ಅಯ್ಯೋ ಶಿವನೇ ಇದೇನು ಅಚ್ಚರಿ: ನ್ಯಾಷನಲ್ ಕ್ರಷ್ ಜೊತೆ ತ್ರಿವಿಕ್ರಮ್!?

ಬಿಗ್ ಬಾಸ್ ಸೀಸನ್ 11ರ ರನ್ನರಪ್ ಆಗಿರುವ ತ್ರಿವಿಕ್ರಮ್ ಹಾಗೂ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ರಶ್ಮಿಕಾ ಮಂದಣ್ಣ, ತ್ರಿವಿಕ್ರಮ್ ಅವರು ಇನ್ನೂ ಕೆಲ ಜನರ ಜೊತೆ ದೇವರಿಗೆ ಕೈ ಮುಗಿಯುವ ಫೋಟೋ ವೈರಲ್ ಆಗ್ತಿದೆ. ʼಕಿರಿಕ್ ಪಾರ್ಟಿʼ ಸಿನಿಮಾಕ್ಕೂ ಮುನ್ನ ರಶ್ಮಿಕಾ ಮಂದಣ್ಣ ಅವರು ತ್ರಿವಿಕ್ರಮ್ ಜೊತೆಗೆ ಸಿನಿಮಾ ಮಾಡಬೇಕಿತ್ತು ಎನ್ನುವ ಟಾಕ್ ಹರಿದಾಡುತ್ತಿದೆ. ಈ ಸಿನಿಮಾ ಅರ್ಧಕ್ಕೆ ನಿಂತು ಹೋಯ್ತು ಎಂದು ಕೂಡ ಹೇಳಲಾಗುತ್ತಿದೆ. ಈ ಬಗ್ಗೆ ತ್ರಿವಿಕ್ರಮ್ ಅಥವಾ ರಶ್ಮಿಕಾ ಮಂದಣ್ಣ ಅವರೇ ಉತ್ತರ ಕೊಡಬೇಕಿದೆ.
ಇನ್ನೂ ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ತ್ರಿವಿಕ್ರಮ್ ಅವರು ಟ್ರೋಫಿ ಗೆಲ್ಲುವ ಆಸೆ ಹೊಂದಿದ್ದರು. ಆದರೆ ರನ್ನರ್ ಅಪ್ ಸ್ಥಾನಕ್ಕೆ ಅವರು ತೃಪ್ತಿ ಪಡೆದರು. ಈ ಹಿಂದೆ ಸಿನಿಮಾ ಮಾಡಬೇಕು ಎಂದುಕೊಂಡಿದ್ದ ತ್ರಿವಿಕ್ರಮ್ಗೆ ಸಾಕಷ್ಟು ನೋವು ಅವಮಾನ ಉಂಟಾಗಿತ್ತು.
ಲಾರಿ ಡ್ರೈವರ್ ಪುತ್ರ ಆಗಿರೋ ತ್ರಿವಿಕ್ರಮ್ ಅವರ್ ಕ್ರಿಕೆಟ್ಗೆ ಸಖತ್ ಇಷ್ಟ. ʼಪದ್ಮಾವತಿʼ ಧಾರಾವಾಹಿಯಲ್ಲಿ ಸಾಮ್ರಾಟ್ ಪಾತ್ರದ ಮೂಲಕ ತ್ರಿವಿಕ್ರಮ್ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಅದಾದ ನಂತರ ಅವರು ಕೆಲ ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಯಾವುವು ಕೂಡ ಯಶಸ್ಸು ತಂದುಕೊಡಲಿಲ್ಲ. ರಜಣಿ ಕ್ರಿಕೆಟ್ ಆಡುವ ಆಸೆ ಹೊಂದಿದ್ದ ತ್ರಿವಿಕ್ರಮ್ ಅವರು ಕಾಲಿಗೆ ಗಾಯ ಮಾಡಿಕೊಂಡರು, ಆಮೇಲೆ ಜಿಮ್ ಟ್ರೇನರ್ ಆದರು. ಇದಾದ ನಂತರದಲ್ಲಿ ಅವರಿಗೆ ನಟನಾ ಅವಕಾಶ ತಂದುಕೊಡ್ತು. 8.5 ವರ್ಷಗಳ ಕಾಲ ತ್ರಿವಿಕ್ರಮ್ ಅವರು ಕ್ರಿಕೆಟ್ಗೆ ಸಮಯ ಕೊಟ್ಟಿದ್ದರು. ಆದರೆ ಅದೊಂದು ಅಪಘಾತ ಕ್ರಿಕೆಟ್ ಕನಸನ್ನು ಹಾಳು ಮಾಡಿತು.
ನಿಮ್ಮ ಪ್ರತಿಕ್ರಿಯೆ ಏನು?






