ಹೊಸ ಜೋಶ್ ನಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟ ಹಳೇ ಸ್ಪರ್ಧಿಗಳು: ದೊಡ್ಮನೆ ಮಂದಿಗೆ ಕೊಡ್ತಾರ ಶಾಕ್!

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ತೀವ್ರವಾಗಿದ್ದು ಗೆಲ್ಲಲು ಎಲ್ಲರೂ ಅವರೇ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಭಾನುವಾರ ಬಹುತೇಕ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದ ಐಶ್ವರ್ಯ ಕೊನೆಯ ಹಂತದಲ್ಲಿ ಸೇಫ್ ಆಗಿದ್ದಾರೆ. ಈ ವಾರ ಯಾರೂ ಎಲಿಮಿನೇಷನ್ ಆಗದೇ ಇರುವುದು ಮತ್ತೊಂದು ವಿಶೇಷ, ಈ ನಡುವೆ ಬಿಗ್ ಬಾಸ್ 10ನೇ ಸೀಸನ್ ಸ್ಪರ್ಧಿಗಳು ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ಸೋಮವಾರದ ಸಂಚಿಕೆಯ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯು ರಿಲೀಸ್ ಮಾಡಿದೆ. ಹೌದು, ಈ ಪ್ರೋಮೋದಲ್ಲಿ ಬಹಳ ವಿಶೇಷವಾದ ಸಂಗತಿಗಳಿವೆ. ಅದೇನಪ್ಪ ಅಂದ್ರೆ 'ಬಿಗ್ ಬಾಸ್' ಮನೆಗೆ ಹಿಂದಿನ ಸೀಸನ್ನ ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಜೊತೆಗೆ ಕಳೆದ ವಾರ ಎಲಿಮಿನೇಷನ್ ಗೊಂದಲಕ್ಕೂ ಉತ್ತರ ಸಿಕ್ಕಿದೆ
ಕಳೆದ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಅದು ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ. ಆದರೂ ಚೈತ್ರಾ ಕುಂದಾಪುರ ಅವರನ್ನು ಎಲಿಮಿನೇಟ್ ಮಾಡಿರುವ ರೀತಿಯಲ್ಲಿ ಕರೆದುಕೊಂಡು ಬಂದು ಕನ್ಫೆಷನ್ ರೂಮ್ನಲ್ಲಿ ಕೂರಿಸಲಾಗಿತ್ತು. ಅಲ್ಲಿ ಕುಳಿತುಕೊಂಡೇ ಅವರು ಮನೆಯೊಳಗೆ ಯಾರ್ ಯಾರು ಏನೇನು ಮಾತಾಡ್ತಿದ್ದಾರೆ ಎಂಬುದನ್ನು ಕೇಳಿಸಿಕೊಳ್ಳುತ್ತಿದ್ದರು. ಅಲ್ಲಿಂದ ಅವರು ಮುಂದೆ ಎಲ್ಲಿಗೆ ಹೋದರು ಎಂಬುದು ಗೊತ್ತಾಗಿರಲಿಲ್ಲ. ಆದರೆ ಈಗ ರಿಲೀಸ್ ಆಗಿರುವ ಹೊಸ ಪ್ರೋಮೋದಲ್ಲಿ ಅದು ಗೊತ್ತಾಗಿದೆ. ಚೈತ್ರಾ ಅವರನ್ನು ಪುನಃ ಬಿಗ್ ಬಾಸ್ ಮನೆಯೊಳಗೆ ಕಳುಹಿಸಲಾಗಿದೆ
ಅಷ್ಟೇ ಅಲ್ಲದೇ ಮತ್ತೊಂದು ಇಂಟರೆಸ್ಟಿಂಗ್ ಸಂಗತಿ ಏನಪ್ಪ ಅಂದ್ರೆ, 'ಬಿಗ್ ಬಾಸ್' ಕನ್ನಡ ಸೀಸನ್ 10ರ ಸ್ಪರ್ಧಿಗಳು ಈಗ ಮನೆಯೊಳಗೆ ಕಾಲಿಟ್ಟಿದ್ದಾರೆ. ತುಕಾಲಿ ಸಂತು, ವರ್ತೂರು ಸಂತೋಷ್, ತನಿಷಾ ಕುಪ್ಪಂಡ, ಡ್ರೋನ್ ಪ್ರತಾಪ್ ಮುಂತಾದವರು ಆಗಮಿಸಿದ್ದಾರೆ.
