Serial Actress: ಬ್ಲಾಕ್ ಮೇಲ್ ಮೂಲಕ ಮದುವೆಯಾಗಿ ಕಿರುಕುಳ ಆರೋಪ..! ಸೀರಿಯಲ್ ನಟಿ ವಿರುದ್ಧ FIR ದಾಖಲು

ಕಿರುತರೆ ಹಿರಿಯ ನಟಿ ಹಾಗೂ ನಿರ್ಮಾಪಕಿ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ. ನಿರ್ದೇಶಕ ಹರ್ಷವರ್ದನ್ ವಿದ್ಯಾರಣ್ಯಪುರ ಪೊಲೀಸರಿಗೆ ದೂರು ನೀಡಿದ್ದು, ಕಿರುತರೆ ನಟಿ ಶಶಿಕಲಾ ಅಲಿಯಾಸ್ ಸುಶೀಲಮ್ಮ ವಿರುದ್ಧ ಎಫ್.ಐ.ಆರ್ ದಾಖಲು ಮಾಡಲಾಗಿದೆ. ಬ್ಲಾಕ್ ಮೇಲ್ ಮಾಡಿ ಮದುವೆ ಆಗಿ, ಈಗ ಕಿರುಕುಳ ನೀಡ್ತಿದ್ದರೆ ಅಂತಾ ಆರೋಪ ಮಾಡಲಾಗಿದೆ. ಹಲವು ಸಿನಿಮಾ ಹಾಗೂ ಸಿರಿಯಲ್ ನಲ್ಲಿ ನಟಿಸಿರುವ ಶಶಿಕಲಾ ಜೊತೆಗೆ ಅಮ್ಮನ ಮಡಿಲು ಎಂಬ ಅನಾಥಾಶ್ರಮ ನಡೆಸುತ್ತಿದ್ದಾರೆ.
ಆದ್ರೆ ಇದೀಗ ಶಶಿಕಲಾ ಮೇಲೆ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಹರ್ಷವರ್ಧನ್, ನಟಿ ಶಶಿಕಲಾ ನನಗೆ ಬೆದರಿಕೆ ಹಾಕಿ ಬಲವಂತದಿಂದ ಮದುವೆ ಆಗಿದ್ದಾರೆ ಎಂದು ಆರೋಪ ಮಾಡಿದ್ದಾರೆ. ನಿರ್ದೇಶಕ ಹರ್ಷವರ್ಧನ್ ನೀಡಿರುವ ದೂರಿನ ಅನ್ವಯ, ನಿಮ್ಮ ಸಿನಿಮಾ ನಿರ್ಮಾಣ ಮಾಡುತ್ತೇನೆ ನನ್ನ ಜೊತೆ ಸಂಬಂಧದಲ್ಲಿ ಇರುವ ಎಂದು ನಟಿ ಶಶಿಕಲಾ, ಹರ್ಷವರ್ಧನ್ಗೆ ಹೇಳಿದ್ದರಂತೆ.
ಅದರಂತೆ ಹರ್ಷವರ್ಧನ್, ಮದುವೆ ಆಗುವುದಿಲ್ಲ ಆದರೆ ರಿಲೇಷನ್ನಲ್ಲಿ ಇರುತ್ತೇನೆ ಎಂದು ಒಪ್ಪಿಕೊಂಡರಂತೆ. ಆ ನಂತರ ಬೆದರಿಕೆ ಹಾಕಿ ಮದುವೆ ಸಹ ಆದರಂತೆ. ಆದರೆ ಮನೆಗೆ ಆಗಾಗ್ಗೆ ನಿರ್ದೇಶಕರು, ನಿರ್ಮಾಪಕರು ಬರುತ್ತಿದ್ದರಂತೆ. ಆಗೆಲ್ಲ ನಿರ್ದೇಶಕ ಹರ್ಷ ಅನ್ನು ಹೊರಗೆ ಕಳಿಸಲಾಗುತ್ತಿಂತೆ. ಇದೆಲ್ಲ ಸರಿ ಬರದೆ ಹರ್ಷವರ್ಧನ್, ಶಶಿಕಲಾ ಅನ್ನು ತ್ಯಜಿಸಿದ್ದರಂತೆ.
ಆದರೆ ಅದಾದ ಬಳಿಕ, ತಾಯಿಯೂ ತನ್ನ ಜೊತೆ ಇರುತ್ತಾಳೆ ಎಂಬ ಕಾರಣಕ್ಕೆ ಮತ್ತೆ ನಟಿ ಶಶಿಕಲಾ ಜೊತೆಗೆ ವಾಸ ಮಾಡಲು ಒಪ್ಪಿಕೊಂಡರಂತೆ ಹರ್ಷವರ್ಧನ್. ಆದರೆ 2024 ರಲ್ಲಿ ಹರ್ಷವರ್ಧನ್ ಹಾಗೂ ತಾಯಿಯನ್ನು ಮನೆಯಿಂದ ಆಚೆ ಹಾಕಿದರಂತೆ ಶಶಿಕಲಾ.
ಅವರಿಂದ ದೂರ ಬಂದರೂ ಕರೆ ಮಾಡಿ, ಇನ್ನಿತರೆ ರೀತಿಗಳಲ್ಲಿ ತನಗೆ ಬೆದರಿಕೆ ಹಾಕುತ್ತಿದ್ದಾಳೆ ಎಂದು ಹರ್ಷವರ್ಧನ್ ದೂರು ನೀಡಿದ್ದಾರೆ. ನಟಿಯ ಜೊತೆಗೆ ಅರುಣ್ ಕುಮಾರ್ ಎಂಬಾತನ ಮೇಲೂ ದೂರು ನೀಡಲಾಗಿದ್ದು, ಅರುಣ್ ಕುಮಾರ್, ಯೂಟ್ಯೂಬ್ ಚಾನೆಲ್ ಮೂಲಕ ತನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






