ನಾನು ಕಲಾವಿದೆಯಾಗಿರುವ ಕಾರಣ ನಮ್ಮ ಸಂಸ್ಕೃತಿಯ ಬಗ್ಗೆ ಅರಿವಿದೆ, ಗೌರವವಿದೆ: ಕಂಗನಾ ರಣಾವತ್

ಉಡುಪಿ: ನಾನು ಕಲಾವಿದೆಯಾಗಿರುವ ಕಾರಣ ನಮ್ಮ ಸಂಸ್ಕೃತಿಯ ಬಗ್ಗೆ ಅರಿವಿದೆ, ಗೌರವವಿದೆ ಎಂದು ನಟಿ, ಬಿಜೆಪಿ ಸಂಸದೆ ಕಂಗನಾ ರಣಾವತ್ ಹೇಳಿದರು. ಕಾಪು ಹೊಸ ಮಾರಿಗುಡಿ ದೇಗುಲಕ್ಕೆ ಭೇಟಿಕೊಟ್ಟು ದೇವರ ದರ್ಶನ ಮಾಡಿದ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ಆದಿಕಾಲದಿಂದ ಬಂದ ಆಚರಣೆಗಳ ಬಗ್ಗೆ ಹಿರಿಯರು ಹೇಳುತ್ತಾರೆ.
ನಾನು ಕಲಾವಿದೆಯಾಗಿರುವ ಕಾರಣ ನಮ್ಮ ಸಂಸ್ಕೃತಿಯ ಬಗ್ಗೆ ಅರಿವಿದೆ, ಗೌರವವಿದೆ. ದೇವಸ್ಥಾನಗಳು ಜ್ಞಾನ ಪರಂಪರೆಯನ್ನು ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸುತ್ತಾ ಬಂದಿದೆ. ಶಿಲ್ಪ ರಚನೆ, ಗೋಡೆ ಚಿತ್ರ, ಮಂತ್ರ, ವೇದ-ಉಪನಿಷತ್ ನಮ್ಮ ಪರಂಪರೆಯನ್ನು ಸಾರುತ್ತದೆ ಎಂದು ಬಣ್ಣಿಸಿದರು.
ಕಾಪುವಿನ ಭವ್ಯ ಮಂದಿರ ನೋಡುವಾಗ ನಾವೂ ನಮ್ಮ ಶ್ರೀಮಂತ ಸಂಸ್ಕೃತಿಗೆ ಈ ಕಾಲದಲ್ಲಿ ಕೊಡುಗೆ ಕೊಟ್ಟಿದ್ದೇವೆ ಎಂಬ ಹೆಮ್ಮೆಯಾಗುತ್ತದೆ. ದೇವಸ್ಥಾನಗಳು ನಮ್ಮ ಪರಂಪರೆಯನ್ನು ಸಾರುವ ಕೇಂದ್ರ. ನಾನು ದೇವಭೂಮಿಯೆಂದು ಕರೆಸಿಕೊಳ್ಳುವ ಹಿಮಾಚಲ ಪ್ರದೇಶದಿಂದ ಬಂದವಳು. ಭಾರತದ ಯಾವ ದೇಗುಲಕ್ಕೆ ಹೋದರೂ ಸಾವಿರಾರು ವರ್ಷದ ಇತಿಹಾಸವಿರುತ್ತದೆ ಎಂದು ತಿಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






