ನೀವು ದಿನವಿಡೀ ಹ್ಯಾಪಿ ಆಗಿರ್ಬೇಕಾ!? ಹಾಗಿದ್ರೆ ಎದ್ದ ತಕ್ಷಣ ಈ ಮಂತ್ರ ಪಠಿಸಿ!

ಬೆಳಗ್ಗೆ ಶುಭವಾಗಿಸಲು ಧರ್ಮಗ್ರಂಥಗಳಲ್ಲಿ ಕೆಲವೊಂದು ಮಾರ್ಗಗಳನ್ನು ಸೂಚಿಸಲಾಗಿದೆ. ಈ ಮಾರ್ಗಗಳಲ್ಲಿ ಪ್ರಮುಖವಾದುದ್ದು ಮುಂಜಾನೆಯಲ್ಲಿ ಪಠಿಸಬೇಕಾದ ಮಂತ್ರ. ನಿದ್ರೆಯಿಂದ ಎಚ್ಚರವಾದ ತಕ್ಷಣ ಈ ಮಂತ್ರಗಳನ್ನು ಪಠಿಸುವುದರಿಂದ ನಮ್ಮ ಸಂಪೂರ್ಣ ದಿನವು ಶುಭವಾಗಲಿದೆ. ಇದರಿಂದ ನಮ್ಮ ಜೀವನದ ಎಲ್ಲಾ ಸಮಸ್ಯೆಗಳು ದೂರಾಗುತ್ತದೆ. ಮುಂಜಾನೆ ಮಂತ್ರದಿಂದ ಅದೃಷ್ಟ ಬರುವುದು ಮತ್ತು ಆರ್ಥಿಕ ಸಮಸ್ಯೆಗಳು ದೂರಾಗುವುದು ಎನ್ನಲಾಗಿದೆ.
ನೀವು ನೀವು ಬೆಳಿಗ್ಗೆ ಎದ್ದು ನಿಮ್ಮ ಸ್ವಂತ ನೆರಳನ್ನು ನೋಡಬಾರದು. ನೆರಳು ನೋಡುವುದು ಅಜ್ಞಾತ ಭಯ, ಒತ್ತಡಕ್ಕೆ ಕಾರಣವಾಗುತ್ತೆ ಎಂದು ನಂಬಲಾಗಿದೆ. ಆದ್ದರಿಂದ ಬೆಳಿಗ್ಗೆ ಎದ್ದು ಈ ತಪ್ಪನ್ನು ಮಾಡಬೇಡಿ. ಇದು ಮನಸ್ಸಿನ ಮೇಲೆ ಪರಿಣಾಮ ಬೀರುತ್ತೆ.
ನೀವು ಬೆಳಿಗ್ಗೆ ಎದ್ದು ದೇವರನ್ನು ಸ್ಮರಿಸಬೇಕು ಮತ್ತು ಅವನಿಗೆ ಧನ್ಯವಾದ ಹೇಳಬೇಕು. ಇದರೊಂದಿಗೆ, ನೀವು ನಿಮ್ಮ ಅಂಗೈಯನ್ನು ನೋಡಬೇಕು. ಅಂಗೈಯನ್ನು ನೋಡಿ, ಈ ಮಂತ್ರವನ್ನು ಹೇಳಬೇಕು.
ಕರಾಗ್ರೇ ವಸತೇ ಲಕ್ಷ್ಮೀ
ಕರಮಧ್ಯೇ ಸರಸ್ವತೀ
ಕರಮೂಲೇ ತು ಗೋವಿಂದಃ
ಪ್ರಭಾತೇ ಕರದರ್ಶನಂ
ಈ ಮಂತ್ರ ಹೇಳುವ ಮೂಲಕ ಲಕ್ಷ್ಮಿಯ ಆಶೀರ್ವಾದ ಪಡೆಯಿರಿ. ಕೈಯ ಮುಂಭಾಗದಲ್ಲಿ ಲಕ್ಷ್ಮಿ, ಮಧ್ಯದಲ್ಲಿ ತಾಯಿ ಸರಸ್ವತಿ ಮತ್ತು ಕೈ ಮೂಲೆಯಲ್ಲಿ ವಿಷ್ಣು ದೇವರ ವಾಸಸ್ಥಾನ ಎಂದು ನಂಬಲಾಗಿದೆ. ಆದ್ದರಿಂದ, ಬೆಳಿಗ್ಗೆ ಎದ್ದು ಅಂಗೈಯನ್ನು ನೋಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






