ಮೂಗು-ಬಾಯಲ್ಲಿ ರಕ್ತ ಬರುವಂತೆ ವಕೀಲನ ಮೇಲೆ ಹಲ್ಲೆ: ಪೊಲೀಸ್ ಇದ್ದರೂ ಡೋಂಟ್ ಕೇರ್! ಏನ್ ಆಗ್ತಿದೆ ಕಾನೂನು ಸುವ್ಯವಸ್ಥೆ!?

ಜನವರಿ 25, 2025 - 10:02
 0  19
ಮೂಗು-ಬಾಯಲ್ಲಿ ರಕ್ತ ಬರುವಂತೆ ವಕೀಲನ ಮೇಲೆ ಹಲ್ಲೆ: ಪೊಲೀಸ್ ಇದ್ದರೂ ಡೋಂಟ್ ಕೇರ್! ಏನ್ ಆಗ್ತಿದೆ ಕಾನೂನು ಸುವ್ಯವಸ್ಥೆ!?

ಬಿಗ್​ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಆಗಿದ್ದ, ಸಾಮಾಜಿಕ ಹೋರಾಟಗಾರನಾಗಿಯೂ ಗುರುತಿಸಿಕೊಂಡಿರುವ ಲಾಯರ್ ಜಗದೀಶ್ ಮೇಲೆ ಅಗಂತುಕ ಗುಂಪೊಂದು ದಾಳಿ ನಡೆಸಿದೆ. ದಾಳಿಯಲ್ಲಿ ಜಗದೀಶ್​ಗೆ ಗಾಯಗಳಾಗಿವೆ, ಅವರ ಪುತ್ರನ ಮೇಲೂ ಹಲ್ಲೆ ಆಗಿದೆ. 

ಮಾಜಿ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಪುಂಡರ ಗುಂಪೊಂದು ದಾಳಿ ಮಾಡಿದ್ದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. 

ಇತ್ತೀಚೆಗೆ ಅಣ್ಣಮ್ಮ ದೇವಿ ಕೂರಿಸುವ ವಿಚಾರಕ್ಕೆ ಕಿರಿಕ್ ಆಗಿತ್ತು. ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಜಗದೀಶ್ ಅವರಿಗೆ ಸೇರಿದ ಕಾಂಪ್ಲೆಕ್ಸ್ ಇದೆ. ಇದೇ ರಸ್ತೆಯಲ್ಲಿ ಅಣ್ಣಮ್ಮ ದೇವಿಯನ್ನು ಕೋರಿಸಿದ್ದನ್ನು ಜಗದೀಶ್ ಪ್ರಶ್ನೆ ಮಾಡಿದ್ದರು. ಆಗ ಜಗದೀಶ್ ಮೇಲೆ ಹಲ್ಲೆಗೆ ಯತ್ನ ನಡೆದಿತ್ತು. ಈ ಘಟನೆ ಸಂಬಂಧ ಪ್ರತಿಕ್ರಿಯಿಸುವಾಗ ಅವರು ಆವಾಜ್ ಹಾಕಿದ್ದರು. ದರ್ಶನ್ ಅಭಿಮಾನಿಗಳನ್ನು ಕೆರಳಿಸುವ ರೀತಿಯಲ್ಲಿ ಮಾತನಾಡಿದ್ದರು. ‘ಈ ಕೆಲಸ ಮಾಡಿದ್ದು ದರ್ಶನ್ ಅಭಿಮಾನಿಗಳಂತೆ. ನನ್ನ ಬಳಿ ಬರುವಾಗ ವಿಮೆ ಮಾಡಿಸಿಕೊಂಡು ಬನ್ನಿ’ ಎಂದಿದ್ದರು.

ಈ ಬೆನ್ನಲ್ಲೇ ಜನವರಿ 24ರ ರಾತ್ರಿ ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಆಗಿದೆ. ಕೆಲವರು ಕೋಲು ದೊಣ್ಣೆ ತೆಗೆದುಕೊಂಡು ಬಂದು ಜಗದೀಶ್ ಅವರ ಕಾರನ್ನು ಪೀಸ್ ಪೀಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಗದೀಶ್ ಅವರ ಮೂಗಿನಿಂದ ರಕ್ತ ಸುರಿಯುತ್ತಿತ್ತು. ಅದೇ ಸ್ಥಿತಿಯಲ್ಲಿ ಅವರು ವಿಡಿಯೋ ಮಾಡಿದ್ದಾರೆ. ‘ನನ್ನ ಮೇಲೆ ಮಾರಣಾಂತಿಕ ಹಲ್ಲೆ ಆಯ್ತು. ಇಡೀ ಕುಟುಂಬ ಮೇಲೆ ದಾಳಿ ಆಯ್ತು. ಸಿಎಂ ಸಿದ್ದರಾಮಯ್ಯ ಏನು ಮಾಡ್ತಿದೀಯಾ? ಇದೇನಾ ಕರ್ನಾಟಕ’ ಎಂದು ಜಗದೀಶ್ ಅವರು ಪ್ರಶ್ನೆ ಮಾಡಿದ್ದಾರೆ. ಈ ರಾಜ್ಯವನ್ನು ಟೆರರಿಸ್ಟ್ ಸ್ಟೇಟ್ ಎಂದು ಅವರು ಕರೆದಿದ್ದಾರೆ.

ನನ್ನ ಗನ್​ ಮ್ಯಾನ್​ನ ದೊಣ್ಣೆ ಮಚ್ಚಲ್ಲಿ ಹೊಡೆದರು. ಕರ್ನಾಟಕ ಇದನ್ನು ನೋಡಬೇಕು. ಪ್ರಾಣ ಹೋದರೂ ತೊಂದರೆ ಇಲ್ಲ. ನಾವು ಪ್ರಾಣ ಭಿಕ್ಷೆ ಬೀರಲ್ಲ. ನಮಗೆ ಸಮಸ್ಯೆ ಇಲ್ಲ’ ಎಂದು ಜಗದೀಶ್ ಹೇಳಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow