ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ರೋಚಕ ಟ್ವಿಸ್ಟ್: ಬಯಲಾಗುತ್ತಾ ಲಕ್ಷ್ಮೀ ನಾಟಕ!?

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್ ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು, ವೀಕ್ಷಕರ ಕುತೂಹಲ ಹೆಚ್ಚಿಗೆ ಮಾಡುತ್ತಿದೆ. ಕೀರ್ತಿಯ ಸಾವಿನ ಹಿಂದೆ ಅತ್ತೆ ಕಾವೇರಿಯ ಕೈವಾಡ ಇದೆ ಎಂದು ಲಕ್ಷ್ಮೀಯಲ್ಲಿ ಅನುಮಾನ ಮೂಡಿದೆ. ಆ ಅನುಮಾನದಿಂದಲೇ ಲಕ್ಷ್ಮೀ ತನ್ನ ಮೈಮೇಲೆ ಕೀರ್ತಿಯ ಆತ್ಮ ಬಂದಿರೋ ಹಾಗೇ ನಾಟಕ ಮಾಡ್ತಿದ್ದಾಳೆ.
ಲಕ್ಷ್ಮೀಯ ವರ್ತನೆ ನೋಡಿ ಮನೆಯವರಲ್ಲಾ ನಿಜವಾಗಲೂ ಲಕ್ಷ್ಮೀಯ ಮೈಮೇಲೆ ಕೀರ್ತಿಯ ಆಹ್ವಾನ ಆಗಿದೆ ಅಂತ ಅಂದ್ಕೊಂಡಿದ್ದಾರೆ. ಇದೇ ಹೊತ್ತಲ್ಲಿ ಸೀರಿಯಲ್ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಹೇಗಾದರೂ ಮಾಡಿ ಕಾವೇರಿ ಬಾಯಿಂದ ಸತ್ಯ ಆಚೆ ಬರುವಂತೆ ಮಾಡಬೇಕು. ತಾನು ಮಾಡಿದ ತಪ್ಪಿನ ಬಗ್ಗೆ ಕಾವೇರಿಗೆ ಅರಿವಾಗಿ, ಎಲ್ಲರ ಮುಂದೆ ಕ್ಷಮೆ ಕೇಳುವಂತೆ ಲಕ್ಷ್ಮೀ ಮಾಡುತ್ತಿದ್ದಾಳೆ. ಇದೇ ಸಿಟ್ಟಿನಲ್ಲಿ ಲಕ್ಷ್ಮೀ ಎಲ್ಲರ ಮುಂದೆ ಕಾವೇರಿಗೆ ನಾನು ನಿಮ್ಮನ್ನ ಸುಮ್ಮನೆ ಬಿಡೋದಿಲ್ಲ. ನನಗೆ ಸತ್ಯ ಬೇಕೇ ಬೇಕು ಜೋರು ಮಾಡಿದ್ದಾಳೆ.
ಇದೇ ವೇಳೆ ವೈಷ್ಣವ್ ಬೀಳುತ್ತಿದ್ದಂತೆ ಕೂಡಲೇ ಲಕ್ಷ್ಮೀಯಾಗಿ ಬದಲಾಗಿದ್ದಾಳೆ. ರೀ ನಿಮಗೆ ಏನೂ ಆಗಿಲ್ಲ ತಾನೇ ಅಂತ ಹೇಳಿದ್ದಾಳೆ. ಕೀರ್ತಿ ಆತ್ಮ ತನ್ನಲ್ಲಿದೆ ಅಂತ ಬಿಂಬಿಸಿದ ಲಕ್ಷ್ಮೀ ಏಕಾಏಕಿ ತನ್ನ ಸಹಜ ರೂಪಕ್ಕೆ ಬಂದಿದ್ದಾಳೆ. ಆಗ ಮನೆ ಮಂದಿ ಶಾಕ್ ಆಗಿದ್ದಾರೆ. ಆಗ ಹೊಸದಾಗಿ ಸೀರಿಯಲ್ಗೆ ಎಂಟ್ರಿ ಕೊಟ್ಟಿದ್ದ ಲೇಡಿ ಲಕ್ಷ್ಮೀಗೆ ಪ್ರಶ್ನೆ ಮಾಡಿದ್ದಾರೆ. ಲಕ್ಷ್ಮೀ ಏನಿದು ಡ್ರಾಮಾ ಅಂತ ಎಲ್ಲರ ಮುಂದೆಯೇ ಕೇಳಿದ್ದಾರೆ. ಆಗ ಲಕ್ಷ್ಮೀ ಶಾಕ್ ಆಗಿದ್ದಾರೆ. ಸದ್ಯ ಮುಂದಿನ ದಿನಗಳಲ್ಲಿ ಈ ಸೀರಿಯಲ್ ಯಾವ ರೀತಿಯಲ್ಲಿ ತಿರುವು ಪಡೆದುಕೊಳ್ಳುತ್ತೆ? ಕಾವೇರಿ ಎಲ್ಲಾ ಸತ್ಯ ಹೇಳ್ತಾಳಾ ಅಂತ ಕಾದು ನೋಡಬೇಕಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






