ರೋಹಿತ್ ವಿಕೆಟ್ ಪಡೆದರೂ ಸಂಭ್ರಮಿಸಲಿಲ್ಲ ವಿದೇಶಿ ಆಟಗಾರ: ಆ ಬೌಲರ್ ಕೊಟ್ಟ ಕಾರಣ ಏನು ಗೊತ್ತಾ!?

ಬಹಳ ದಿನಗಳಿಂದ ತಮ್ಮ ಕಳಪೆ ಫಾರ್ಮ್ನೊಂದಿಗೆ ಹೋರಾಡುತ್ತಿರುವ ರೋಹಿತ್ ರಣಜಿ ಟ್ರೋಫಿಯಲ್ಲಿ ತಮ್ಮ ಕಳಪೆ ಬ್ಯಾಟಿಂಗ್ ಮುಂದುವರಿಸಿದ್ದಾರೆ.
ಬಹಳ ದಿನಗಳಿಂದ ತಮ್ಮ ಕಳಪೆ ಫಾರ್ಮ್ನೊಂದಿಗೆ ಹೋರಾಡುತ್ತಿರುವ ರೋಹಿತ್, ತಮ್ಮ ತವರು ತಂಡ ಮುಂಬೈ ಪರವಾಗಿ ಮೈದಾನಕ್ಕಿಳಿದರಾದರೂ ಅವರ ವಾಪಸಾತಿ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿದ್ದಂತೆಯೇ ಇತ್ತು. 10 ವರ್ಷಗಳ ಬಳಿಕ ರಣಜಿ ಅಂಗಳಕ್ಕಿಳಿದ ರೋಹಿತ್ ಕೇವಲ 3 ರನ್ ಗಳಿಸಿ ಔಟಾದರು. ಒಂದೆಡೆ ರೋಹಿತ್ ವೈಫಲ್ಯದ ಬಗ್ಗೆ ಚರ್ಚೆಯಾಗುತ್ತಿದ್ದರೆ, ಇನ್ನೊಂದೆಡೆ ರೋಹಿತ್ ವಿಕೆಟ್ ಉರುಳಿಸಿದ ಜಮ್ಮು ಮತ್ತು ಕಾಶ್ಮೀರ ವೇಗಿ ಉಮರ್ ನಜೀರ್ ಕೂಡ ಅಷ್ಟೇ ಸುದ್ದಿಯಾಗುತ್ತಿದ್ದಾರೆ. ಅದರಲ್ಲೂ ಅವರು ರೋಹಿತ್ ವಿಕೆಟ್ ಪಡೆದರೂ ಸಂಭ್ರಮಿಸದಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ಪಂದ್ಯದ ಮೊದಲ ದಿನದಂದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ಶ್ರೇಷ್ಠ ಬ್ಯಾಟ್ಸ್ಮನ್ಗಳಿಂದ ತುಂಬಿದ್ದರೂ ಕೇವಲ 120 ರನ್ಗಳಿಗೆ ಆಲೌಟ್ ಆಯಿತು. ಅದರಲ್ಲೂ ಟೆಸ್ಟ್ ಕೆರಿಯರ್ ಅಪಾಯದಲ್ಲಿರುವ ರೋಹಿತ್ ಶರ್ಮಾ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು. ಆದರೆ ಟೀಂ ಇಂಡಿಯಾ ನಾಯಕನಿಗೆ ರಣಜಿ ಟ್ರೋಫಿಯ ಮೊದಲ ಇನ್ನಿಂಗ್ಸ್ನಲ್ಲೂ ಅದ್ಭುತ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.
ಬೌಲರ್ ಉಮರ್ ನಜೀರ್ ಅವರು,ಸುಮಾರು 6 ಅಡಿ 4 ಇಂಚು ಎತ್ತರದ ಈ ಬೌಲರ್ ಆರಂಭದಿಂದಲೂ ರೋಹಿತ್ಗೆ ಸಾಕಷ್ಟು ತೊಂದರೆ ನೀಡಿ ನಂತರ ಅವರನ್ನು ಔಟ್ ಮಾಡಿದರು. ಆದರೆ ರೋಹಿತ್ನಂತಹ ದಿಗ್ಗಜ ಬ್ಯಾಟ್ಸ್ಮನ್ನ ವಿಕೆಟ್ ಪಡೆದ ನಂತರವೂ ಉಮರ್ ಅಥವಾ ಅವರ ಸಹ ಆಟಗಾರರು ಯಾವುದೇ ರೀತಿಯಲ್ಲಿ ಸಂಭ್ರಮಿಸದಿರುವುದು ಎಲ್ಲರಿಗೂ ಆಶ್ಚರ್ಯ ತಂದಿತು.
ನಾನು ರೋಹಿತ್ ಶರ್ಮಾ ಅವರ ದೊಡ್ಡ ಅಭಿಮಾನಿಯಾದ ಕಾರಣ ಅವರ ವಿಕೆಟ್ ಪಡೆದ ನಂತರ ಸಂಭ್ರಮಾಚರಣೆ ಮಾಡಲಿಲ್ಲ. ಅವರ ವಿಕೆಟ್ ಪಡೆಯುವುದು ನನಗೆ ತುಂಬಾ ವಿಶೇಷವಾಗಿದೆ. ನಾನು ಮೊದಲ ಬಾರಿಗೆ ಅವರಿಗೆ ಬೌಲಿಂಗ್ ಮಾಡಿದೆ ಎಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






