ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಲವ್ ಸ್ಟೋರಿ: ತುಕಾಲಿ ಮಾನಸ ಹೇಳಿದ್ದು ನಿಜಾನಾ!?

ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಲವ್ ಸ್ಟೋರಿ ಒಂದು ಹುಟ್ಟಿಕೊಂಡಿದ್ದು, ತುಕಾಲಿ ಮಾನಸ ಭವ್ಯ & ತ್ರಿವಿಕ್ರಮ್ ಬಗ್ಗೆ ಮಾತಾಡಿದ್ದಾರೆ.
ಭವ್ಯ ಮೇಲೆ ತ್ರಿವಿಕ್ರಮ್ ಲವ್ ಇದೆ. ಈ ವಿಷಯವನ್ನ ಮನೆ ಮಂದಿ ಮಾತನಾಡಿಕೊಳ್ತಿದ್ರು ಅಂತಲೇ ಮಾನಸ ಹೇಳಿದ್ದಾರೆ. ಅದನ್ನ ಕೇಳಿದ ಸಂತು ಒಂದು ಮಾತು ಹೇಳ್ತಾರೆ. ಹೌದಾ? ಹಾಗಾದ್ರೆ, ಆ ಲವ್ ಅನ್ನಾದ್ರೂ ಚೆನ್ನಾಗಿ ಮಾಡುವಂತೆ ಹೇಳು; ಹೀರೋ ತರ ಒಳಗೆ ಹೋಗಿದ್ದಾರೆ. ಜನ ಕೂಡ ಅವರಿಂದ ಏನೋ ನಿರೀಕ್ಷೆ ಮಾಡುತ್ತಿದ್ದಾರೆ. ಏನಾದ್ರೂ ಮಾಡೋಕೆ ಹೇಳು ಅಂತಲೇ ಹೇಳ್ತಾರೆ.
ತ್ರಿವಿಕ್ರಮ್ ಹಾಗೂ ರಂಜಿತ್ ಕುಮಾರ್ ಮೈಂಡ್ ಗೇಮ್ ಆಡ್ತಿದ್ದಾರಾ? ಗೊತ್ತಿಲ್ಲ. ಆದರೆ, ಅವರ ವರ್ತನೆ ಹಾಗೆ ಇದೆ. ಏನೂ ಮಾಡದೇ ಎಲ್ಲಿ ಬೇಕೋ ಅಲ್ಲಿ ಸರಿಯಾಗಿಯೇ ಮಾತ್ ಆಡುತ್ತಿದ್ದಾರೆ. ಆಟ ಇದ್ರೆ ಆಡ್ತಾರೆ. ಇಲ್ಲ ಅಂದ್ರೆ ವರ್ಕೌಟ್, ಊಟ ಮತ್ತು ಮಗಲುವುದು ಹೀಗೆ ಇದನ್ನೆ ಮಾಡುತ್ತಿದ್ದಾರೆ.
ಆದರೆ, ಇದನ್ನ ಗಮನಿಸಿರೋ ತುಕಾಲಿ ಸಂತೋಷ್, ಮಾನಸಾಗೆ ಇದನ್ನೆ ಹೇಳಿದ್ದಾರೆ. ಹಾಗಾಗಿಯೇ ಇದನ್ನೆಲ್ಲ ಸರಿ ಮಾಡಿಕೊಂಡು ಚೆನ್ನಾಗಿಯೇ ಆಡುವಂತೆ ಹೇಳಿದ್ದಾರೆ. ಇದೇ ಮಾತನ್ನೆ ಮಾನಸ ತ್ರಿವಿಕ್ರಮ್ ಹಾಗೂ ರಂಜಿತ್ ಕುಮಾರ್ಗೆ ಹೇಳಿದ್ದಾರೆ. ಇದನ್ನ ಕೇಳಿದ ಅವರು ‘ಹುಂ’ ಅನ್ನೋ ರಿಯಾಕ್ಷನ್ ಕೊಟ್ಟಿದ್ದಾರೆ.
ತ್ರಿವಿಕ್ರಮ್ ಮೇಲೆ ಭವ್ಯ ಲವ್ ಇದೆ. ಈ ವಿಷಯ ಎಲ್ಲೂ ರಿವೀಲ್ ಕೂಡ ಆಗಿಲ್ಲ. ಆ ರೀತಿಯ ನಡುವಳಿಕೆ ಕೂಡ ಕಂಡಿಲ್ಲ. ಆದರೆ, ಮನೆಯ ಮಹಿಳಾ ಸದಸ್ಯರು ಮಾತನಾಡಿಕೊಂಡಿರೋದನ್ನೇ ಮಾನಸ ಈಗ ತಕಾಲಿ ಸಂತು ಮುಂದೆ ಹೇಳಿಕೊಂಡಿದ್ದಾರೆ. ಆದರೆ, ಈ ಲವ್ ಸ್ಟೋರಿ ಕ್ಯಾಮರಾ ಮುಂದೆ ಬರುತ್ತಾ ಇಲ್ವಾ ಅನ್ನೋದೇ ಸದ್ಯಕ್ಕಿರುವ ಪ್ರಶ್ನೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






