ದೇಶವೇ ಆಚರಿಸಿದ ಹೋಳಿಯನ್ನು ಸೂಪರ್ ಸ್ಟಾರ್ ರಜನಿ ಆಚರಿಸಲ್ಲ- ಯಾಕೆ ಗೊತ್ತಾ!?

ಬಣ್ಣಗಳ ಹಬ್ಬ ಎಂದೂ ಕರೆಯಲ್ಪಡುವ ಹೋಳಿ ಹಬ್ಬವನ್ನು ಪ್ರತಿವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಆಚರಣೆ ಮಾಡಲಾಗಿದೆ. ಬಣ್ಣಗಳ ಹಬ್ಬವು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ ಮತ್ತು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ಹೋಳಿ ಹಬ್ಬವು ಪ್ರಹ್ಲಾದ ಮತ್ತಯ ಹೋಳಿಕಾಳ ಕಥೆಯೊಂದಿಗೆ ಸಂಬಂಧವನ್ನು ಹೊಂದಿದೆ. ಯುವಕ, ಯುವತಿಯರು, ಮಕ್ಕಳು ಈ ಹಬ್ಬವನ್ನು ಸಂಭ್ರಮಿಸುತ್ತಾರೆ.
ಪ್ರತಿ ಹೋಳಿ ಹಬ್ಬದ ದಿನ ರಜನಿಕಾಂತ್ ಥೇಟ್ ದಳಪತಿ ಸಿನಿಮಾ ಸೀನ್ ತರಹವೇ ಫುಲ್ ಸೈಲೆಂಟ್ ಆಗ್ತಾರೆ.
ಕಳೆದ 50 ವರ್ಷಗಳಿಂದಲೂ ಹೋಳಿ ಹಬ್ಬದ ದಿನ ರಜನಿಕಾಂತ್ ಒಂದು ವ್ರತದಂತೆಯೇ ಆ ಒಬ್ಬ ವ್ಯಕ್ತಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಿದ್ದರು. ಆದರೆ, ಕಳೆದ 11 ವರ್ಷಗಳಿಂದ ರಜನಿ ಬದುಕಿನ ಚೀಫ್ ಗೆಸ್ಟ್ ಭೇಟಿ ಸಿಗ್ತಿಲ್ಲ. ಅಷ್ಟಕ್ಕೂ ಏನಿದು ರಜನಿಕಾಂತ್ ಬದುಕಿನ ಹೋಳಿ ಸೀಕ್ರೆಟ್ ಅಂತೀರಾ? ಇಲ್ಲಿದೆ ಮಾಹಿತಿ.
ರಜನಿಕಾಂತ್ಗೆ ಇದೀಗ 74 ವರ್ಷ ವಯಸ್ಸು. ಆದ್ರೆ, ಅದು ಶಿವಾಜಿ ರಾವ್ ಗಾಯಕ್ವಾಡ್ ಹೆಸರು ಅನ್ನೋ ಬಿಎಂಟಿಸಿ ಕಂಡಕ್ಟರ್ ವಯಸ್ಸು. ರಜನಿಕಾಂತ್ ಅನ್ನೋ ಸೂಪರ್ಸ್ಟಾರ್ಗೀಗ 50 ವರ್ಷ. ಕಲಾವಿದ ಆಗಬೇಕು ಅಂತ ಕಂಡಕ್ಟರ್ ವೃತ್ತಿಗೆ ರಾಜೀನಾಮೆ ಕೊಟ್ಟು ಮದ್ರಾಸ್ನಲ್ಲಿ ಅಲೆದಾಡಿ ಅಪಮಾನ ಕಂಡಿದ್ದ ಶಿವಾಜಿರಾವ್ ಬದುಕನ್ನೇ ಬದಲಿಸಿದ್ದು ಖ್ಯಾತ ನಿರ್ದೇಶಕ ದಿವಂಗತ ಕೆ. ಬಾಲಚಂದರ್. ಇದೇ ಕೆ. ಬಾಲಚಂದರ್ ಶಿವಾಜಿ ರಾವ್ ಗಾಯಕ್ವಾಡ್ ಹೆಸರನ್ನು 1975 ಮಾರ್ಚ್ 27ರ ಹೋಳಿ ಹಬ್ಬದ ದಿನವೇ ಬದಲಿಸಿದ್ರು. ಭರ್ತಿ 50 ವರ್ಷಗಳ ಹಿಂದೆ ಬಾಲಚಂದರ್ ರಜನಿಕಾಂತ್ ಅಂತ ಮರು ನಾಮಕರಣ ಮಾಡಿದ್ರು. ಇದೇ ಕಾರಣಕ್ಕೆ ರಜನಿಕಾಂತ್ ಹೋಳಿ ಹಬ್ಬವನ್ನು ಒಂದು ವ್ರತದಂತೆ ಆಚರಿಸುತ್ತಿದ್ರು.
ಶಿವಾಜಿರಾವ್ ಗಾಯಕ್ವಾಡ್ ರಜನಿಕಾಂತ್ ಆದಾಗಿನಿಂದ 2014ರವರೆಗೂ ಪ್ರತಿ ಹೋಳಿ ಹಬ್ಬದ ದಿನ ಗುರುವನ್ನು ಭೇಟಿ ಮಾಡಿ ಆಶೀರ್ವಾದ ಪಡೆದು ಬರ್ತಿದ್ರು. ಆದ್ರೆ 2014ರಲ್ಲಿ ಕೆ. ಬಾಲಚಂದರ್ ಸಾವನ್ನಪ್ಪಿದ್ರು. ಅವತ್ತಿನಿಂದ ರಜನಿ ಮನೆಯಲ್ಲೇ ಗುರುವನ್ನು ನಮಿಸುವ ಹಾಗೂ ಹೋಳಿ ಹಬ್ಬದ ದಿನ ಯಾವುದೇ ಬಣ್ಣ ಹಚ್ಚದೇ ಒಂದು ಪವಿತ್ರ ಹಬ್ಬದಂತೆ ಗುರುವನ್ನು ನೆನೆಯುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






