ಈ ಸಿನಿಮಾ ಗೆಲ್ಲುತ್ತದೆಂಬುದು ಒಬ್ಬ ವ್ಯಕ್ತಿಗೆ ಮೊದಲೇ ಗೊತ್ತಿತ್ತು ಎಂದು ಸಾಯಿ ಪಲ್ಲವಿ ಹೇಳಿದ್ಯಾರಿಗೆ..?

ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಹಾಗೂ ಸಾಯಿ ಪಲ್ಲವಿ ಅಭಿನಯದ ‘ತಂಡೇಲ್’ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಫೆಬ್ರವರಿ 7 ರಂದು ಬಿಡುಗಡೆಯಾದ ತಂಡೇಲ್ ಮೊದಲ ದಿನವೇ 21.27 ಕೋಟಿ ರೂಪಾಯಿಗಳನ್ನು ಗಳಿಸಿ ಬಾಕ್ಸ್ ಆಫೀಸ್ ರೆಕಾರ್ಡ್ ಸೃಷ್ಟಿಸಿತ್ತು. ಭಾರತದಾದ್ಯಂತ ಭರ್ಜರಿ ಪ್ರೇಕ್ಷಕರನ್ನು ಸೆಳೆದ ಈ ಚಿತ್ರಕ್ಕೆ ಅಭಿಮಾನಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.
ಇನ್ನೂ ‘ತಾಂಡೇಲ್’ ಇದು ನೈಜ ಘಟನೆ ಆಧಾರಿತ ಸಿನಿಮಾ. ಈ ಚಿತ್ರದ ಸಕ್ಸಸ್ಮೀಟ್ನ ಇತ್ತೀಚೆಗೆ ಆಚರಿಸಲಾಯಿತು. ಈ ವೇಳೆ ನಿಜ ಜೀವನದ ತಾಂಡೇಲ್ ರಾಮ್ ರಾವ್ ಕೂಡ ಅಲ್ಲಿ ಇದ್ದರು. ಸಾಯಿ ಪಲ್ಲವಿ ಅವರು ಅವರಿಗೆ ಧನ್ಯವಾದ ಹೇಳಿದರು. ಸಾಯಿ ಪಲ್ಲವಿ ಅವರು ಸಿನಿಮಾ ಯಶಸ್ಸಿನ ಬಗ್ಗೆ ಮಾತನಾಡಿದ್ದಾರೆ.
‘ತಾಂಡೇಲ್’ ಸಿನಿಮಾ ಇಷ್ಟು ದೊಡ್ಡ ಗೆಲುವು ಕಾಣುತ್ತದೆ ಅನ್ನೋದು ಮೊದಲೇ ಗೊತ್ತಿತ್ತಾ? ಹೌದು ಎನ್ನುತ್ತಾರೆ ಸಾಯಿ ಪಲ್ಲವಿ. ಈ ಬಗ್ಗೆ ಮೊದಲೇ ಸೂಚನೆ ಸಿಕ್ಕಿತ್ತು ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಅದರಲ್ಲೂ ಒಬ್ಬರಿಗೆ ಈ ಬಗ್ಗೆ ಈ ವಿಚಾರದಲ್ಲಿ ಖಾತ್ರಿ ಇತ್ತು.
‘ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುವಾಗ ನಾಗ ಚೈತನ್ಯ ಅವರಲ್ಲಿ ಒಂದು ಫೈಯರ್ ಇತ್ತು. ಸಿನಿಮಾ ಗೆದ್ದೇ ಗೆಲ್ಲುತ್ತದೆ ಎನ್ನುವ ಭರವಸೆಯಲ್ಲಿ ಅವರು ಇದ್ದರು. ಅವರ ಲುಕ್ ಅಥವಾ ಪರಿಶ್ರಮದಿಂದ ಅವರು ಈ ಮಾತನ್ನು ಹೇಳಿರಲಿಲ್ಲ. ‘ತಾಂಡೇಲ್’ ಸಿನಿಮಾ ಆಡಿಯನ್ಸ್ಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಲಿದೆ ಎಂದು ಅವರಿಗೆ ಅನಿಸಿತ್ತು’ ಎಂದಿದ್ದಾರೆ ಅವರು.
ಸಾಯಿ ಪಲ್ಲವಿ ಅವರು ಸಕ್ಸಸ್ಮೀಟ್ ವೇದಿಕೆ ಮೇಲೆ ಭರ್ಜರಿಯಾಗಿ ಡ್ಯಾನ್ಸ್ ಮಾಡಿದರು. ಅವರ ಜೊತೆ ನಾಗ ಚೈತನ್ಯ ಹಾಗೂ ಅಲ್ಲು ಅರವಿಂದ್ ಕೂಡ ಡ್ಯಾನ್ಸ್ ಮಾಡಿದರು. ಈ ಚಿತ್ರಕ್ಕೆ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರೇ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಅವರು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ತಾಂಡೇಲ್ ಚಿತ್ರದಲ್ಲಿ ನಾಗ ಚೈತನ್ಯ ಮೀನುಗಾರನ ಪಾತ್ರ ಮಾಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






