‘ನಮ್ಮ ಅತ್ತೆ ಬೇಗ ಸಾಯಬೇಕು ಸ್ವಾಮಿ’ ಹರಕೆ ಹೊತ್ತು ಹುಂಡಿಯಲ್ಲಿ ಹಾಕಿದ ಸೊಸೆ..!

ಕಲಬುರಗಿ: ಜನರು ದೇವರ ಮುಂದೆ ಏನೆಲ್ಲಾ ಬೇಡಿಕೆ ಮಂಡಿಸುತ್ತಾರೆ ಎನ್ನುವುದರ ಒಂದು ಸ್ಯಾಂಪಲ್ ಇಲ್ಲಿದೆ. ಹುಂಡಿಗೆ ಹಾಕಿದ ದುಡ್ಡಿನಲ್ಲಿ ಸೊಸೆಯೊಬ್ಬಳು ನನ್ನ ಅತ್ತೆ ಬೇಗ ಸಾಯಬೇಕು ಎಂದು ಕೋರಿದ್ದಾಳೆ. ಹೌದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿಯ ಹುಂಡಿಗೆ 20 ರೂ. ನೋಟು ಹಾಕಲಾಗಿದೆ.
‘‘ತಾಯಿ ನಮ್ಮ ಅತ್ತೆ ಬೇಗ ಸಾಯಬೇಕು’’ ತಾಯಿ ಅಂತಾ 20 ರೂ ನೋಟ್ ಮೇಲೆ ಬರೆದು ಸೊಸೆ ಕಾಣಿಕೆ ಹುಂಡಿಗೆ ಹಾಕಿದ್ದಾಳೆ. ಭಾಗ್ಯವಂತಿ ದೇವಿಯ ಹುಂಡಿ ಎಣಿಕೆ ಮಾಡುವ ವೇಳೆ ಅತ್ತೆ ಸಾಯಲೆಂದು ಬರೆದ ಈ ನೋಟ್ ಪತ್ತೆಯಾಗಿದೆ. ಪ್ರತಿ ವರ್ಷ ಕಾಣಿಕೆ ಹುಂಡಿ ತೆರೆದು ಭಕ್ತರ ಕಾಣಿಕೆಯ ಎಣಿಕೆ ಮಾಡಲಾಗುತ್ತದೆ. ಈ ವೇಳೆ 60 ಲಕ್ಷ ನಗದು ಒಂದು ಕೆಜಿ ಬೆಳ್ಳಿ , 200 ಚಿನ್ನಾಭರಣ , ಹುಂಡಿಯಲ್ಲಿ ಜಮಾ ಆಗಿದೆ.
ಈ ನೋಟಿನ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ನೋಟಿನ ಮೇಲೆ ಅತ್ತೆ ಬೇಗ ಸಾಯಲಿ ಎಂದು ಬರೆದ ಸೊಸೆ ಯಾರು ಎನ್ನುವುದು ಗೊತ್ತಾಗಿಲ್ಲ. ಆದರೆ, ದೇವರು ವರ ಕೊಡುವುದು ಒಳ್ಳೆಯ ಯೋಚನೆಗಳಿಗೆ ಮಾತ್ರ. ಇಂಥ ಮನೋಸ್ಥಿತಿಗಳನ್ನು ಯಾವ ದೇವರೂ ಬೆಂಬಲಿಸುವುದಿಲ್ಲ ಎನ್ನುವ ನಂಬಿಕೆಯೂ ಅಷ್ಟೇ ಸತ್ಯ.!
ನಿಮ್ಮ ಪ್ರತಿಕ್ರಿಯೆ ಏನು?