ಹೀಗೆ ದೊಡ್ಮನೆಯಲ್ಲಿರೋ ಜೂನಿಯರ್ಗಳಿಗೆ ಹೊಸ ಟಚ್ ಕೊಡೋಕೆ ಈ ಸೀನಿಯರ್ಸ್ ಬಂದಿದ್ದಾರೆ. ಸಿಂಗರ್ ಹನುಮಂತ ಮನೆಯಲ್ಲಿ ಚೆನ್ನಾಗಿಯೇ ಆಡುತ್ತಿದ್ದಾರೆ. ಮನೆಗೆ ಬಂದ ತುಕಾಲಿ ಸಂತುಗೂ ಮಾವ ಅಂತಲೇ ಹನುಮಂತ ಕರೆದಿದ್ದಾರೆ. ಇದರಿಂದ ತುಕಾಲಿ ಕೂಡ ಸಖತ್ ಡೈಲಾಗ್ ಹೊಡೆದಿದ್ದಾರೆ. ಮಾವ ಅಂತ ಹೇಳಿ ಮಾನಸಾಳನ್ನೆ ಮನೆಗೆ ಕಳಿಸಿದಿಯಲ್ಲೋ ಅಲ್ಲೋ ಅಂತಲೇ ಜೋಕ್ ಮಾಡಿದ್ದಾರೆ.
ಮನೆಗೆ ಬಂದ ತನಿಷಾ ಕುಪ್ಪಂಡ ಜೊತೆಗೆ ಹನುಮಂತ ಡ್ಯಾನ್ಸ್ ಮಾಡಿದ್ದಾರೆ. ಚುಟು ಚುಟು ಅಂತೈತಿ ಹಾಡಿಗೇನೆ ಹನುಮಂತ ಇಲ್ಲಿ ನೃತ್ಯ ಮಾಡಿದ್ದಾರೆ. ಆದರೆ, ತನಿಷಾರಿಂದ ಸರಿಯಾಗಿ ರೆಸ್ಪಾನ್ಸ್ ಸಿಗದೇ ಇದ್ದಾಗ ಕಕ್ಕಾಬಿಕ್ಕಿ ಆಗಿರೋದು ಇದೆ.
ಡ್ರೋನ್ ಪ್ರತಾಪ್ ಮನೆಗೆ ಕಾಲಿಟ್ಟಿದ್ದಾರೆ. ಮನೆಯ ಮಂದಿ ಜೊತೆಗೆ ಮಾತು ಕೂಡ ಆಡಿದ್ದಾರೆ. ಆದರೆ, ಅದೇ ಸಮಯದಲ್ಲಿಯೇ ಪ್ರತಾಪ್ ಅಣ್ಣ ಅಂತಲೇ ಹೇಳುತ್ತಾರೆ. ಆಗ ನೀವು ನನಗೆ ಅಣ್ಣ ಅಂತ ಕರೀಲೇಬೇಡಿ ಅಂತಲೇ ಪ್ರತಾಪ್ ಹೇಳ್ತಾರೆ. ಈ ಮಾತಿನಿಂದ ಮನೆ ಇತರ ಸದಸ್ಯರು ನಕ್ಕು ನಲಿಯುತ್ತಾರೆ.
ಕಳೆದ ಸೀಸನ್ನಲ್ಲಿ ಸಂತು ಪಂತು ಸಖತ್ ಜೋಡಿ ಆಗಿದ್ದರು. ಹಾಗಾಗಿಯೇ ಅವರನ್ನ ಇಲ್ಲಿ ಮತ್ತೆ ಕರೆಸಿದ್ದಾರೆ. ಮೊದಲು ಸಂತು ಬಂದ್ರು. ಆ ಮೇಲೆ ಬೀನ್ ಬ್ಯಾಗ್ ಹಿಡಿದು ವರ್ತೂರ್ ಸಂತೋಷ್ ಕೂಡ ಆಗಮಿಸಿದರು. ಇವರ ಆ ದಿನಗಳ ಬೀನ್ ಬ್ಯಾಗ್ ಆಟ ಇಲ್ಲೂ ಮತ್ತೆ ಆಗುವ ಹಾಗೆ ಇದೆ
ನಿಮ್ಮ ಪ್ರತಿಕ್ರಿಯೆ ಏನು?






