ಕಣ್ಣೀರು ಹೃದಯದಿಂದ ಬರಬೇಕು, ಜನರ ಮುಂದೆ ಡ್ರಾಮಾ ಮಾಡೋದಕ್ಕೆ ಅಲ್ಲ: ಡಿಕೆಶಿ ಕಣ್ಣೀರಿಗೆ HDK ಟಾಂಗ್

ಜೂನ್ 6, 2025 - 14:04
 0  10
ಕಣ್ಣೀರು ಹೃದಯದಿಂದ ಬರಬೇಕು, ಜನರ ಮುಂದೆ ಡ್ರಾಮಾ ಮಾಡೋದಕ್ಕೆ ಅಲ್ಲ: ಡಿಕೆಶಿ ಕಣ್ಣೀರಿಗೆ HDK ಟಾಂಗ್

ಬೆಂಗಳೂರು: ಆರ್ಸಿಬಿ ಸಂಭ್ರಮಾಚರಣೆ ಸಂದರ್ಭ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ಸಂಬಂಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವ್ರೇ ಮ್ಯಾಚ್ ಗೆಲ್ಲಿಸಿಕೊಂಡು ಬಂದಂಗೆ ಶೋ ಮಾಡ್ಕೊಂಡು ಬರುತ್ತಾರೆ.

ನಂತರ ಗೃಹ ಸಚಿವರಿಗೆ ಕರೆ ಮಾಡ್ತಾರೆಇದೆಲ್ಲವೂ ಪರ್ಸನಲ್ ಪ್ರತಿಷ್ಠೆಗೆ ನಡೆದ ನಾಟಕ, ಯಾವ ರೀತಿ ನಡೆದುಕೊಂಡಿದ್ದಾರೆ ನೋಡಿ. ಘಟನೆಯಾಗಿ 24 ಗಂಟೆ ನಂತರ ಡಿಕೆಶಿಗೆ ಕಣ್ಣೀರು ಬಂತು. ಒಹೋ ಏನು ಆನಂದಭಾಷ್ಪನಾ? ಕಣ್ಣೀರು ಹೃದಯದಿಂದ ಬರಬೇಕು, ಜನರ ಮುಂದೆ ಡ್ರಾಮಾ ಮಾಡೋದಕ್ಕೆ ಅಲ್ಲ ಎಂದು ಡಿಸಿಎಂ ಡಿಕೆಶಿ ಕಣ್ಣೀರಿಗೆ ಹೆಚ್ಡಿಕೆ ಟಾಂಗ್ ಕೊಟ್ಟಿದ್ದಾರೆ.

ಇನ್ನೂ ಎರಡು ಕಡೆ ಕಾರ್ಯಕ್ರಮಕ್ಕೆ ಯಾರ ಅನುಮತಿ ಇತ್ತು? ಅಭಿಮಾನಗಳ ಜೀವದ ಜೊತೆ ಸರ್ಕಾರ ಚೆಲ್ಲಾಟ ಆಡಿದೆ. ಇಷ್ಟೆಲ್ಲ ಸಾವು ನೋವಾದರೂ ಸಂಜೆ ಸಿಎಂ ಮೊಮ್ಮಗನ ಜತೆ ಜನಾರ್ದನ ಹೊಟೇಲಿಗೆ ಮಸಾಲೆ ದೋಸೆ ಸವಿಯಲು ಹೋಗಿದ್ದಾರೆ. ಇದು ಸಿಎಂ ಅವರ ಸತ್ಯಮೇವ ಜಯತೆ. ರಾಜ್ಯ ಸರ್ಕಾರಕ್ಕೆ ಮಾನಮರ್ಯಾದೆ ಇದೆಯಾ? ನಿಮ್ಮ ನಿಮ್ಮ ತೀಟೆ ತೀರಿಸಿಕೊಳ್ಳಲು ಅಮಾಯಕರನ್ನು ಬಲಿಕೊಟ್ಟು ಅಧಿಕಾರಿಗಳನ್ನು ಅಮಾನತು ಮಾಡಿದ್ದೀರಿ ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow