕಾಮಿಡಿ ಪೀಸ್‌ ಅಂತ ಹೇಳ್ಬೇಡಿ ಅಂತ ಹೇಳಿದ್ದಕ್ಕೆ ಮಾನಸ ವಿರುದ್ಧ ಜಗಳ ಆಡಿದ್ದಾರೆ. ಅಷ್ಟೇ ಅಲ್ಲದೇ ಬಾಯಿಗೆ ಬಂದ ಹಾಗೇ ಮಾತನಾಡಿದ್ದಾರೆ. ಅದರಲ್ಲೂ ಹೆಣ್ಣುಮಕ್ಕಳ ಜೊತೆಯೂ ರಾಂಗ್ ಆಗಿ ಮಾತನಾಡಿದ್ದಾರೆ

ಮೊದಲೇ ಹೆಣ್ಣು ಮಕ್ಕಳ ವಿಚಾರಕ್ಕೆ ಹೋದ್ರೆ ಕಿಚ್ಚ ಸುದೀಪ್‌ ಸುಮ್ನೆ ಬಿಡೋದಿಲ್ಲ. ಈ ಹಿಂದೆ ಈ ರೀತಿಯ ಘಟನೆ ನಡೆದಾಗ ಕಿಚ್ಚ ಸುದೀಪ್‌ ಏನ್‌ ಮಾಡಿದ್ರು ಅಂತ ಗೊತ್ತಿದೆ. ಈಗ ಪಕ್ಕಾ ಜಗದೀಶ್‌ ಅವರಿಗೆ ಕಾದಿದೆ ಮಾರಿಹಬ್ಬ ಅಂತಿದ್ದಾರೆ ಪ್ರೇಕ್ಷಕರು.

ಪಕ್ಕಾ ಈ ವಾರ ಲಾಯರ್ ಜಗದೀಶ್‌ ಅವರನ್ನೇ ಮನೆಯಿಂದ ಕಳಿಸಬೇಕು ಅಂತ ಜನ ಹೇಳುತ್ತಿದ್ದಾರೆ. ಜಗದೀಶ್ ಆಡುತ್ತಿರುವುದನ್ನು ನೋಡಿದ್ರೆ ಪಕ್ಕಾ ಶೋ ಬಿಟ್ಟು ಅವರನ್ನು ಕಳಿಸುತ್ತಾರೆ ಅಂತಾಲೇ ಹೇಳಲಾಗ್ತಿದೆ.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow