Bigg Boss Kannada 11: ಮೊದಲ ವಾರ 9 ಜನರಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಹೋಗೋದು ಯಾರು..?

ಬಿಗ್ಬಾಸ್ ಕನ್ನಡ ಸೀಸನ್ 11ರ ಮೊದಲ ವಾರದ ಪಂಚಾಯಿತಿ ಶನಿವಾರ ನಡೆದಿದ್ದು, ಸುದೀಪ್ ಪ್ರತಿಬಾರಿಯಂತೆ ಈ ಬಾರಿಯೂ ಸ್ಪರ್ಧಿಗಳಿಗೆ ತಮ್ಮದೇ ರೀತಿಯಲ್ಲಿ ಎಚ್ಚರಿಕೆಗಳನ್ನು ನೀಡಿದರು. ಈ ಸೀಸನ್ನ ಮೊದಲ ಕ್ಯಾಪ್ಟನ್ ಹಂಸಾ ತಮ್ಮ ಜವಾಬ್ದಾರಿ ಮರೆತಿದ್ದರಿಂದ ಟೀಕೆಗೆ ಗುರಿಯಾದರು. ಈ ಮಧ್ಯೆ ಜಗದೀಶ್, ಯಮುನಾ, ಹಂಸ, ಭವ್ಯಾ, ಗೌತಮಿ, ಚೈತ್ರಾ, ಶಿಶಿರ್, ಮೋಕ್ಷಿತಾ ಹಾಗೂ ಮಾನಸ ಮೇಲೆ ನಾಮಿನೇಷನ್ ತೂಗುಗತ್ತಿ ಇದೆ. ಹಂಸಾ ಈ ವಾರದ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಗೆಲುವು ಕಂಡಿರುವ ಹಿನ್ನೆಲೆಯಲ್ಲಿ, ಎಲಿಮಿನೇಶನ್ನಿಂದ ಪಾರಾಗಿದ್ದಾರೆ. ಉಳಿದವರ ಮೇಲೆ ಎಲಿಮಿನೇಶನ್ ತೂಗುಗತ್ತಿಯಿದೆ.
ಇಂದಿನ ಸಂಚಿಕೆಯಲ್ಲಿ ಕಿಚ್ಚನ ಪಂಜಾಯ್ತಿಯಲ್ಲಿ ಬಿಗ್ಬಾಸ್ ಮನೆಯಿಂದ ಆಚೆ ಹೋಗವ ಸ್ಪರ್ಧಿ ಹೆಸರನ್ನು ಹೇಳಲಿದ್ದಾರೆ. ಆದರೆ ವೀಕ್ಷಕರ ವೋಟ್ ಆಧಾರದ ಮೇಲೆ ಬಿಗ್ಬಾಸ್ ಮನೆಯಿಂದ ಆಚೆ ಹೋಗುವ ಸ್ಪರ್ಧಿ ಯಾರೆಂದು ಗೊತ್ತಾಗಲಿದೆ. ಇನ್ನೂ ಜಗದೀಶ್ ಅವರು ಬಿಗ್ಬಾಸ್ಗೆ ಬೆದರಿಕೆ ಹಾಕಿದ ವಿಷಯದ ಬಗ್ಗೆ ಮಾತನಾಡಿದ ಸುದೀಪ್, ‘ನೀವು ಬೆದರಿಕೆ ಹಾಕಿದರೆ ಅದು ವಿಶೇಷ ಅನ್ನಿಸಲಿಲ್ಲ, ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ತಮಾಷೆ ನಡೆಯುತ್ತಿರುತ್ತದೆ. ನೀವು ಬೆದರಿಕೆ ಹಾಕಿದ್ದು
ಸಹ ಜೋಕ್ ಮಾತ್ರ. ಆ ದೃಶ್ಯವನ್ನು ನಾನು ನೋಡಿದಾಗ ನಾನು ಬಿದ್ದು ಬಿದ್ದು ನಕ್ಕೆ’ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟರು ಸುದೀಪ್, ಮಾತು ಮುಂದುವರೆಸಿ, ‘ಬಿಗ್ಬಾಸ್ ಶೋ ಅದ್ಭುತವಾದ ಶೋ, ಒಳ್ಳೆಯ ವೇದಿಕೆ, ಈ ವೇದಿಕೆಯಿಂದ ಸಾಕಷ್ಟು ಜನರ ಜೀವನ ಬದಲಾಗಿದೆ. ಆದರೆ ಇದನ್ನು ಮಣ್ಣು ಮಾಡಿಬಿಡುತ್ತೀನಿ ಎಂದರೆ ನಿಮ್ಮಪ್ಪನಾಣೆ ಸಾಧ್ಯವಿಲ್ಲ’ ಎಂದು ಖಡಕ್ ಆಗಿ ಹೇಳಿದರು
ನಿಮ್ಮ ಪ್ರತಿಕ್ರಿಯೆ ಏನು?






