ಅನಾರೋಗ್ಯದ ಮಧ್ಯೆಯೂ ಸರಿಗಮಪ ವೇದಿಕೆಗೆ ಬಂದ ಶಿವಣ್ಣ! ಇವರ ಎನರ್ಜಿ ನೆಕ್ಸ್ಟ್ ಲೆವಲ್ ಗುರು!

ಸರಳತೆಯ ಕಿಂಗ್ ಅಂದ್ರೆ ಅದು ನಮ್ಮ ಶಿವಣ್ಣ ಕಂಡ್ರಿ. ಅಭಿಮಾನಿಗಳನ್ನು ಸ್ನೇಹಿತರಂತೆ ಕಾಣುವ ಏಕೈಕ ನಟ. ಕ್ಯಾನ್ಸರ್ನಿಂದ ಬಳಲುತ್ತಿದ್ದ ಶಿವಣ್ಣ ಇತ್ತೀಚಿಗಷ್ಟೇ ವಿದೇಶದಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಅವರ ಆರೋಗ್ಯಕ್ಕೆ ಸಹಸ್ರಾರು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಎಲ್ಲರ ಹಾರೈಕೆಯಿಂದ ಶಿವಣ್ಣ ಚೇತರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣ ಸ್ನೇಹಿತರು, ಬಂಧು ಬಾಂಧವರನ್ನ ಭೇಟಿಯಾಗಿದ್ದಾರೆ. ರಾಜ್ಯದ ವಿವಿಧೆಡೆ ಪ್ರವಾಸ ಕೂಡ ಮಾಡುತ್ತಿದ್ದಾರೆ. ಅದಕ್ಕೆ ಹೇಳೋದು ಇವರ ಎನರ್ಜಿಗೆ ಇವರೇ ಸರಿಸಾಟಿ ಅಂತ.
ಇದರ ಮಧ್ಯೆ ಶಿವಣ್ಣ ಜೀ ಕನ್ನಡ ವಾಹಿನಿಯ ಸರಿಗಮಪ ವೇದಿಕೆಗೆ ಸರ್ಪ್ರೈಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದ್ಯಾವುದೂ ಮೊದಲೇ ಪ್ಲ್ಯಾನ್ ಮಾಡಿದಲ್ಲ. ಜನವರಿ 25ನೇ ತಾರೀಖು ನಿರೂಪಕಿ ಅನುಶ್ರೀ ಅವರ ಬರ್ತ್ ಡೇ ಇತ್ತು.
ಪ್ರತಿ ವರ್ಷದ ವಾಡಿಕೆಯಂತೆ ಕಾರ್ಯಕ್ರಮದಲ್ಲಿ ಅನುಶ್ರೀ ಅವರಿಗೆ ಸ್ಪೆಷಲ್ ಗಿಫ್ಟ್, ಸರ್ಪ್ರೈಸ್ಗಳನ್ನ ಚಾನೆಲ್ ನೀಡುತ್ತಾ ಬಂದಿದೆ. ಈ ವರ್ಷ ಕೂಡ ಶಿವಣ್ಣ ಅವರಿಗೆ ಬರ್ತ್ ಡೇ ವಿಶ್ಗಾಗಿ ವಿಡಿಯೋ ಕಾಲ್ ಮಾಡಲು ಚಾನೆಲ್ ಕೇಳಿತ್ತಂತೆ. ಇದಕ್ಕೆ ಶಿವಣ್ಣ ವಿಡಿಯೋ ಕಾಲ್ ಯಾಕೆ? ನಾನೇ ಬರ್ತಿನಿ ಅಂತ. ಕಾರ್ಯಕ್ರಮದ ಮಧ್ಯದಲ್ಲೇ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿರೋ ಯಾರಿಗೂ ಶಿವಣ್ಣ ಬರೋದು ಗೊತ್ತಿರಲಿಲ್ಲ ಎನ್ನಲಾಗಿದೆ.
ಒಂದು ಕ್ಷಣ ಪ್ರೀತಿಯ ನಟನನ್ನು ಅಭಿಮಾನಿಗಳು ಟಿವಿಯಲ್ಲಿ ಕಣ್ತುಂಬಿಕೊಂಡರು.
ನಿಮ್ಮ ಪ್ರತಿಕ್ರಿಯೆ ಏನು?






