‘ಕರ್ಣ’ ಸೀರಿಯಲ್ ಯಾವಾಗಿನಿಂದ ಶುರು? ಪುಟ್ಟಕ್ಕನ ಮಕ್ಕಳು’ ಅಥವಾ ‘ಸೀತಾ ರಾಮ’ ಧಾರಾವಾಹಿ ಮುಕ್ತಾಯವಾಗುತ್ತಾ..?

ಎಪ್ರಿಲ್ 2, 2025 - 17:59
 0  12
‘ಕರ್ಣ’ ಸೀರಿಯಲ್ ಯಾವಾಗಿನಿಂದ ಶುರು? ಪುಟ್ಟಕ್ಕನ ಮಕ್ಕಳು’ ಅಥವಾ ‘ಸೀತಾ ರಾಮ’ ಧಾರಾವಾಹಿ ಮುಕ್ತಾಯವಾಗುತ್ತಾ..?

‘ಕನ್ನಡತಿ’ ಧಾರಾವಾಹಿ ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡಿತ್ತು. ಈ ಧಾರಾವಾಹಿಯಲ್ಲಿ ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಅವರು ಒಟ್ಟಾಗಿ ನಟಿಸಿ ಎಲ್ಲರ ಗಮನ ಸೆಳೆದರು. ಈ ಧಾರಾವಾಹಿ ಪೂರ್ಣಗೊಂಡು ಹಲವು ಸಮಯ ಕಳೆದಿದೆ. ಈಗ ಕಿರಣ್ ರಾಜ್ ಅವರು ‘ಕರ್ಣ’ ಧಾರಾವಾಹಿಯಲ್ಲಿ ನಟಿಸುತ್ತಾ ಇದ್ದಾರೆ. ಈ ಧಾರಾವಾಹಿಗೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಅನೇಕರು ರಂಜನಿ ಅವರೇ ನಾಯಕಿ ಆಗಲಿ ಎಂದು ಕೋರಿದ್ದಾರೆ.

ಇದರ ಬೆನ್ನಲ್ಲೇ ‘ಕರ್ಣ’ ಧಾರಾವಾಹಿ ಯಾವಾಗ ಪ್ರಸಾರ ಕಾಣಲಿದೆ ಎಂಬ ಪ್ರಶ್ನೆ ಮೂಡಿದೆ. ನಿತ್ಯವೂ ರಾತ್ರಿ 8 ಗಂಟೆಗೆ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರೇಕ್ಷಕರ ಸೂರೆಗೊಂಡಿದೆ. ಈ ಕಾರಣಕ್ಕೆ ಪ್ರತಿ ವಾರದ ಟಿಆರ್​ಪಿಯಲ್ಲಿ ಈ ಧಾರಾವಾಹಿಗೆ ಟಾಪ್ 3ನಲ್ಲಿ ಒಂದಲ್ಲ ಒಂದು ಸ್ಥಾನ ಸಿಕ್ಕೇ ಸಿಗುತ್ತದೆ. ಹೀಗಿರುವಾಗ ಧಾರಾವಾಹಿಯನ್ನು ಕೊನೆ ಮಾಡುವ ಸಾಹಸಕ್ಕೆ ಯಾರೂ ಹೋಗುವುದಿಲ್ಲ. ಹೀಗಾಗಿ, ಇದರ ಸಮಯದಲ್ಲಿ ಬದಲಾವಣೆ ಆಗುತ್ತಿದೆಯೇ ಎನ್ನುವ ಪ್ರಶ್ನೆ ಮೂಡಿದೆ.

‘ಲಕ್ಷ್ಮೀ ನಿವಾಸ’ ಧಾರಾವಾಹಿಯು ಈಗ ಒಂದು ಗಂಟೆ ಪ್ರಸಾರ ಕಾಣುತ್ತಿದೆ. ಈಗ ಇದನ್ನು ಅರ್ಧ ಗಂಟೆಗೆ ಇಳಿಸಲು ಪ್ಲ್ಯಾನ್ ನಡೆದಿದೆ ಎನ್ನಲಾಗಿದೆ. ಹೀಗಾಗಿ 8 ಗಂಟೆಗೆ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಪ್ರಸಾರ ಕಂಡರೆ, ಇನ್ನರ್ಧ ಗಂಟೆಗೆ ‘ಕರ್ಣ’ ಧಾರಾವಾಹಿ ಪ್ರಸಾರ ಕಾಣಲಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆ ಆಗುವ ಸಾಧ್ಯತೆ ಇದೆ. ಕಿರಣ್ ರಾಜ್ ಧಾರಾವಾಹಿಗೆ ನಾಯಕಿ ಯಾರು ಎಂಬುದು ಕೂಡ ಇನ್ನೂ ರಿವೀಲ್ ಆಗಿಲ್ಲ.

ಇದರ ಬೆನ್ನಲ್ಲೇ ಒಂದ್ಕಾಲದಲ್ಲಿ ಉಮಾಶ್ರೀ ಅಭಿನಯದ ಆರೂರು ಜಗದೀಶ್‌ ಅವರ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ ಟಿಆರ್‌ಪಿ ಪಟ್ಟಿಯಲ್ಲಿ ನಂಬರ್‌ 1 ಸ್ಥಾನ ಪಡೆಯುತ್ತಿತ್ತು. ಟಿಆರ್‌ಪಿಯಲ್ಲಿ ದಾಖಲೆ ಮೇಲೆ ದಾಖಲೆ ಬರೆದ ಧಾರಾವಾಹಿ ‘ಪುಟ್ಟಕ್ಕನ ಮಕ್ಕಳು’. ಆದರೆ ಪ್ರಸಾರ ಸಮಯ ಬದಲಾದ್ಮೇಲಂತೂ ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ ಟಿಆರ್‌ಪಿಯಲ್ಲಿ ಕುಸಿತ ಕಾಣುತ್ತಿದೆ.

ಸ್ನೇಹಾ ಪಾತ್ರಧಾರಿ ಸಂಜನಾ ಬುರ್ಲಿ ಸೀರಿಯಲ್ ಬಿಟ್ಮೇಲೆ ‘ಪುಟ್ಟಕ್ಕನ ಮಕ್ಕಳು’ ಕಥೆ ಎತ್ತೆತ್ತಲೋ ಸಾಗಿದೆ. ಹೀಗಾಗಿ, ‘ಪುಟ್ಟಕ್ಕನ ಮಕ್ಕಳು’ ಸೀರಿಯಲ್‌ ಎಂಡ್ ಆಗಬಹುದು ಅಂತ ವೀಕ್ಷಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ಹಾಗಾದ್ರೆ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಕಥೆಗೆ ಫುಲ್ ಸ್ಟಾಪ್ ಬೀಳುತ್ತಾ?

ಬಹುನಿರೀಕ್ಷೆಯೊಂದಿಗೆ ಆರಂಭವಾದ ಧಾರಾವಾಹಿ ‘ಸೀತಾ ರಾಮ’. ವೈಷ್ಣವಿ ಗೌಡ ಹಾಗೂ ಗಗನ್ ಚಿನ್ನಪ್ಪ ಅಭಿನಯದ ಧಾರಾವಾಹಿ ‘ಸೀತಾ ರಾಮ’. ಆದರೆ, ಬರ್ತಾ ಬರ್ತಾ ಯಾಕೋ ‘ಸೀತಾ ರಾಮ’ ನೀರಸ ಎನಿಸುತ್ತಿದೆ. ಟಿಆರ್‌ಪಿಯಲ್ಲೂ ‘ಸೀತಾ ರಾಮ’ ಕಮಾಲ್ ಮಾಡುತ್ತಿಲ್ಲ. ಒಳ್ಳೆ ಸ್ಲಾಟ್‌ ಸಿಕ್ಕಿದ್ದರೂ, ಜನರ ಗಮನ ಸೆಳೆಯುವಲ್ಲಿ ‘ಸೀತಾ ರಾಮ’ ಹಿಂದೆ ಬೀಳುತ್ತಿದೆ. ಹೀಗಾಗಿ, ‘ಸೀತಾ ರಾಮ’ ಸೀರಿಯಲ್‌ ಎಂಡ್ ಆದರೂ ಅಚ್ಚರಿ ಇಲ್ಲ.

ಕಿರಣ್ ರಾಜ್ ಅವರು ಕಲರ್ಸ್ ಕನ್ನಡದ ‘ಕನ್ನಡತಿ’ ಧಾರಾವಾಹಿ ಮೂಲಕ ಫೇಮಸ್ ಆದರು. ಆ ಬಳಿಕ ಅವರು ಹಿರಿತೆರೆಯಲ್ಲಿ ಬ್ಯುಸಿ ಆದರು. ಕೆಲವು ಕನ್ನಡದ ಸಿನಿಮಾಗಳನ್ನು ಮಾಡಿದರು. ಈಗ ಅವರು ಮತ್ತೆ ಕಿರುತೆರೆಯಲ್ಲಿ ಬ್ಯುಸಿ ಆಗುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಅವರು ವೈದ್ಯನ ಪಾತ್ರ ಮಾಡುತ್ತಿದ್ದಾರೆ. ಕಥಾ ನಾಯಕ ಕರ್ಣ ದೊಡ್ಡ ಗೈನಾಕಾಲಜಿಸ್ಟ್ ಆದರೂ, ಕುಟುಂಬಕ್ಕಾಗಿ ಸಾಕಷ್ಟು ಹೋರಾಡುತ್ತಾನೆ.  ಈ ರೀತಿಯಲ್ಲಿ ಕಥೆ ಮೂಡಿ ಬಂದಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow