ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ: ಸಚಿವ ಆರ್ಬಿ ತಿಮ್ಮಾಪುರ ಆಪ್ತನ ಮೇಲೆ ಗುಮಾನಿ!

ಬೆಂಗಳೂರು:- ಆರ್ಬಿ ತಿಮ್ಮಾಪುರ ಆಪ್ತನಿಂದ ವಂಚನೆ ಆರೋಪ ಕೇಳಿ ಬಂದಿದ್ದು, ರಾಜ್ಯಪಾಲರಿಗೆ ಅಬಕಾರಿ ಇಲಾಖೆಯ ಅಧಿಕಾರಿಯೇ ದೂರು ನೀಡಿದ್ದು ಎನ್ನಲಾಗಿದೆ.
ಅಬಕಾರಿ ಸಚಿವರ ಆಪ್ತನಿಗೆ ಹಣ ಕೊಟ್ಟು ಮೋಸ ಹೋಗಿದ್ದರಂತೆ. ಹಾಗಾಗಿ ವಿವರವಾದ ಮಾಹಿತಿಯನ್ನು ರಾಜ್ಯಪಾಲರಿಗೆ ಮೇಲ್ ಮಾಡುವ ಮೂಲಕ ದೂರು ಸಲ್ಲಿಸಿದರೆ, ಇತ್ತ ಅಬಕಾರಿ ಸಚಿವರ ಆಪ್ತ ಅಂತ ಹೇಳಿಕೊಂಡು ವ್ಯಕ್ತಿಯೊಬ್ಬ ಮದ್ಯ ಮಾರಾಟಗಾರರ ಬಳಿ ಕೋಟ್ಯಂತರ ರೂಪಾಯಿ ತೆಗೆದುಕೊಂಡು ವಂಚಿಸಿರುವ ಆರೋಪ ಕೂಡ ಕೇಳಿ ಬಂದಿದೆ.
ಸಚಿವ ಆರ್ಬಿ ತಿಮ್ಮಾಪುರ ಆಪ್ತ ಜೀವನ್ ಶೆಟ್ಟಿ ವಿರುದ್ಧ ಬಾರ್ ಮಾಲೀಕರು ಹೊಸ ಆರೋಪ ಮಾಡಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಇಷ್ಟೊಂದು ಅಕ್ರಮ ನಡೆಯಲು ಜೀವನ್ ಶೆಟ್ಟಿಯೇ ಕಾರಣ ಎಂದು ಆರೋಪಿಸಲಾಗಿದೆ. ಈತ ಸಿಎಲ್- 2 ಲೈಸೆನ್ಸ್ ಕೊಡಿಸುತ್ತೇನೆ ಎಂದು ಬಾರ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾನಂತೆ. ಆರ್ಬಿ ತಿಮ್ಮಾಪುರ ಹಿಂದೆ ಅಬಕಾರಿ ಸಚಿವರಾಗಿದ್ದನಿಂದಲೂ ಅವರ ಆಪ್ತನಾಗಿ ಜೀವನ್ ಶೆಟ್ಟಿ ಗುರುತಿಸಿಕೊಂಡಿದ್ದ ಎನ್ನಲಾಗಿದೆ.
ಅಂದಿನಿಂದಲೂ ಬಾರ್ ಮಾಲೀಕರಿಗೆ ಸಿಎಲ್- 2 ಲೈಸೆನ್ಸ್ ಕೊಡಿಸುತ್ತೇನೆ ಎಂದು ನೂರಾರು ಮದ್ಯ ಮಾರಾಟಗಾರರ ಬಳಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದಾನೆ ಎನ್ನಲಾಗಿದೆ
ಜೀವನ್ ಶೆಟ್ಟಿ ಮದ್ಯ ಮಾರಾಟಗಾರರಿಗೆ ಮಾತ್ರವಲ್ಲ, ಅಬಕಾರಿ ಇಲಾಖೆಯ ಅನೇಕ ಅಧಿಕಾರಿಗಳಿಗೇ ವರ್ಗಾವಣೆ, ಬಡ್ತಿ ಕೊಡಿಸುತ್ತೇನೆ ಎಂದು ಒಂದೇ ಪೋಸ್ಟ್ಗೆ ನಾಲ್ಕೈದು ಅಧಿಕಾರಿಗಳಿಂದ ಹಣ ಪಡೆದು ಮೋಸ ಮಾಡಿದ್ದಾನೆ ಎಂಬ ಆರೋಪವಿದೆ.
ನಿಮ್ಮ ಪ್ರತಿಕ್ರಿಯೆ ಏನು?






