ಫೈನಲ್ ಕಂಟಸ್ಟಂಟ್ ಎಂದುಕೊಂಡಿದ್ದ ಸ್ಪರ್ಧಿ ಔಟ್! ಶಿಶಿರ್ ಎಡವಿದ್ದು ಎಲ್ಲಿ?

ಬಿಗ್ ಬಾಸ್ ಕನ್ನಡ ಸೀಸನ್ 11 ಈ ವಾರ ಶಿಶಿರ್ ಶಾಸ್ತ್ರಿ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಈ ವಿಷಯ ತಿಳಿದು ಅವರ ಅಭಿಮಾನಿಗಳು ಬೇಸರ ಹೊರ ಹಾಕಿದ್ದಾರೆ. ಟ್ರೋಫಿ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದ ಶಿಶಿರ್ ಅವರಿಗೆ ಆಘಾತ ಆಗಿದೆ. ಶಿಶಿರ್ ಎಲಿಮಿನೇಟ್ ಆಗಿದ್ದಕ್ಕೆ ಖಂಡಿತವಾಗಿಯೂ ಅವರ ಅಭಿಮಾನಿಗಳಿಗೆ ಬೇಸರವಾಗಿದೆ.
ಶಿಶಿರ್ ಜೊತೆ ಭವ್ಯಾ ಗೌಡ ಕೂಡ ಡೇಂಜರ್ ಝೋನ್ ತಲುಪಿದ್ದರು. ಇಬ್ಬರಲ್ಲಿ ಯಾರು ಎಲಿಮಿನೇಟ್ ಆಗಬಹುದು ಎಂಬ ಕೌತುಕ ಮೂಡಿತ್ತು. ಶಿಶಿರ್ ಅವರಿಗೆ ಪ್ರೇಕ್ಷಕರಿಂದ ಕಡಿಮೆ ವೋಟ್ ಬಂದಿದ್ದರಿಂದ ಅವರು ದೊಡ್ಮನೆಯಿಂದ ಹೊರಗೆ ಬರಬೇಕಾಯಿತು.
ದೊಡ್ಮನೆಯಿಂದ ಹೊರಗೆ ಬರುವುದಕ್ಕೂ ಮುನ್ನ ಶಿಶಿರ್ ಅವರು ಎಲ್ಲರನ್ನು ಉದ್ದೇಶಿಸಿ ಮಾತನಾಡಿದರು. ಆ ಮನೆಯಲ್ಲಿ ಹುಟ್ಟಿಕೊಂಡ ಕೆಲವು ಸಂಬಂಧಗಳ ಬಗ್ಗೆ ಶಿಶಿರ್ ಸ್ಪಷ್ಟನೆ ನೀಡಿದರು. ಉಗ್ರಂ ಮಂಜು, ಚೈತ್ರಾ ಕುಂದಾಪುರ, ಐಶ್ವರ್ಯಾ ಸಿಂಧೋಗಿ ಬಗ್ಗೆ ಅವರು ಕೆಲವು ಮಾತುಗಳನ್ನು ಹೇಳಿ ಮುಖ್ಯದ್ವಾರದ ಮೂಲಕ ಹೊರನಡೆದರು.
ಬಿಗ್ ಬಾಸ್ ಸೀಸನ್ 11ರ ಆಟ ವಾರದಿಂದ ವಾರಕ್ಕೆ ಜೋರಾಗಿದೆ. ಬಿಗ್ ಬಾಸ್ ಬಿಗೆಸ್ಟ್ ರಿಯಾಲಿಟಿ ಶೋ ಆಗಿದ್ದು, ಅಪಾರ ಪ್ರೇಕ್ಷಕ ಬಳಗವನ್ನು ಹೊಂದಿದೆ. ವಾರ ಕಳೆದು ವೀಕೆಂಟ್ ಎಪಿಸೋಡ್ ನೋಡಲು ಜನ ಕಾಯುತ್ತಿರುತ್ತಾರೆ. ಕಿಚ್ಚ ಸುದೀಪ್ ಖಡಕ್ ಮಾತು, ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಳ್ಳೋದನ್ನು ನೋಡಲು ಫ್ಯಾನ್ಸ್ ಕಾಯ್ತಿರುತ್ತಾರೆ. ಜೊತೆಗೆ ಈ ವಾರ ದೊಡ್ಮನೆಯಿಂದ ಹೊರಗೆ ಹೋಗುವವರು ಯಾರು ಎನ್ನುವ ಕುತೂಹಲ ಪ್ರೇಕ್ಷಕರಲ್ಲಿರುತ್ತೆ. ಈ ವಾರ ಬಿಗ್ ಬಾಸ್ ಮನೆಯಿಂದ ಶಿಶಿರ್ ಔಟ್ ಆಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






