ಅಂತಿಮಘಟ್ಟ ತಲುಪಿದ ಮಹಾಕುಂಭಮೇಳ: ಶಿವರಾತ್ರಿಗೆ 2 ಕೋಟಿ ಜನ ಬರುವ ನಿರೀಕ್ಷೆ!

ಫೆಬ್ರವರಿ 25, 2025 - 21:01
 0  11
ಅಂತಿಮಘಟ್ಟ ತಲುಪಿದ ಮಹಾಕುಂಭಮೇಳ: ಶಿವರಾತ್ರಿಗೆ 2 ಕೋಟಿ ಜನ ಬರುವ ನಿರೀಕ್ಷೆ!

ಪ್ರಯಾಗ್‌ ರಾಜ್‌ನ ಮಹಾಕುಂಭಮೇಳ ಇದೀಗ ಅಂತಿಮ ಘಟ್ಟ ತಲುಪಿದೆ. ಜ.13ರಂದು ಆರಂಭಗೊಂಡಿರುವ ಮಹಾಕುಂಭವು ಇದೀಗ ಫೆ.26ರಂದು ಅಂತ್ಯಗೊಳಲಿದ್ದು, ಈ ಬಾರಿಯ ಮಹಾಕುಂಭ ಹಲವು ವಿಶೇಷತೆಗಳಿಂದ ಗಮನ ಸೆಳೆದಿದ್ದು ಉಂಟು..

ಈಗಾಗಲೇ ಜಗತ್ತಿನ ಮೂಲೆ ಮೂಲೆಯಿಂದ ಕೋಟಿ ಕೋಟಿ ಭಕ್ತರು ಮಹಾಕುಂಭಮೇಳದಲ್ಲಿ ಭಾಗಿಯಾಗಿ ಜೀವನ ಪಾವನ ಎನಿಸಿಕೊಂಡಿದ್ದಾರೆ. ಈ ಹೊತ್ತಲ್ಲೇ ಬಾಲಿವುಡ್​ ನಟ, ನಟಿಯರು ಕೂಡ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದು, ಪುಣ್ಯಸ್ನಾನ ಮಾಡಿದ್ದಾರೆ

ಒಂದೇ ದಿನ, ಇನ್ನೊಂದೇ ದಿನ ಬಾಕಿ. 144 ವರ್ಷಗಳಿಗೊಮ್ಮೆ ಜಗತ್ತಿನಲ್ಲಿ ನಡೆಯೋ ಅದ್ಭುತ. ನೂರಾರು ಕೋಟಿ ಭಕ್ತರ ಸಂಗಮ. ತ್ರೀವೇಣಿ ಸಂಗಮದ ಗಂಗೆಯಲ್ಲಿ ಪುಣ್ಯಸ್ನಾನ. ಲಕ್ಷ ಲಕ್ಷ ನಾಗಸಾಧುಗಳ ಶಕ್ತಿ ದರ್ಶನ. ಈ ಶತಮಾನದಲ್ಲಿ ನಡೆದ ಈ ಎಲ್ಲಾ ವೈಭವಕ್ಕೆ ವಿರಾಮ ಬಿಳೋ ಕಾಲ ಬಂದಿದೆ.

ಕಳೆದ 22ದಿನಗಳಿಂದ ಪ್ರಯಾಗ್​ರಾಜ್​ನಲ್ಲಿ ಈ ಎಲ್ಲಾ ವೈಭವ ಇದೀಗ ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇನ್ನೊಂದೇ ದಿನ ಅಂದ್ರೆ, ನಾಳೆ ಶಿವರಾತ್ರಿ ಹಬ್ಬಕ್ಕೆ ಈ ಮಹಾಕುಂಭಮೇಳ ಸಂಪನ್ನಗೊಳ್ಳಲಿದೆ. ಇನ್ನು ನಾಳೆ ಶಿವರಾತ್ರಿ ಇರೋದ್ರಿಂದ 2 ಕೋಟಿಗೂ ಹೆಚ್ಚು ಭಕ್ತಾದಿಗಳು ದೇಶದ ಮೂಲೆ ಮೂಲೆಯಿಂದ ಆಗಮಿಸುವ ನಿರೀಕ್ಷೆ ಇದೆ.

ಇನ್ನು, ಈಗಾಗಲೇ ಈ ಮಹಾಕುಂಭಮೇಳದಲ್ಲಿ ಜಗತ್ತಿನ ಮೂಲೆ ಮೂಲೆಯಿಂದ ಬಂದ 63 ಕೋಟಿಗೂ ಅಧಿಕ ಜನ ಭಾಗಿಯಾಗಿದ್ದಾರೆ ಅನ್ನೋ ಮಾಹಿತಿ ಇದೆ.. ಈ ಹೊತ್ತಲ್ಲೇ ಬಾಲಿವುಡ್​ ನಟ ನಟಿಯರು ಕೂಡ ಮಹಾಕುಂಭಮೇಳದಲ್ಲಿ ಭಾಗಿಯಾಗಿ ತ್ರೀವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ..

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow