Bigg Boss: ಬಿಗ್ ಬಾಸ್ ಮನೆಯ ಪಯಣ ಮುಗಿಸಿದ್ರಾ ಚೈತ್ರಾ ಕುಂದಾಪುರ..!?

ಬಿಗ್ಬಾಸ್ ಫಿನಾಲೆಗೆ ಕೇವಲ ಎರಡು ವಾರ ಮಾತ್ರ ಬಾಕಿ ಇದೆ. ವೀಕ್ಷಕರಲ್ಲಿ ಯಾರು ಬಿಗ್ಬಾಸ್ ಟೈಟಲ್ ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗ್ತಿದೆ. ಈಗಾಗಲೇ ಓರ್ವ ಸ್ಪರ್ಧಿ ಹನುಮಂತ ಅವರು ಫಿನಾಲೆಗೆ ಪ್ರವೇಶ ಮಾಡಿದ್ದಾರೆ. ಅಂದ್ಹಾಗೆ ಈ ವಾರ ನಡೆದ ಟಿಕೆಟ್ ಟು ಫಿನಾಲೆ ಫೈಟ್ನಲ್ಲಿ ಗೆದ್ದು, ಫಿನಾಲೆಗೆ ಹನುಮಂತ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಬಿಗ್ಬಾಸ್ ಮತ್ತಷ್ಟು ರಂಗು ಪಡೆದುಕೊಂಡಿದೆ.
ಇದರ ಮಧ್ಯೆ ತ್ರಿವಿಕ್ರಮ್, ಮೋಕ್ಷಿತಾ ಪೈ, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಧನರಾಜ್ ಆಚಾರ್ ನಾಮಿನೇಷನ್ ಬಿಸಿಯಲ್ಲಿದ್ದಾರೆ. ಈ ಐದು ಮಂದಿಯಲ್ಲಿ ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ನಾಮಿನೇಷನ್ನಲ್ಲಿ ಸ್ಟ್ರಾಂಗ್ ಸ್ಪರ್ಧಿಗಳೇ ಇರುವುದರಿಂದ ಈ ವಾರ ಔಟ್ ಆಗೋರು ಯಾರು ಎಂಬ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.
ಇನ್ನೂ, ನಿನ್ನೆಯ ಎಪಿಸೋಡ್ನಲ್ಲಿ ಭವ್ಯಾ ಗೌಡ ಸೇಫ್ ಆಗಿದ್ದರು. ಸದ್ಯ 4 ಸ್ಪರ್ಧಿಗಳು ನಾಮಿನೇಷನ್ ಹಾಟ್ ಸೀಟ್ನಲ್ಲಿ ಇದ್ದಾರೆ. ಎರಡು ವಾರದಲ್ಲಿ 4 ಸ್ಪರ್ಧಿಗಳು ಬಿಗ್ಬಾಸ್ ಮನೆಯಿಂದ ಆಚೆ ಹೋಗಲಿದ್ದಾರೆ. ಇದೀಗ ಬಿಗ್ ಬಾಸ್ನಲ್ಲಿ ಈ ವಾರ ಭವ್ಯ, ಚೈತ್ರಾ, ಮೋಕ್ಷಿತಾ, ತ್ರಿವಿಕ್ರಮ್ ಮತ್ತು ಧನರಾಜ್ ನಾಮಿನೇಟ್ ಆಗಿದ್ದರು. ಇವರಲ್ಲಿ ಒಬ್ಬರು ಇಂದು ಆಚೆ ಬಂದಿದ್ದಾರೆ. ಬಹುತೇಕರು ಈ ವಾರ ಭವ್ಯಾ ಗೌಡ ಎಲಿಮಿನೇಟ್ ಆಗ್ತಾರೆ ಎಂದೇ ಭಾವಿಸಿದ್ದರು. ಆದರೆ ಭವ್ಯಾ ಮೊದಲೇ ಸೇಫ್ ಆದರು.
ಶನಿವಾರದ ಸಂಚಿಕೆಯಲ್ಲಿ ಭವ್ಯಾ ಸೇಫ್ ಆಗಿದ್ದು ಎಲಿಮಿನೇಷನ್ನಿಂದ ಪಾರಾದರು. ಚೈತ್ರಾ, ಮೋಕ್ಷಿತಾ, ತ್ರಿವಿಕ್ರಮ್ ಮತ್ತು ಧನರಾಜ್ ಈ ನಾಲ್ವರಲ್ಲಿ ಒಬ್ಬರು ಈಗ ಹೊರಗೆ ಬಂದಿದ್ದಾರೆ. ಈ ಸ್ಪರ್ಧಿಗೆ ಅತಿಯಾದ ಮೌನ ಈ ವಾರ ಮುಳುವಾಯ್ತಾ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಚೈತ್ರಾ ಕುಂದಾಪುರ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಚೈತ್ರಾ ಕುಂದಾಪುರ ಚೈತ್ರಾ ಕುಂದಾಪುರ ಔಟ್ ಆಗಿದ್ದು,
ಅನೇಕರಿಗೆ ಶಾಕ್ ನೀಡಿದೆ. ಚೈತ್ರಾ ಕುಂದಾಪುರ ಫೈನಲಿಸ್ಟ್ ಆಗಬಹುದು ಎಂದೇ ಹಲವರು ಭಾವಿಸಿದ್ದರು. ಆದರೆ ಚೈತ್ರಾ ಕುಂದಾಪುರ ಫೈರ್ ಬ್ರ್ಯಾಂಡ್ ಆಗುವ ಬದಲು ಈ ವಾರ ಅತಿಯಾದ ಮೌನ ತಾಳಿದರು ಎಂಬುದು ಬಿಗ್ ಬಾಸ್ ವೀಕ್ಷಕರ ಅಭಿಪ್ರಾಯ. ಚೈತ್ರಾ ಕುಂದಾಪುರ ಅವರಿಗೆ ಇದೇ ಎಲ್ಲೋ ಒಂದೆಡೆ ನೆಗೆಟಿವ್ ಆಗಿರಲೂ ಬಹುದು. ಚೈತ್ರಾ ಕುಂದಾಪುರ ಈ ವಾರ ಕಡಿಮೆ ವೋಟ್ ಪಡೆಯುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಎಲಿಮಿನೇಟ್ ಆಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






