Bangalore: ಹಸುಗಳ ಮೇಲೆ ಅಮಾನವೀಯ ಕೃತ್ಯ ಪ್ರಕರಣ: ವಿಕೃತಿ ಮೆರೆದಿದ್ದ ಆರೋಪಿ ಅರೆಸ್ಟ್!

ಜನವರಿ 13, 2025 - 10:49
 0  16
Bangalore: ಹಸುಗಳ ಮೇಲೆ ಅಮಾನವೀಯ ಕೃತ್ಯ ಪ್ರಕರಣ: ವಿಕೃತಿ ಮೆರೆದಿದ್ದ ಆರೋಪಿ ಅರೆಸ್ಟ್!

 ಚಾಮರಾಜಪೇಟೆಯಲ್ಲಿ ರಸ್ತೆಬದಿ ಮಲಗಿದ್ದ ಹಸುಗಳ ಪೈಕಿ ಮೂರು ಹಸುಗಳ ಕೆಚ್ಚಲನ್ನು ತಡರಾತ್ರಿ ಕಿಡಿಗೇಡಿಗಳು ಕೊಯ್ದು ವಿಕೃತಿ ಮೆರೆದಿದ್ದರು. ಇನ್ನೂ ಈ ಘಟನೆ ಸಂಬಂಧ ಓರ್ವ ಆರೋಪಿಯ ಬಂಧಿಸಲಾಗಿದೆ. ಸೈಯ್ಯದ್ ನಸ್ರು (30) ಬಂಧಿತ ಆರೋಪಿಯಾಗಿದ್ದಾನೆ. ಬಿಹಾರದ ಚಂಪರಣ್ ಮೂಲದ ಆರೋಪಿ ಸೈಯದ್ ನಸ್ರು, ಕೃತ್ಯ ನಡೆದ ಸ್ಥಳದಿಂದ 50 ಮೀಟರ್ ಅಂತರದಲ್ಲಿರುವ ಪ್ಲ್ಯಾಸ್ಟಿಕ್​​​, ಬಟ್ಟೆ ಹೊಲಿಯುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

ಕುಡಿದ ಮತ್ತಿನಲ್ಲಿ ಕೃತ್ಯ ಎಸಗಿರುವುದಾಗಿ ಆರೋಪಿ ಸೈಯದ್​ ನಸ್ರು ಪೊಲೀಸರ ಮುಂದೆ ಬಾಯಿ ಬಿಟ್ಟಿದ್ದಾನೆ. ಪೊಲೀಸರು ಆರೋಪಿಯನ್ನು ನ್ಯಾಯಾಧೀಶರ ​ ಮುಂದೆ ಹಾಜರುಪಡಿಸಿದ್ದು, ಜನವರಿ 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಹಸುವಿನ ಮಾಲೀಕ ಕರ್ಣ ಮಾತನಾಡಿ, ಆರೋಪಿ ಹುಚ್ಚ ಎಂದು  ಈಗ ಹೇಳುತ್ತಿದ್ದಾರೆ. ಹುಚ್ಚ ಈ ರೀತಿ ಮಾಡುವುದಕ್ಕೆ ಸಾಧ್ಯನಾ? ಕೃತ್ಯ ಎಸಗಿರುವ ಆ ವ್ಯಕ್ತಿಯನ್ನು ನಾನು ನೋಡಿದ್ದೇನೆ. ಬ್ಯಾಗ್ ಅಂಗಡಿಯವನಿಗೆ ಹಸುವಿನಿಂದ ತೊಂದರೆ ಆಗುತ್ತಿತ್ತು ಅನಿಸುತ್ತೆ. ಎಷ್ಟು ವರ್ಷದಿಂದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಮಾಲೀಕನನ್ನು ಕೇಳಿ. ಮೊದಲು ಬ್ಯಾಗ್ ಅಂಗಡಿ ಮಾಲೀಕನನ್ನು ಅರೆಸ್ಟ್ ಮಾಡಬೇಕು ಎಂದರು.

ಮುಂಜಾನೆ ಮೂರೂವರೆಗೆ ಈ ಘಟನೆ ಆಗಿದೆ ಅಂತಾರೆ. ಆಗ ಯಾವ ಬಾರ್ ಓಪನ್ ಇರುತ್ತೆ ಹೇಳಿ ನೋಡೋಣ? ಒಬ್ಬನೇ ಈ ಕೃತ್ಯ ಎಸಗಿರುವುದು ಸಾಧ್ಯವಿಲ್ಲ. ಇದರ ಹಿಂದೆ ಯಾರೋ ಇದ್ದಾರೆ. ಆರೋಪಿಯನ್ನು ತರಾತುರಿಯಲ್ಲಿ ಬಂಧಿಸಿ ಜೈಲಿಗೆ ಹಾಕಿದ್ದಾರೆ. ಇದರ ಹಿಂದೆ ಯಾರ ಕೈವಾಡ ಇದೆ ಎಂದು ಗೊತ್ತಾಗಬೇಕು ಎಂದು ಒತ್ತಾಯಿಸಿದರು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow