ಯುದ್ಧದ ಕ್ರೆಡಿಟ್ ಏನಿದ್ದರೂ ಆರ್ಮಿ ಅಧಿಕಾರಿಗಳಿಗೆ ಸಲ್ಲಬೇಕು: ಸಿಎಂ ಸಿದ್ದರಾಮಯ್ಯ

ಮೇ 12, 2025 - 16:01
 0  13
ಯುದ್ಧದ ಕ್ರೆಡಿಟ್ ಏನಿದ್ದರೂ ಆರ್ಮಿ ಅಧಿಕಾರಿಗಳಿಗೆ ಸಲ್ಲಬೇಕು: ಸಿಎಂ ಸಿದ್ದರಾಮಯ್ಯ

ಮೈಸೂರು: ಯುದ್ಧದ ಕ್ರೆಡಿಟ್ ಏನಿದ್ದರೂ ಆರ್ಮಿ ಅಧಿಕಾರಿಗಳಿಗೆ ಸಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಎರಡು ದೇಶಗಳು ಒಪ್ಪಿಕೊಂಡಿವೆ ಏನು ತೀರ್ಮಾನ ಆಗುತ್ತೋ ಕಾದು ನೋಡೋಣ. ಡಿಜಿಎಂ ವೊ ಗಳು ಇದ್ದಾರೆ ಮಾತನಾಡ್ತಾರೆ. ನನ್ನ ಪ್ರಕಾರ ಬಿಜೆಪಿ ಆಲ್ ಪಾರ್ಟಿ ಮೀಟಿಂಗ್ ಕರೆಯಬೇಕಿತ್ತು. ಪಾರ್ಲಿಮೆಂಟ್ ಸಭೆ ಕೂಡ ಕರೆಯಬೇಕಿತ್ತು. ಯುದ್ಧದ ಕ್ರೆಡಿಟ್ ಏನಿದ್ದರೂ ಆರ್ಮಿ ಅಧಿಕಾರಿಗಳಿಗೆ ಸಲ್ಲಬೇಕು ಎಂದರು.    

ಬೆಂಗಳೂರಿನಲ್ಲಿ ಮೂರು ಜನ ಮಕ್ಕಳು ಮಾತ್ರ ಇದ್ದಾರೆ. ಅವರು ಆರು ವರ್ಷದ ಕೆಳಗೆ ಇದ್ದಾರೆ. ಹುಡುಗಿ ಭಾರತದವಳು, ಗಂಡ ಪಾಕಿಸ್ತಾನದವನು. ಹೀಗಾಗಿ ಮಕ್ಕಳು ಇಲ್ಲೇ ಇದ್ದಾವೆ ಎಂದರು. ಬುದ್ಧ ಪೂರ್ಣಿಮೆಯನ್ನು ಸರ್ಕಾರದಿಂದ ಮಾಡ್ತಿದ್ದೇವೆ. ನಾಡಿನ ಜನತೆಗೆ ಬುದ್ಧ ಪೂರ್ಣಿಮೆ ಶುಭಾಶಯಗಳನ್ನು ತಿಳಿಸುತ್ತೇವೆ. ದೇಶ ರಾಜ್ಯದಲ್ಲಿ ಶಾಂತಿ ನೆಲೆಸಲಿ ಅಂತ ಕೋರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow