ಮದುವೆ ನಾಟಕ, ಕೇಸ್‌, ಸೆಟ್ಲ್‌ಮೆಂಟ್‌..! 10 ಪುರುಷರಿಗೆ ವಂಚಿಸಿ ಸಿಕ್ಕಿಬಿದ್ದ ಕುಶಾಲನಗರದ ಖತರ್ನಾಕ್‌ ಮಹಿಳೆ

ಸೆಪ್ಟೆಂಬರ್ 12, 2024 - 12:38
 0  12
ಮದುವೆ ನಾಟಕ, ಕೇಸ್‌, ಸೆಟ್ಲ್‌ಮೆಂಟ್‌..! 10 ಪುರುಷರಿಗೆ ವಂಚಿಸಿ ಸಿಕ್ಕಿಬಿದ್ದ ಕುಶಾಲನಗರದ ಖತರ್ನಾಕ್‌ ಮಹಿಳೆ
FOCUS KARNATAKA HIGHCOURT

ಮದುವೆ ನಾಟಕ, ಕೇಸ್‌, ಸೆಟ್ಲ್‌ಮೆಂಟ್‌..! 10 ಪುರುಷರಿಗೆ ವಂಚಿಸಿ ಸಿಕ್ಕಿಬಿದ್ದ ಕುಶಾಲನಗರದ ಖತರ್ನಾಕ್‌ ಮಹಿಳೆ

ಮದುವೆಯಾಗುವುದು, ಇಲ್ಲವೇ ಆ ರೀತಿ ನಾಟಕ ಮಾಡುವುದು, ನಂತರ ಕೌಟುಂಬಿಕ ದೌರ್ಜನ್ಯ ಕೇಸ್‌ ದಾಖಲಿಸುವುದು, ಬಳಿಕ ಸೆಟ್ಲ್‌ಮೆಂಟ್‌ ಮಾಡಿಕೊಳ್ಳುವುದು, ಮತ್ತೆ ಪ್ರಕರಣ ದಾಖಲಿಸುವುದು, ಹಣ ಪೀಕುವುದು.. ಇದನ್ನೇ ವೃತ್ತಿ ಮಾಡಿಕೊಂಡು ಹತ್ತು ಮದುವೆ ನಾಟಕಗಳನ್ನಾಡಿದ್ದ ಖತರ್ನಾಕ್‌ ಮಹಿಳೆಯ ಬಗ್ಗೆ ಜಾಗ್ರತೆಯಿಂದ ಇರುವಂತೆ ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಅಷ್ಟೇ ಅಲ್ಲ, ಈ ರೀತಿ ಹಲವು ಪುರುಷರ ವಿರುದ್ಧ ಅನಗತ್ಯ ಪ್ರಕರಣಗಳನ್ನು ಹೂಡುತ್ತಿರುವ ಮಹಿಳೆ ಬಗ್ಗೆ ಎಲ್ಲಾ ಪೊಲೀಸ್‌ ಠಾಣೆಗಳು ಎಚ್ಚರಿಕೆಯಿಂದಿರಲು ಸೂಚನೆ ನೀಡುವಂತೆ ನ್ಯಾಯಾಲಯ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.

ತನ್ನ ಹಾಗೂ ಕುಟುಂಬದವರ ವಿರುದ್ಧ ಪತ್ನಿ ಕುಶಾಲನಗರದ ಮುಳ್ಳುಸೋಗೆಯ ದೀಪಿಕಾ ಹೂಡಿರುವ ಕ್ರಿಮಿನಲ್‌ ರದ್ದು ಕೋರಿ ಆಕೆಯಿಂದ ನೊಂದ ಹತ್ತನೇ ಪತಿ, ಹಾಸನ ಜಿಲ್ಲೆಯ ಸಕಲೇಶಪುರದ ಬಾಳಗದ್ದೆಯ ಪಿ.ಕೆ. ವಿವೇಕ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ, ಈ ಆದೇಶ ನೀಡಿದೆ.

.ಹಲವು ಪುರುಷರ ವಿರುದ್ಧ ಈಗಾಗಲೇ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪರಾಧಿಕ ಪಿತೂರಿ ಮತ್ತು ಐಪಿಸಿ ಸೆಕ್ಷನ್‌ 498 'ಎ'ನಡಿ 10 ಪ್ರಕರಣಗಳನ್ನು ದಾಖಲಿಸಿರುವ ಮಹಿಳೆ, ಮತ್ತೆ 11ನೇ ಕೇಸ್‌ ದಾಖಲಿಸುವುದನ್ನು ತಡೆಯಬೇಕಾದರೆ ಆಕೆಯ ಬಗ್ಗೆ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ಡಿಜಿಪಿಗೆ ಆದೇಶಿಸಿದೆ.3

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow