ದೀಪ ಬೆಳಗಿಸುವಾಗ ಎರಡು ಬತ್ತಿಯನ್ನೇ ಹಾಕಬೇಕು: ಯಾಕೆ ಗೊತ್ತಾ!?

ದೇವರಿಗೆ ದೀಪ ಹಚ್ಚುವುದರ ಹಿಂದೆ ಹಲವಾರು ಅರ್ಥಗಳಿದೆ. ಮನೆಯಲ್ಲಿ ಕತ್ತಲೆಯನ್ನು ಓಡಿಸಿ ಬೆಳಕನ್ನು ಮೂಡಿಸುತ್ತದೆ ಎಂದೂ ಸಹ ಹೇಳಲಾಗುತ್ತದೆ. ದೇವರ ಮನೆಯಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ದೀಪ ಹಚ್ಚಲಾಗುತ್ತದೆ. ಆದರೆ ದೀಪವನ್ನು ಹಚ್ಚುವಾಗ ನಾವು ಕೆಲ ನಿಯಮಗಳನ್ನು ಫಾಲೋ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಜೀವನದಲ್ಲಿ ಸಮಸ್ಯೆಗಳು ಬರಬಹುದು ಎನ್ನಲಾಗುತ್ತದೆ
ದೀಪ ಜ್ಞಾನದ ಸಂಕೇತ, ಕತ್ತಲನ್ನು ಹೋಗಲಾಡಿಸುವ ದೀಪದ ಬೆಳಕು ನಮ್ಮಲ್ಲಿ ಹಾಗೂ ನಮ್ಮ ಬದುಕಿನಲ್ಲಿರುವ ಅಂದಕಾರವನ್ನು ಹೋಗಲಾಡಿಸುತ್ತೆ ಎಂಬ ನಂಬಿಕೆ. ಯಾವುದೇ ಶುಭ ಕಾರ್ಯ ಮಾಡುವ ಮುನ್ನ ದೇವರಿಗೆ ದೀಪ ಹಚ್ಚುತ್ತೇವೆ. ಮನೆಯಲ್ಲಿ ಬೆಳಗ್ಗೆ ದೀಪ ಬೆಳಗ್ಗಿ ಇತರ ಕೆಲಸದತ್ತ ಗಮನ ನೀಡುತ್ತೇವೆ. ದೇವರಿಗೆ ದೀಪ ಹಚ್ಚುವುದು ಹಿಂದೂ ಧರ್ಮದ ಸಂಪ್ರದಾಯ.
ನಾವು ದೇವರಿಗೆ ದೀಪ ಹಚ್ಚುವಾಗ ಎಷ್ಟು ದೀಪ ಹಚ್ಚಬೇಕು, ಎಷ್ಟು ಬತ್ತಿ ಹಾಕಬೇಕು ಎಂಬ ಪ್ರಶ್ನೆಯನ್ನು ಅನೇಕರು ಕೇಳುತ್ತಾ ಇರುತ್ತರೆ, ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ:
ನೀವು ಹೆಚ್ಚು ದೀಪ ಬೆಳಗಿದಷ್ಟೂ ಮನೆ ಮತ್ತಷ್ಟು ಬೆಳಕಿನಿಂದ ಕೂಡಿರುತ್ತದೆ. ದೀಪಾವಳಿಯಲ್ಲಿ ಮನೆಯಲ್ಲಿ ತುಂಬಾ ದೀಪ ಹಚ್ಚುತ್ತೇವೆ. ಆದರೆ ಸಾಮಾನ್ಯವಾಗಿ ಒಂದು ಅಥವಾ ಎರಡು ದೀಪ ಬೆಳಗಲಾಗುವುದು. ಹಿಂದೂ ಧರ್ಮದಲ್ಲಿ ತ್ರಿಮೂರ್ತಿಗಳೆಂದು ಶಿವ, ವಿಷ್ಣು, ಬ್ರಹ್ಮನನ್ನು ಪೂಜಿಸಲಾಗುವುದು. ಅದೇ ರೀತಿ ತ್ರಿಶಕ್ತಿಗಳಾಗಿ ದುರ್ಗೆ, ಲಕ್ಷ್ಮಿ, ಸರಸ್ವತಿಯನ್ನು ಪೂಜಿಸಲಾಗುವುದು. ಆದ್ದರಿಂದ ಮನೆಯಲ್ಲಿ ಸೂರ್ಯ ಹುಟ್ಟುವ ಮುನ್ನ ಒಂದು ದೀಪವನ್ನು ಬೆಳಗುವುದು ಒಳ್ಳೆಯದು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುವುದು, ಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ.
ಮನೆಯಲ್ಲಿ ಒಂದು ಅಥವಾ ಎರಡು ದೀಪವನ್ನು ಹಚ್ಚಲೇಬೇಕು, ಇನ್ನು ದೀಪಕ್ಕೆ ಎರಡು ಬತ್ತಿ ಹಾಕಿ, ನಂತರ ದೀಪ ಹಚ್ಚಬೇಕು.
ದೇವರ ದೀಪವನ್ನು ಯಾವ ದಿಕ್ಕಿನಲ್ಲಿ ಬೆಳಗಬೇಕು?
ದೇವರ ದೀಪವನ್ನು ಪೂರ್ವ ಅಥವಾ ಪಶ್ಚಿಮ ದಿಕ್ಕಿಮ ಕಡೆಗೆ ಬೆಳಗಬೇಕು.
ಜ್ಯೋತಿಷ್ಯ ಪ್ರಕಾರ 4-6 ದೇವತಾ ಕಾಲ, 6-11 ಮಾನವ ಕಾಲ, 11ರಿಂದ 4ರವರೆಗೆ ಪಿತೃ ಸಂಚಾರ ಕಾಲ, ನಂತರ ಅಸುರ ಕಾಲ. ದೇವರ ದೀಪವನ್ನು ದೇವಕಾಲದಲ್ಲಿ ಅಂದರೆ 6 ಗಂಟೆಯ ಒಳಗಡೆ ಹಚ್ಚುವುದು ಒಳ್ಳೆಯದು, ಅದು ಎಲ್ಲರಿಗೆ ಸಾಧ್ಯವಾಗುವುದಿಲ್ಲ, ಆದ್ದರಿಂದ ನಿತ್ಯ ಜೀವನದಲ್ಲಿ ಮಾನವ ಕಾಲದಲ್ಲಿ ದೀಪ ಹಚ್ಚಲಾಗುವುದು. ಇನ್ನು ಅಸುರ ಕಾಲದಲ್ಲಿ ಋಣಾತ್ಮಕ ಶಕ್ತಿಯನ್ನು ತಡೆಯಲು 5 ಗಂಟೆಯ ನಂತರ ದೀಪವನ್ನು ಹಚ್ಚಲಾಗುವುದು. ಬೆಳಗ್ಗೆ ಎದ್ದಾಗ ಮೆದುಳು ಫ್ರೆಷ್ ಆಗಿರುತ್ತೆ, ಹೊಟ್ಟೆ ಖಾಲಿರುತ್ತೆ, ಸ್ನಾನವಾದ ಬಳಿಕ ಬೆಳಗ್ಗೆ ದೀಪ ಹಚ್ಚಿದರೆ ಒಳ್ಳೆಯದು.
ನಿಮ್ಮ ಪ್ರತಿಕ್ರಿಯೆ ಏನು?






