Ramanagara: ವಾಟರ್ ಬೈಕ್ ರೈಡ್ ವೇಳೆ ನೀರಿಗೆ ಬಿದ್ದ DK Suresh & CP Yogeshwar..!

ಫೆಬ್ರವರಿ 3, 2025 - 10:22
 0  23
Ramanagara: ವಾಟರ್ ಬೈಕ್ ರೈಡ್ ವೇಳೆ ನೀರಿಗೆ ಬಿದ್ದ DK Suresh & CP Yogeshwar..!

ರಾಮನಗರ: ಕೃತಜ್ಞತಾ ಸಮಾವೇಶದ ಬಳಿಕ ಚನ್ನಪಟ್ಟಣ ಕಣ್ವಜಲಾಶಯ ವೀಕ್ಷಣೆ ಮಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಶಾಸಕ ಸಿಪಿ ಯೋಗೇಶ್ವರ್ , ಮಾಜಿ ಸಂಸದ ಡಿಕೆ ಸುರೇಶ್ ಡ್ಯಾಂ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಮಾಜಿ ಸಂಸದ ಡಿ.ಕೆ ಸುರೇಶ್ ಹಾಗೂ ಶಾಸಕ ಸಿ.ಪಿ ಯೋಗೇಶ್ವರ್ ಇಬ್ಬರೇ ವಾಟರ್ ಬೈಕ್ ಹತ್ತಿ ಒಂದು ರೌಂಡ್ ಜಾಲಿ ರೈಡ್ ಹೋದರು.

ವಾಟರ್ ಬೈಕ್ನಲ್ಲಿ ಶಾಸಕ ಸಿ.ಪಿ ಯೋಗೇಶ್ವರ್ ಅವರು ಡಿ.ಕೆ.ಸುರೇಶ್ ಅವರನ್ನ ಗಟ್ಟಿಯಾಗಿ ಹಿಡಿದು ಕೂತಿದ್ದರು. ವಾಟರ್ ಬೈಕ್ ರೈಡ್ ವೇಳೆ ಡಿ.ಕೆ ಸುರೇಶ್, ಸಿಪಿವೈ ಇಬ್ಬರು ಆಯತಪ್ಪಿ ನೀರಿಗೆ ಬಿದ್ದರು. ಕಣ್ವ ಜಲಾಶಯದಲ್ಲಿ ಬೋಟಿಂಗ್ ಮಾಡ್ತಿದ್ದ ವೇಳೆ ಆಯತಪ್ಪಿ ಇಬ್ಬರು ನೀರಿಗೆ ಬಿದ್ದಿದ್ದಾರೆ.

ಒಂದೇ ವಾಟರ್ ಬೈಕ್ನಲ್ಲಿ ನಾಯಕರು ರೈಡ್ ಮಾಡಿದ್ದರು. ವೇಳೆ ಆಯತಪ್ಪಿ ವಾಟರ್ ಬೈಕ್ನಿಂದ ಇಬ್ಬರು ಕೆಳಗೆ ಬಿದ್ದು ಬಳಿಕ ನೀರಿನಲ್ಲಿ ಈಜಿ ದಡ ಸೇರಿದ್ದಾರೆ. ಸೇಫ್ಟಿ ಜಾಕೆಟ್ಹಾಗೂ ದಡದ ಸಮೀಪವೇ ಡಿ.ಕೆ ಸುರೇಶ್, ಸಿಪಿವೈ ನೀರಿಗೆ ಬಿದ್ದಿದ್ದರಿಂದ ಯಾರು ಹೆದರುವ ಪ್ರಮೇಯವೇ ಬರಲಿಲ್ಲ.

ಇನ್ನೂ ಒಂದೇ ಬೋಟ್‌ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಶಾಸಕರಾದ ಬಾಲಕೃಷ್ಣ, ಕದಲೂರು ಉದಯ್, ಶ್ರೀನಿವಾಸ್ ಹಾಗೂ ಎಂಎಲ್ಸಿ ರವಿ ಅವರು ರೈಡ್ ಹೋಗಿದ್ದರು. 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow