ಬಿಗ್ ಬಾಸ್ ಗೆ ಕೌಂಟ್ ಡೌನ್: ವಿದಾಯ ಹೇಳಲು ಸಜ್ಜಾದ ಮೂರು ಜನಪ್ರಿಯ ಧಾರವಾಹಿಗಳು!

ಬಿಗ್ ಬಾಸ್ ಸೀಸನ್ 11 ರ ಸೀಸನ್ ಗೆ ಕ್ಷಣಗಣನೆ ಶುರುವಾಗಿದ್ದು, ಮೂರು ದಾರಾವಾಹಿಗಳು ಮುಕ್ತಾಯ ಹಂತ ತಲುಪಲಿದೆ. ಕಲರ್ಸ್ ಕನ್ನಡದ ಟಾಪ್ 3 ಧಾರಾವಾಹಿಗಳ ಕೊನೆ ದಿನದ ಶೂಟಿಂಗ್ ನಡೆಯುತ್ತಿವೆ.
ಇನ್ನೂ 3 ದಿನಗಳಲ್ಲಿ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಆಗಮನವಾಗಲಿದೆ. ಹೀಗಾಗಿ ಕಲರ್ಸ್ ಕನ್ನಡದ ಟಾಪ್ 3 ಧಾರಾವಾಹಿಗಳ ಕೊನೆ ದಿನದ ಶೂಟಿಂಗ್ ನಡೆಯುತ್ತಿವೆ. ಅದರಲ್ಲೂ ಅಂತರಪಟ ಧಾರಾವಾಹಿ ಮುಕ್ತಾಯವಾಗ್ತಿದೆ. ಒಂದುವರೆ ವರ್ಷದ ಜರ್ನಿಗೆ ವಿದಾಯ ಹೇಳ್ತಿದೆ ಸೀರಿಯಲ್ ತಂಡ. ಈಗಾಗಲೇ ಅಂತರಪಟ ಸೀರಿಯಲ್ ಶೂಟಿಂಗ್ ಮುಕ್ತಾಯವಾಗಿದ್ದು, ಈ ವಾರ ಕೊನೆ ಸಂಚಿಕೆ ಪ್ರಸಾರವಾಗಲಿದೆ.
ಆರಾಧನಾ ಪಾತ್ರ ಮಾಡ್ತಿರೋ ನಟಿ ತನ್ವಿ ಬಾಲರಾಜ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಸುಂದರವಾದ ನೆನಪುಗಳನ್ನ ಕಟ್ಟಿಕೊಟ್ಟಿದ್ದಕ್ಕೆ ಸಹ ಕಲಾವಿದರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನೂ ಅಂತರಪಟ ಮುಕ್ತಾಯಕ್ಕೆ ಕಾರಣ ಬಿಗ್ಬಾಸ್ ಸೀಸನ್ 11.
ಇದೇ ಸೆಪ್ಟಂಬರ್ 29ರಿಂದ ಬಿಗ್ಬಾಸ್ ಸೀಸನ್ 11 ಶುರುವಾಗ್ತಿದೆ. ಹೀಗಾಗಿ ರೇಟಿಂಗ್ ಕಡಿಮೆ ಇರೋ ಧಾರಾವಾಹಿಗಳನ್ನ ಮುಕ್ತಾಯ ಮಾಡಲಾಗ್ತಿದೆ. ಈ ಲಿಸ್ಟ್ನಲ್ಲಿ ನನ್ನ ದೇವ್ರು, ಕೆಂಡಸಂಪಿಗೆ ಕೂಡ ಸೇರಿಕೊಂಡಿವೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಸ್ವಪ್ನಾ ಕೃಷ್ಣ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದ ಸತ್ಯ ಹಾಗೂ ಅಂತರಪಟ ಎರಡು ಸೀರಿಯಲ್ ಮುಕ್ತಾಯವಾಗಿದ್ದು, ಮುಂದಿನ ಪ್ರಾಜೆಕ್ಟ್ ಬಗ್ಗೆ ಸಹಜವಾಗಿಯೇ ನಿರೀಕ್ಷೆ ಇದೆ.
ಈ ವಾರ ರಾಜಾರಾಣಿ ಗ್ರ್ಯಾಂಡ್ ಫಿನಾಲೆ ಇದ್ದು, ಇನ್ನೇರಡು ಸೀರಿಯಲ್ ಮುಕ್ತಾಯವಾಗೋದಿದೆ. ಬಿಗ್ಬಾಸ್ ಹಿನ್ನೆಲೆಯಲ್ಲಿ ಇನ್ನು ಏನೇನೆಲ್ಲಾ ಬದಲಾವಣೆ ಆಗಲಿದೆ ಅಂತ ಕಾದು ನೋಡಬೇಕಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






