ಬಿಗ್ ಬಾಸ್ ಮನೆಯಿಂದ ಹೊರ ಬರಲು ಇದೇ ಕಾರಣ! ಸುರೇಶ್ ಬಿಚ್ಚಿಟ್ಟರೂ ಅಸಲಿ ಸತ್ಯ!

ಕನ್ನಡ ಬಿಗ್ಬಾಸ್ ಸ್ಪರ್ಧಿ ಗೋಲ್ಡ್ ಸುರೇಶ್ ಅವರು ತುರ್ತು ಕಾರಣದಿಂದಾಗಿ ಆಟ ನಿಲ್ಲಿಸಿ ಹೊರಬಂದಿದ್ದಾರೆ ಎನ್ನಲಾಗಿದೆ. ಈ ವಾರ ಅವರಿಗೆ ಉತ್ತಮ ಎನ್ನುವ ಪಟ್ಟ ಕೂಡ ಸಿಕ್ಕಿತ್ತು. ಇದರ ನಡುವೆಯೇ ಅವರನ್ನು ಬಿಗ್ಬಾಸ್ ಮನೆಯಿಂದ ದಿಢೀರನೆ ಹೊರಗೆ ಕರೆಸಿಕೊಳ್ಳಲಾಗಿದೆ. ಕ್ಯಾಪ್ಟನ್ ಸ್ಥಾನ ಸಿಕ್ಕಿ, ಚೆನ್ನಾಗಿ ಆಟ ಆಡುತ್ತಿರುವಾಗಲೇ ಅವರು ಹೊರಬಂದಿರುವುದು ಎಲ್ಲೆಡೆ ಚರ್ಚೆಯಾಗುತ್ತಿದೆ.
ಗೋಲ್ಡ್ ಸುರೇಶ್ ಅವರ ಮನೆಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದ್ದು ಬಿಗ್ಬಾಸ್ ಮನೆಗಿಂತಲೂ ಸದ್ಯ ಅವರ ಕುಟುಂಬದವರಿಗೆ ಅವರ ಅವಶ್ಯಕತೆ ಹೆಚ್ಚಾಗಿದೆ. ಗೋಲ್ಡ್ ಸುರೇಶ್ ಅವರು ತಡಮಾಡದೆ ತಮ್ಮ ವಸ್ತುಗಳನ್ನು ಪ್ಯಾಕ್ ಮಾಡಿಕೊಂಡು ಬಿಗ್ಬಾಸ್ ಮನೆಯಿಂದ ಹೊರಬರಬೇಕು' ಎಂದು ಬಿಗ್ಬಾಸ್ ಆದೇಶಿಸುತ್ತಾರೆ
ಬಿಗ್ಬಾಸ್ ಕನ್ನಡ ಸೀಸನ್ 11ರಿಂದ ದಿಢೀರನೆ ಗೋಲ್ಡ್ ಸುರೇಶ್ ಹೊರಬಂದಿದ್ದರ ಬಗ್ಗೆ ಹಲವು ವದಂತಿಗಳು ಕೂಡ ಕೇಳಿಬಂದಿದ್ದವು. ಇದರಲ್ಲಿ ಗೋಲ್ಡ್ ಸುರೇಶ್ ಅವರ ತಂದೆ ಮೃತಪಟ್ಟಿದ್ದಾರೆ ಎಂಬುದು ಒಂದು ವದಂತಿಯಾದರೆ, ಅವರು ಬ್ಯುಸಿನೆಸ್ ನಲ್ಲಿ ಲಾಸ್ ಆಗಿರುವುದರಿಂದ ಬಿಗ್ಬಾಸ್ ಬಿಟ್ಟು ಹೊರಬಂದಿದ್ದಾರೆ ಎಂಬ ವದಂತಿಗಳು ಸಾಕಷ್ಟು ಹರಿದಾಡುತ್ತಿವೆ.
ಆದರೆ, ಈ ಊಹಾಪೋಹಗಳಿಗೆ ಸಂಬಂಧಿಸಿದಂತೆ ಸ್ವತಃ ಗೋಲ್ಡ್ ಸುರೇಶ್ ಅವರೇ ಸ್ಪಷನೆ ನೀಡಿದ್ದು, ಅಪ್ಪ ಅಮ್ಮನಿಗೆ ಏನೂ ಆಗಿಲ್ಲ, ನಮ್ಮ ಕುಟುಂಬದಲ್ಲಿ ಎಲ್ಲರೂ ಸೌಖ್ಯವಾಗಿದ್ದಾರೆ. ಬ್ಯುಸಿನೆಸ್ ಲಾಸ್ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ತಾವು ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






