ನಿಮಗಿದು ಗೊತ್ತಾ! ತಿಂಗಳಲ್ಲಿ ಒಂದು ದಿನ ಉಪವಾಸ ಮಾಡ್ಬೇಕಂತೆ!? ಯಾಕೆ ಗೊತ್ತಾ?

ಎಪ್ರಿಲ್ 16, 2025 - 07:07
 0  9
ನಿಮಗಿದು ಗೊತ್ತಾ! ತಿಂಗಳಲ್ಲಿ ಒಂದು ದಿನ ಉಪವಾಸ ಮಾಡ್ಬೇಕಂತೆ!? ಯಾಕೆ ಗೊತ್ತಾ?

ತಿಂಗಳಲ್ಲಿ ಒಂದು ದಿನ ಉಪವಾಸ ಮಾಡ್ಬೇಕಂತೆ!? ಅದು ಯಾಕೆ ಎಂದು ತಿಳಿಯಲು ಈ ಸುದ್ದಿ ಪೂರ್ತಿ ಓದಿ. ಸಾಮಾನ್ಯರ ದೃಷ್ಟಿಯಲ್ಲಿ ‘ಉಪವಾಸ’ ಎಂದರೆ ‘ಉಪಾಹಾರ’ ಸೇವನೆ. ಊಟದ ಬದಲು ಉಪಾಹಾರವನ್ನೇ ಎರಡು ಪಟ್ಟು ಸೇವಿಸಿರುತ್ತೇವೆ. ಹಿಂದು, ಮುಸ್ಲಿಂ, ಕ್ರೈಸ್ತ, ಜೈನ, ಪಾರ್ಸಿ ಎಲ್ಲ ಮತ ಬಾಂಧವರಲ್ಲಿ ‘ಉಪವಾಸ’ ಒಂದು ಧಾರ್ಮಿಕ ಆಚರಣೆಯ ಮಹತ್ವ ಪಡೆದುಕೊಂಡಿದೆ. ಉಪವಾಸಕ್ಕೆ ಆಧ್ಯಾತ್ಮಿಕ ಹಿನ್ನೆಲೆಯೂ ಬೆಸೆದುಕೊಂಡಿದೆ. ಹಬ್ಬ ಹರಿದಿನಗಳಲ್ಲಿ ಮತ್ತು ತಿಥಿಗಳನ್ನಾಚರಿಸುವಾಗ ಸಂಪ್ರದಾಯವಾಗಿ ಉಪವಾಸ ರೂಢಿಯಲ್ಲಿದೆ.

ದೇಹ ಆರೋಗ್ಯವಾಗಿರಬೇಕಾದರೆ ಆಹಾರ ಸೇವನೆ ಮುಖ್ಯವಾಗಿರುತ್ತದೆ. ಅದೇ ರೀತಿ ದೇಹವನ್ನು ಸ್ವಚ್ಛವಾಗಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆಂತರಿಕವಾಗಿ ದೇಹವನ್ನು ಸ್ವಚ್ಛಗೊಳಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

ಅದಕ್ಕೆ ಇರುವ ಅತ್ಯುತ್ತಮ ಮಾರ್ಗ ಎಂದರೆ ಅದು ಮಧ್ಯಂತರ ಉಪವಾಸ. ತಿಂಗಳಲ್ಲಿ ಒಂದು ದಿನವಾದರೂ ಉಪವಾಸ ಮಾಡಿದರೆ ಒಳ್ಳೆಯದು. ಉಪವಾಸ ಮಾಡುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎನ್ನುವುದನ್ನು ಇಲ್ಲಿ ನೋಡೋಣ. 

ಸದಾ ಕಾಲ ಆಹಾರ ಸೇವನೆ ಮಾಡುವುದರಿಂದ 24 ಗಂಟೆ ಜೀರ್ಣಕ್ರಿಯೆ ನಡೆಯುತ್ತಲೇ ಇರುತ್ತದೆ. ಅದಕ್ಕೆ ಒಂದು ವಿಶ್ರಾಂತಿ ನೀಡಬೇಕೆಂದರೆ ಆಹಾರ ಸೇವನೆಯನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸುವುದು ಒಳಿತು.

ಉಪವಾಸದ ಸಂದರ್ಭದಲ್ಲಿ ಚೆನ್ನಾಗಿ ನೀರು ಕುಡಿಯುವುದು ಮುಖ್ಯವಾಗಿರುತ್ತದೆ. ಇದರಿಂದ ಕರುಳು ಸ್ವಚ್ಛವಾಗುತ್ತದೆ. ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆ ಯನ್ನು ನಿವಾರಣೆ ಮಾಡಬಹುದಾಗಿದೆ.

ಉರಿಯೂತದ ಕೋಶಗಳು ಗಾಯದ ಸ್ಥಳಕ್ಕೆ ಅಥವಾ ಬ್ಯಾಕ್ಟೀರಿಯಾದಂತಹ ಅಂಶಗಳು ದೇಹಕ್ಕೆ ಪ್ರಯಾಣಿಸಿದಾಗ ಇದು ಸಂಭವಿಸುತ್ತದೆ. ಉರಿಯೂತದ ಕೋಶಗಳು ಹೆಚ್ಚು ಕಾಲ ಇದ್ದರೆ, ಇದು ದೀರ್ಘಕಾಲದ ಉರಿಯೂತಕ್ಕೆ ಕಾರಣವಾಗಬಹುದು.

