ನಾವು ಪೂಜೆಯಲ್ಲಿ ಈ ಪಾತ್ರೆ ಬಳಸಿದರೆ ಅದೃಷ್ಟ ಕೈ ಹಿಡಿಯತ್ತಂತೆ! ಇಲ್ಲಿ ಓದಿ ತಿಳಿಯಿರಿ!

ಇತ್ತೀಚಿನ ದಿನಗಳಲ್ಲಿ ಉಕ್ಕು, ಕಬ್ಬಿಣ ಮತ್ತು ಪ್ಲಾಸ್ಟಿಕ್ ವಸ್ತುಗಳು ಹೆಚ್ಚು ಪ್ರಚಲಿತವಾಗಿದೆ. ಹಿತ್ತಾಳೆ ಮತ್ತು ತಾಮ್ರವು ಹಳೆಯ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿತ್ತು. ಈಗ ಯಾರದ್ದೇ ಅಡುಗೆ ಮನೆಗೆ ಹೋದರೂ ಅಲ್ಲಿ ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ಹುಡುಕಬೇಕಾಗುತ್ತದೆ. ಹಿಂದೆ ಬಡವರು ದೇವರ ಪೂಜೆಗೆ ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಬಳಸುತ್ತಿದ್ದರೆ ಶ್ರೀಮಂತರು ಬೆಳ್ಳಿಯ ಪಾತ್ರೆಗಳನ್ನು ಬಳಸುತ್ತಿದ್ದರು. ಹಾಗಾದರೆ ಯಾವ ಲೋಹದ ಪಾತ್ರೆಗಳನ್ನು ಪೂಜೆಯಲ್ಲಿ ಬಳಸಬೇಕು..?
ಸಾಮಾನ್ಯವಾಗಿ ಜನರು ಪೂಜೆಯನ್ನು ಮಾಡುವಾಗ ನಮ್ಮ ಮನೆಯಲ್ಲಿರುವ ಲೋಹದ ಪಾತ್ರೆಗಳನ್ನೇ ಬಳಸುತ್ತಾರೆ. ಅವರು ಆ ಲೋಹದ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಇಂತಹ ತಪ್ಪನ್ನು ನೀವು ಮಾಡಲು ಹೋಗಬಾರದು. ಧಾರ್ಮಿಕ ಗ್ರಂಥಗಳಲ್ಲೂ ಇದರ ಬಗ್ಗೆ ಸಾಕಷ್ಟು ಉಲ್ಲೇಖಿಸಲಾಗಿದೆ. ಪೂಜೆಯಲ್ಲಿ ಯಾವ ಲೋಹದ ಪಾತ್ರೆಯನ್ನು ಬಳಸಬೇಕು ನೋಡಿ..
1. ಈ ಲೋಹಗಳಿಂದ ಮಾಡಿದ ಪಾತ್ರೆಗಳು ಪೂಜೆಗೆ ಮಂಗಳಕರ:
ದೇವರ ಪೂಜೆಯನ್ನು ಮಾಡುವಾಗನೀವು ಚಿನ್ನ, ಬೆಳ್ಳಿ, ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳನ್ನು ಬಳಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಧರ್ಮಗ್ರಂಥಗಳ ಪ್ರಕಾರ, ಚಿನ್ನವನ್ನು ಅತ್ಯುತ್ತಮ ಲೋಹವೆಂದು ಪರಿಗಣಿಸಲಾಗುತ್ತದೆ. ಆದರೆ ತಾಮ್ರವು ದೇವರಿಗೆ ತುಂಬಾನೇ ಪ್ರಿಯವಾದ ಲೋಹವಾಗಿದೆ. ವರಾಹ ಪುರಾಣದಲ್ಲೂ ಇದರ ಉಲ್ಲೇಖವಿದೆ. ವರಾಹ ಪುರಾಣದಲ್ಲಿ ದೇವರಿಗೆ ತಾಮ್ರ ಹೇಗೆ ಪ್ರಿಯ ಎಂಬುದನ್ನು ಈ ರೀತಿಯಾಗಿ ಹೇಳಲಾಗಿದೆ.
