Darshan: ನಟ ದರ್ಶನ್ ಗೆ ಆಪರೇಷನ್ ಡೇಟ್ ಫಿಕ್ಸ್! ಫೆಬ್ರವರಿಯಲ್ಲಿ ಶೂಟಿಂಗ್!

ಬೆಂಗಳೂರು: ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ಗೆ ಜೈಲಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನಟ ದರ್ಶನ್ ಅವರಿಗೆ ಬೆನ್ನು ನೋವು ವಿಪರೀತವಾಗಿ ಕಾಡುತ್ತಿದೆ. ದರ್ಶನ್ ತಮ್ಮ ಬೆನ್ನು ನೋವಿಗೆ ಆಪರೇಷನ್ ಮಾಡಿಸಿಕೊಳ್ಳು ಒಪ್ಪಿಕೊಂಡಿದ್ದಾರೆ. ಇದೇ ಸಂಕ್ರಾಂತಿ ಹಬ್ಬದ ಹಿಂದೆ ಮುಂದೆ ಆಪರೇಷನ್ ಕೂಡ ಮಾಡಿಸಿಕೊಳ್ಳಲಿದ್ದಾರೆ ಅನ್ನುವ ಸುದ್ದಿ ಇದಾಗಿದೆ.
ದರ್ಶನ್ ಬೆನ್ನು ನೋವಿನ ಆಪರೇಷನ್ ಮೈಸೂರಿನಲ್ಲಿಯೇ ಆಗುತ್ತಿದೆ. ಇಲ್ಲಿಯ ಡಾಕ್ಟರ್ ಅಜಯ್ ಹೆಗಡೆ ಅವರ ಬಳಿಯೇ ದರ್ಶನ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಂದಲೇ ಆಪರೇಷನ್ ಮಾಡಿಸಿಕೊಳ್ಳುತ್ತಿದ್ದಾರೆ ಅನ್ನುವ ಸುದ್ದಿ ಕೂಡ ಇದೆ. ಮಾಧ್ಯಮವೊಂದಕ್ಕೆ ಈ ಬಗ್ಗೆ ಅಜಯ್ ಹೆಗಡೆ ಮಾತನಾಡಿದ್ದಾರೆ. ದರ್ಶನ್ಗೆ ಆಪರೇಷನ್ ಮಾಡ್ತೀವಿ ಅಂತಲೇ ಹೇಳಿದ್ದಾರೆ. ದರ್ಶನ್ ಆಪರೇಷನ್ ಸಂಕ್ರಾಂತಿ ಹಬ್ಬದ ಸಮಯದಲ್ಲಿಯೇ ಆಗುತ್ತದೆ. ಈ ಒಂದು ಆಪರೇಷನ್ ಆದ್ಮೇಲೆ ದರ್ಶನ್ ಶೂಟಿಂಗ್ ಅಲ್ಲಿ ಕೂಡ ಭಾಗಿ ಆಗುತ್ತಾರೆ ಅನ್ನೋ ಸುದ್ದಿ ಇದೆ.
ದರ್ಶನ್ ಅಪರೇಷನ್ ಆದ್ಮೇಲೆ ರೆಸ್ಟ್ ತೆಗೆದುಕೊಳ್ಳುತ್ತಾರೆ. ಹಾಗೇನೆ ಮುಂದಿನ ತಿಂಗಳು ಫೆಬ್ರವರಿಯಲ್ಲಿಯೇ ಚಿತ್ರದ ಶೂಟಿಂಗ್ ಅಲ್ಲೂ ಭಾಗಿ ಆಗಲಿದ್ದಾರೆ. ಆದರೆ, ಈ ಒಂದು ಶೂಟಿಂಗ್ ಸಮಯದಲ್ಲಿ ಆ್ಯಕ್ಷನ್ ಸೀನ್ ಏನೂ ಮಾಡೋ ಹಾಗಿಲ್ಲ. ಬದಲಾಗಿ, ಸಿನಿಮಾದ ಇತರ ದೃಶ್ಯಗಳಲ್ಲಿ ಭಾಗುತ್ತಾರೆ ಅನ್ನೋ ಸುದ್ದಿ ಕೂಡ ಇದೆ.
ನಿಮ್ಮ ಪ್ರತಿಕ್ರಿಯೆ ಏನು?






