Darshan: ರೇಣುಕಾಸ್ವಾಮಿ ಕೊಲೆ: ದೇಶದ ಟಾಪ್ 2 ಕ್ರಿಮಿನಲ್ ಕೇಸ್ ಆಗಿದ್ದೇಕೆ?
ರೇಣುಕಾಸ್ವಾಮಿ ಹತ್ಯೆ ಪ್ರಕರಣವು ದೇಶದ ಟಾಪ್ ಕ್ರಿಮಿನಲ್ ಕೇಸ್ಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ಕೊ* ಮುಚ್ಚಿಹಾಕುವ ಯತ್ನ, ಜೈಲಿನಲ್ಲಿ ರಾಜಾತಿಥ್ಯ ಮತ್ತು ಸುಪ್ರೀಂ ಕೋರ್ಟ್ನಿಂದ ಜಾಮೀನು ರದ್ದತಿಯಂತಹ ತಿರುವುಗಳೊಂದಿಗೆ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ.
ಹೌದು ಭಾರತದಲ್ಲಿ ನಡೆದ ಪ್ರಕರಣಗಳ ಪೈಕಿ ಕೋಲ್ಕತ್ತಾದ ಟ್ರೈನಿ ವೈದ್ಯೆಯ ಅತ್ಯಾಚಾರ ಪ್ರಕರಣ ಮೊದಲ ಸ್ಥಾನ ಪಡೆದುಕೊಂಡಿದೆ. ಸಂಜಯ್ ರಾವತ್ ಎಂಬಾತ ಈ ಕೃತ್ಯವನ್ನು ಎಸಗಿದ್ದ. ಈಗಾಗಲೇ ಕೋರ್ಟ್ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇನ್ನೂ ನಟ ದರ್ಶನ್ ಕೊಲೆ ಆರೋಪಿಯಾಗಿರುವ ರೇಣುಕಾಸ್ವಾಮಿ ಕೇಸ್ ಎರಡನೇ ಸ್ಥಾನದಲ್ಲಿದೆ. ಈಗಾಗಲೇ ಈ ಪ್ರಕರಣ ಸಂಬಂಧ ಐದು ಆರೋಪಿಗಳು ಜೈಲಿನಲ್ಲಿದ್ದಾರೆ.
ಒಂದು ವರ್ಷದ ಅವಧಿಯಲ್ಲಿ ಘಟನೆಯ ತೀವ್ರತೆ ಹಾಗೂ ಸೆನ್ಷೇಷನಲ್ ಎನಿಸಿಕೊಂಡ ಪ್ರಕರಣಗಳ ಆಧಾರದ ಮೇಲೆ ಇವುಗಳನ್ನು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೇಶದ ಟಾಪ್ 6ರಲ್ಲಿ ರೇಣುಕಾಸ್ವಾಮಿ ಪ್ರಕರಣ ಎರಡನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಉಳಿದಂತೆ ಪುಣೇ ಪೋರ್ಷೆ ಕೇಸ್, ಹೈದರಾಬಾದ್ ಟೆಕ್ ಸ್ಕ್ಯಾಮ್, ಗಾಯಕ ಜುಬೀನ್ ಗಾರ್ಗ್ ಶಂಕ್ಯಾಸ್ಪದ ಸಾವು ಪ್ರಮುಖ ಪ್ರಕರಣ ಎನಿಸಿಕೊಂಡಿದೆ.
ನಿಮ್ಮ ಪ್ರತಿಕ್ರಿಯೆ ಏನು?