2. ವರಾಹ ಪುರಾಣದಲ್ಲಿ ತಾಮ್ರದ ಉಲ್ಲೇಖ:
ತಾಮ್ರವು ಮಂಗಳಕರ, ಪವಿತ್ರ ಮತ್ತು ದೇವರಿಗೆ ಬಹಳ ಪ್ರಿಯವಾದ ಲೋಹವಾಗಿದೆ. ತಾಮ್ರದ ಪಾತ್ರೆಯಲ್ಲಿ ದೇವರಿಗೆ ನಾವು ನೈವೇದ್ಯವನ್ನು ಅರ್ಪಿಸಿದರೆ ಅದು ಆತನಿಗೆ ತುಂಬಾನೇ ಪರಿಯವಾಗುತ್ತದೆ ಎಂದು ಹೇಳಲಾಗಿದೆ. ತಾಮ್ರದ ಪಾತ್ರೆಯನ್ನು ಪೂಜೆಯಲ್ಲಿ ಬಳಸುವ ಲೋಹವೆಂದು ಪರಿಗಣಿಸಲಾಗುತ್ತದೆ. ತಾಮ್ರದ ಪಾತ್ರೆಯಿಂದ ಸೂರ್ಯನಿಗೆ ನೀರು ಅರ್ಪಿಸುವ ಪ್ರತೀತಿ ಇದೆ. ತಾಮ್ರವು ಎಲ್ಲಾ ರೀತಿಯಲ್ಲೂ ಮಂಗಳಕರ ಮತ್ತು ಪವಿತ್ರ ಲೋಹವಾಗಿದೆ ಎಂದು ಇದರಲ್ಲಿ ಉಲ್ಲೇಖಿಸಲಾಗಿದೆ.
3. ದೇವರಿಗೆ ತಾಮ್ರವೇಕೆ ಪ್ರಿಯ.?
ದೇವತೆಗಳಿಗೆ ತಾಮ್ರವು ಏಕೆ ಹೆಚ್ಚು ಪ್ರಿಯವಾಗಿದೆ ಎಂಬುದಕ್ಕೆ ಸಂಬಂಧಿಸಿದ ಕಥೆಯು ವರಾಹಪುರಾಣದಲ್ಲಿ ಕಂಡುಬರುತ್ತದೆ. ವರಾಹಪುರಾಣದಲ್ಲಿನ ಈ ಕಥೆಯ ಪ್ರಕಾರ ಒಂದು ಕಾಲದಲ್ಲಿ ಗುಡಕೇಶ ಎಂಬ ರಾಕ್ಷಸನು ವಿಷ್ಣುವಿನ ಮಹಾನ್ ಭಕ್ತನಾಗಿದ್ದನು. ಕಠೋರ ತಪಸ್ಸು ಮಾಡಿ ವಿಷ್ಣುವನ್ನು ಸಂತುಷ್ಟಗೊಳಿಸಿ ‘ನನ್ನ ಮರಣವು ನಿನ್ನ ಸುದರ್ಶನ ಚಕ್ರದಿಂದ ಆವೃತವಾಗಿರಬೇಕು ಮತ್ತು ಮರಣಾನಂತರ ನನ್ನ ದೇಹವು ತಾಮ್ರವಾಗಿರಬೇಕು ಹಾಗೂ ಇದು ಜಗತ್ತಿನ ಅತ್ಯಂತ ಪವಿತ್ರವಾದ ಲೋಹವಾಗಿರಬೇಕು ಮತ್ತು ಅದರಿಂದ ತಯಾರಿಸಿದ ಪಾತ್ರೆಗಳಿಂದ ದೇವತೆಗಳನ್ನು ಪೂಜಿಸಬೇಕು ಎಂದು ವರವನ್ನು ಕೇಳಿಕೊಂಡನು. ಗುಡಾಕೇಶನ ದೇಹ ತಾಮ್ರವಾಯಿತು. ತಾಮ್ರವನ್ನು ವಿಷ್ಣುವಿನ ವರವಾಗಿ ಅತ್ಯಂತ ಪವಿತ್ರ ಲೋಹವೆಂದು ಪರಿಗಣಿಸಲಾಯಿತು ಮತ್ತು ದೇವರು ಹಾಗೂ ದೇವತೆಗಳು ಈ ಲೋಹದ ಪಾತ್ರೆಗಳಿಂದ ಮಾಡಿದ ಪೂಜೆಯನ್ನು ಸ್ವೀಕರಿಸಲು ಪ್ರಾರಂಭಿಸಿದರು.
ದೇವರ ಪೂಜೆಯನ್ನು ನಾವು ವಿವಿಧ ಲೋಹಗಳ ಪಾತ್ರೆಗಳಿಂದ ಮಾಡುವ ಬದಲಾಗಿ ತಾಮ್ರದ ಪಾತ್ರೆಯ ಮೂಲಕ ಮಾಡುವುದು ಉತ್ತಮ. ಉಳ್ಳವರು ಶಿವಾಲಯವ ಕಟ್ಟುವರು ನಾನೇನು ಮಾಡಲಯ್ಯ ಎಂದು ಚಿಂತಿಸುತ್ತಾ ಕೂರುವ ಬದಲು ಉಳ್ಳವರು ಚಿನ್ನದಿಂದ ದೇವರನ್ನು ಪೂಜಿಸಿದರೆ ನೀವು ತಾಮ್ರದಿಂದ ದೇವರನ್ನು ಪೂಜಿಸಿ. ಸಮನಾದ ಫಲವನ್ನು ಪಡೆದುಕೊಳ್ಳಬಹುದು.
ನಿಮ್ಮ ಪ್ರತಿಕ್ರಿಯೆ ಏನು?






