SP ಬಾಲಸುಬ್ರಮಣ್ಯಂ ಆಡಿಬೆಳೆದ ಮನೆ ಖಾಲಿ-ಖಾಲಿ: ಗಾನ ಗಂಧರ್ವನ ಸಂಗೀತ ದೇಗುಲ’ದಲ್ಲಿ ನಿಂತ ಸ್ವರ!

ಜನವರಿ 7, 2025 - 22:03
 0  11
SP ಬಾಲಸುಬ್ರಮಣ್ಯಂ ಆಡಿಬೆಳೆದ ಮನೆ ಖಾಲಿ-ಖಾಲಿ: ಗಾನ ಗಂಧರ್ವನ ಸಂಗೀತ ದೇಗುಲ’ದಲ್ಲಿ ನಿಂತ ಸ್ವರ!

ಭಾರತೀಯ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ ಎಸ್‌ ಪಿ ಬಾಲಸುಬ್ರಹ್ಮಣ್ಯಂ. ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರನ್ನು ಕಳೆದುಕೊಂಡು ಭಾರತೀಯ ಚಿತ್ರರಂಗ ಬಡವಾಗಿದೆ.  2023ರ ಸೆ.25ರಂದು ಅವರು ಇಹಲೋಕ ತ್ಯಜಿಸಿದರು. ಅವರ ಅಗಲಿಕೆ ಅಸಂಖ್ಯಾ ಅಭಿಮಾನಿಗಳಿಗೆ ನೋವು ತಂದಿತು. ಇನ್ನೂ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಇವರ ಸಾಧನೆ ಸಾಮಾನ್ಯವಾದುದಲ್ಲ. ಗಾಯನ, ಸಂಗೀತ ಸಂಯೋಜನೆ, ನಟನೆಯಲ್ಲೂ ಛಾಪು ಮೂಡಿಸಿದ್ದ ಎಸ್‌ ಪಿ ಬಾಲಸುಬ್ರಹ್ಮಣ್ಯಂ ಅವರ ಸಾಧನೆ ಒಂದಾ ಎರಡಾ. 

ಇನ್ನೂ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಚಿಕ್ಕವರಿದ್ದಾಗ ಆಂಧ್ರ ಪ್ರದೇಶದ ನೆಲ್ಲೂರು ನಗರದ ತಿಪ್ಪರಾಜು ರಸ್ತೆಯಲ್ಲಿರುವ ಮನೆಯಲ್ಲಿ ತಮ್ಮ ತಂದೆ, ತಾಯಿ ಜೊತೆ ವಾಸವಿದ್ದರು. ನೆಲ್ಲೂರು ನಗರಕ್ಕೆ ಎಸ್.ಪಿ ಬಾಲಸುಬ್ರಹ್ಮಣ್ಯಂ ಎಂದರೆ ಮನೆ ಮಗ ಇದ್ದಾಗೆ. ಅಲ್ಲಿನ ಪ್ರತಿ ರಸ್ತೆಗಳಲ್ಲೂ ಎಸ್.ಪಿ ಬಾಲಸುಬ್ರಹ್ಮಣ್ಯಂ ಸಣ್ಣವರಿದ್ದಾಗ ಓಡಾಡಿದ್ದರು ಎಂದು ಹೇಳುತ್ತಾರೆ. ಆದರೆ ಅವರನ್ನು ಸಂಗೀತ ಆವರಿಸಿಕೊಂಡ ಬಳಿಕ ಚೆನ್ನೈಗೆ ಹೋಗಿ ನೆಲಸಿದರು.

ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಚೆನ್ನೈಗೆ ಹೋಗಿ ನೆಲಸಿದರು ಅವರ ತಂದೆ, ತಾಯಿ ನೆಲ್ಲೂರಿನ ನಿವಾಸ ಬಿಟ್ಟು ಕದಲಿಲ್ಲ. ಮುಪ್ಪಿನ ವಯಸ್ಸಿನಲ್ಲೂ ತಂದೆ, ತಾಯಿ ಅಲ್ಲಿಯೇ ಇದ್ದರು. ಅವರು ಕಣ್ಮುಚ್ಚಿದ ಬಳಿಕ ಆ ನಿವಾಸ ಏನು ಮಾಡುವುದು ಎಂದು ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ದೊಡ್ಡ ಪ್ರಶ್ನೆ ಆಗಿತ್ತು. ಹೀಗಾಗಿ ಎಸ್.ಪಿ ಬಾಲಸುಬ್ರಹ್ಮಣ್ಯಂ ಕೊನೆಯುಸಿರೆಳೆಯುವುದಕ್ಕೂ ಮೊದಲೇ ಅಂದರೆ 2020ರಲ್ಲಿ ನೆಲ್ಲೂರಿನ 1 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ಯಾವುದಾದರೂ ಸಂಗೀತ ಪಾಠ ಶಾಲೆಗೆ ದಾನವಾಗಿ ನೀಡಲು ನಿರ್ಧಾರ ಮಾಡಿದ್ದರು.

ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ತಾವು ಅಂದುಕೊಂಡಂತೆ ಆ ನಿವಾಸವನ್ನು ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀವಿಜಯೇಂದ್ರಸರಸ್ವತಿ ಸ್ವಾಮಿಗೆ ಹಸ್ತಾಂತರ ಮಾಡಿದರು. ಇದಾದ ಬಳಿಕ ಶ್ರೀವಿಜಯೇಂದ್ರಸರಸ್ವತಿ ಸ್ವಾಮಿ ಹೇಳಿದಂತೆ 2020ರಲ್ಲಿ 10 ಲಕ್ಷ ರೂಪಾಯಿ ಖರ್ಚು ಮಾಡಿ ನಿವಾಸವನ್ನು ಅಂದ-ಚೆಂದವಾಗಿ, ಸಂಗೀತ ಶಾಲೆಗೆ ಅನುಕೂಲವಾಗುವಂತೆ ನಿರ್ಮಾಣ ಮಾಡಿಕೊಟ್ಟಿದ್ದರು. ತಂದೆ, ತಾಯಿ ಇದ್ದ ಮನೆಯಲ್ಲಿ ಯಾವಾಗಲೂ ಸಂಗೀತ, ವೇದ ಶಬ್ಧ ಕೇಳುತ್ತಿರಲಿ ಎನ್ನುವುದು ಬಾಲಸುಬ್ರಹ್ಮಣ್ಯಂ ಆಕಾಂಕ್ಷೆ ಆಗಿತ್ತು. ಅಲ್ಲದೇ ತಾವು ಯಾವಗಲೂ ಅಲ್ಲಿಗೆ ಬಂದರೆ ಸಹಾಯ ಧನ ನೀಡುವುದಾಗಿ ಎಸ್​​ಪಿಬಿ ಹೇಳಿದ್ದರು.

ಕಾಲ ಕ್ರಮೇಣ ಕಳೆದಂತೆ ಬಾಲಸುಬ್ರಹ್ಮಣ್ಯಂ ಅವರು ಕೊರೊನಾದಿಂದ ನಿಧನ ಹೊಂದಿದರು. ಇವರ ನಿಧನದ ಬಳಿಕ ಆ ಮನೆಯನ್ನು ಉಪಯೋಗಿಸಿಕೊಳ್ಳುವುದರಲ್ಲಿ ಕಂಚಿ ಕಾಮಕೋಟಿ ಪೀಠಾಧಿಪತಿ ಶ್ರೀವಿಜಯೇಂದ್ರಸರಸ್ವತಿ ಸ್ವಾಮಿ ವಿಫಲವಾಗಿದ್ದಾರೆ. 5 ವರ್ಷದಿಂದ ಮನೆಯಲ್ಲಿ ಯಾವುದೇ ಸಂಗೀತ ಪಾಠ ನಡೆಯುತ್ತಿಲ್ಲ. ಒಂದು ಸಮಯದಲ್ಲಿ ಸಂಗೀತದಿಂದ ಝೇಂಕರಿಸುತ್ತಿದ್ದ ಆ ಸ್ಥಳದಲ್ಲಿ ಈಗ ಏನು ಇಲ್ಲ. ಹೀಗಾಗಿ ಅಲ್ಲಿ ಯಾರು ಸುಳಿಯುತ್ತಿಲ್ಲದ ಕಾರಣ ಮನೆ ಅನಾಥವಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow