ಮನೆಯ ನಲ್ಲಿ ಕೊಳಾಯಿಗಳನ್ನು ಬಿಡದ ಕಳ್ಳರು: ಬೆಂಗಳೂರು ನಿವಾಸಿಗಳೇ ಎಚ್ಚರ!

ಗೊಟ್ಟಿಗೆರೆ:- ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಮನೆಯ ನಲ್ಲಿಯ ಕೊಳಾಯಿಗಳನ್ನು ಬಿಡದೆ ಚೋರರು ಕಳ್ಳತನ ಮಾಡುತ್ತಿದ್ದು, ಸಿಟಿ ಮಂದಿಯ ನಿದ್ದೆಗೆಡಿಸಿದೆ. ಎಸ್, ಬನ್ನೇರುಘಟ್ಟರಸ್ತೆಯ ಕಾಮಾಕ್ಷಿ ಲೇಔಟ್ ನ ಗೊಟ್ಟಿಗೆರೆ ಯಲ್ಲಿ ಚೋರನೊಬ್ಬ ಮನೆಯ ನಲ್ಲಿಯ ಕೊಳಾಯಿ ಕದ್ದೋಯ್ದಿದ್ದಾನೆ. ಎರಡು ಮನೆಗಳ ಕೊಳಾಯಿ ಕಳ್ಳತನ ಮಾಡಿ ಐನಾತಿ ಕಳ್ಳ ಎಸ್ಕೇಪ್ ಆಗಿದ್ದಾನೆ. ಕಳ್ಳತನಕ್ಕೂ ಮುನ್ನ ಎರಡು ಮೂರು ಮನೆಗಳಲ್ಲಿ ಕಳ್ಳ ತಡಕಾಡಿದ್ದಾನೆ.
ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಖಕ್ಕೆ ಮಾಸ್ಕ್ ಧರಿಸಿ ಚೋರ ಕೊಳಾಯಿ ಕಳ್ಳತನ ಮಾಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೊಲೀಸರ ರಾತ್ರಿ ಗಸ್ತು ಹೆಚ್ಚಿಸುವಂತೆ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