ತಿಂಗಳಲ್ಲಿ ಒಂದು ದಿನ ಉಪವಾಸ ಮಾಡಿದಾಗ ದೇಹ ಆಂತರಿಕವಾಗಿ ಶುದ್ಧಗೊಳ್ಳುತ್ತದೆ. ಇದರಿಂದ ಉರಿಯೂತದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು.

ಉಪವಾಸ ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ನೀವೇ ನೋಡಿ, ಒಂದು ಮಷಿನ್‌ಗೆ ಸದಾ ಕಾಲ ಕೆಲಸವನ್ನೇ ಮಾಡಿಸುತ್ತಿದ್ದರೆ ಕ್ರಮೇಣ ಅದು ತುಕ್ಕು ಹಿಡಿಯುತ್ತದೆ. ದೇಹವೂ ಹಾಗೇ ಸದಾ ಕಾಲ ಕೆಲಸವನ್ನೇ ನೀಡಿದರೆ ವಿಶ್ರಾಂತಿ ಸಿಗದೆ ಆಗಗ ಕೆಡುವ ಮಷನ್‌ನಂತಾಗುತ್ತದೆ.

ಹೀಗಾಗಿ ತಿಂಗಳಲ್ಲಿ ಒಂದು ಬಾರಿ ಮಾಡುವ ಉಪವಾಸ ದೇಹದ ಚಟುವಟಿಕೆಗೆ ವಿಶ್ರಾಂತಿ ನೀಡಿ, ದೇಹವನ್ನು ಮತ್ತೆ ಶಕ್ತಿಯುತವಾಗುವಂತೆ ಮಾಡುತ್ತದೆ. ಉಪವಾಸ ಮಾಡಿದಾಗ ದೇಹದಲ್ಲಿ ಇನ್ಸುಲಿನ್ ಮಟ್ಟ ಏರಿಕೆಯಾಗುತ್ತದೆ. ಮೇದೋಜ್ಜೀರಕ ಗ್ರಂಥಿಯು ರಕ್ತದಲ್ಲಿನ ಸಕ್ಕರೆಯನ್ನು ಜೀವಕೋಶಗಳಿಗೆ ಪಡೆಯಲು ಹೆಚ್ಚಿನ ಇನ್ಸುಲಿನ್ ಅನ್ನು ಪಂಪ್ ಮಾಡುತ್ತದೆ. ನಂತರ ಜೀವಕೋಶಗಳು ಎಲ್ಲಾ ಇನ್ಸುಲಿನ್‌ಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತವೆ - ಅವು ಇನ್ಸುಲಿನ್ ನಿರೋಧಕವಾಗಿರುತ್ತವೆ.

ಮೇದೋಜ್ಜೀರಕ ಗ್ರಂಥಿಯು ಜೀವಕೋಶಗಳಿಗೆ ಪ್ರತಿಕ್ರಿಯಿಸಲು ಪ್ರಯತ್ನಿಸಲು ಹೆಚ್ಚು ಇನ್ಸುಲಿನ್ ಅನ್ನು ತಯಾರಿಸುತ್ತದೆ. ಅಂತಿಮವಾಗಿ, ಮೇದೋಜ್ಜೀರಕ ಗ್ರಂಥಿಯು ಮುಂದುವರಿಯಲು ಸಾಧ್ಯವಿಲ್ಲ, ಇದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಏರಿಕೆಯಾಗುತ್ತದೆ.

ಚಿಕ್ಕಮಕ್ಕಳು, ವಯಸ್ಸಾದವರು ಮ್ತು ಗರ್ಭಿಣಿಯರು ಮಧ್ಯಂತರ ಉಪವಾಸ ಮಾಡುವುದು ಒಳ್ಳೆಯದಲ್ಲ.
ಇನ್ನು ನಿದ್ದೆಯ ಸಮಸ್ಯೆ ಇದ್ದರೆ, ಮಧುಮೇಹವಿದ್ದರೆ ಉಪವಾಸದಿಂದ ದೂರವಿರಿ
ಯಾವುದಾದರೂ ಮಾತ್ರೆ, ಔಷಧಗಳನ್ನು ತೆಗೆದುಕೊಳ್ಳುತ್ತಿದ್ದರೆ ಅಥವಾ ಚಿಕಿತ್ಸೆಯಲ್ಲಿದ್ದೆ ಆಹಾರ ಸೇವನೆ ಮಾಡದೇ ಇರುವುದು ಒಳ್ಳೆಯದಲ್ಲ.
ರೋಗ ನಿರೋಧಕ ಶಕ್ತಿ ಕಡಿಮೆ ಇದ್ದರೆ, ಯಾವುದಾರೂ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ ಅಂತಹ ಸಂದರ್ಭದಲ್ಲಿ ಉಪವಾಸ ಮಾಡಬೇಡಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow