ಕ್ಯಾಪ್ಟನ್ ಪಟ್ಟ ಜಸ್ಟ್ ಮಿಸ್: ಮಂಜು ಕುತಂತ್ರ ಕಂಡು ಭವ್ಯ ಬೇಸರ!

ನವೆಂಬರ್ 9, 2024 - 20:04
 0  17
ಕ್ಯಾಪ್ಟನ್ ಪಟ್ಟ ಜಸ್ಟ್ ಮಿಸ್: ಮಂಜು ಕುತಂತ್ರ ಕಂಡು ಭವ್ಯ ಬೇಸರ!

ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ, ಚೆನ್ನಾಗಿ ಆಟವಾಡಿದ್ದರೂ ಭವ್ಯಾ ಗೌಡ ಕ್ಯಾಪ್ಟನ್ ಆಗೋಕೆ ಆಗಲಿಲ್ಲ. ತಂಡದಲ್ಲಿ ಜೊತೆಗಿದ್ದ ಮಂಜಣ್ಣನೇ ಭವ್ಯಾ ಗೌಡ ಬೆನ್ನಿಗೆ ಚೂರಿ ಹಾಕಿದರು.

ಹೀಗಾಗಿ ವೀಕ್ಷಕರು ತುಂಬಾ ಬೇಸರ ಹೊರ ಹಾಕಿದ್ದಾರೆ. ಉಗ್ರಂ ಮಂಜು ಅವರು ಭರ್ಜರಿ ತಂತ್ರಗಳ ಮೂಲಕ ಆಟ ಆಡುತ್ತಿದ್ದಾರೆ. ಅವರ ಕುತಂತ್ರಕ್ಕೆ ಅನೇಕರು ಬಲಿಯಾಗಿದ್ದಾರೆ. ಈ ವಾರ ಮಂಜು, ಭವ್ಯಾ ಹಾಗೂ ಗೋಲ್ಡ್ ಸುರೇಶ್ ಒಂದೇ ತಂಡದಲ್ಲಿ ಇದ್ದರು. ಈ ತಂಡ ಟಾಸ್ಕ್ ಗೆಲ್ಲುವಲ್ಲಿ ಭವ್ಯಾ ಅವರ ಕೊಡುಗೆ ತುಂಬಾನೇ ಹೆಚ್ಚಿದೆ. ಇದನ್ನು ಮಂಜು ಅವರು ಗಮನದಲ್ಲಿ ಇಟ್ಟುಕೊಂಡಿಲ್ಲ. ಭವ್ಯಾ ವಿರುದ್ಧವೇ ಅವರು ಮತ ಚಲಾಯಿಸಿದ್ದಾರೆ.

ಭವ್ಯಾ ಹಾಗೂ ತ್ರಿವಿಕ್ರಂ ಅವರು ಈ ಬಾರಿಯ ಕ್ಯಾಪ್ಟನ್ಸಿ ರೇಸ್​​ನಲ್ಲಿ ಇದ್ದರು. ಮನೆಯವರಿಗೇ ಕ್ಯಾಪ್ಟನ್​ನ ಆಯ್ಕೆ ಮಾಡಲು ಅವಕಾಶ ನೀಡಲಾಯಿತು. ಈ ವೇಳೆ ಮಂಜು ಅವರು ಮೂರು ಬಾರಿ ಭವ್ಯಾ ವಿರುದ್ಧ ಮತ ಚಲಾಯಿಸಿದರು. ತಮ್ಮ ಜೊತೆ ಆಪ್ತರಾದವರ ಜೊತೆಯೂ ಭವ್ಯಾ ವಿರುದ್ಧ ವೋಟ್ ಹಾಕುವಂತೆ ಅವರು ಕೋರಿಕೊಂಡಿದ್ದರು.

ತ್ರಿವಿಕ್ರಂ ಪರವಾಗಿ ಮಂಜು ಮಾತನಾಡುವುದಕ್ಕೂ ಒಂದು ಕಾರಣ ಇತ್ತು. ಅದುವೇ ಒಪ್ಪಂದ. ಪ್ರತಿ ಹಂತದಲ್ಲೂ ಮಂಜು ಅವರು ಒಪ್ಪಂದ ಮಾಡಿಕೊಂಡು ಆಟ ಆಡುತ್ತಿದ್ದಾರೆ. ತ್ರಿವಿಕ್ರಂ ಜೊತೆ ಅವರು ಕೆಲವು ಒಪ್ಪಂದ ಮಾಡಿಕೊಂಡಿದ್ದಾರೆ. ಕ್ಯಾಪ್ಟನ್ ಆದರೆ ತಮ್ಮನ್ನು ನಾಮಿನೇಟ್ ಮಾಡದಂತೆ ಅವರು ಕೋರಿದ್ದಾರೆ. ಇದಕ್ಕೆ ತ್ರಿವಿಕ್ರಂ ಓಕೆ ಎಂದ ಬಳಿಕವೇ ಅವರ ಪರವಾಗಿ ವೋಟ್ ಚಲಾಯಿಸಿದ್ದಾರೆ ಮಂಜು. ಕೊನೆಯಲ್ಲಿ ತ್ರಿವಿಕ್ರಂ ಕ್ಯಾಪ್ಟನ್ ಆಗಿದ್ದಾರೆ. 

ಈ ರೀತಿಯ ಒಪ್ಪಂದದ ಆಟದಿಂದ ಅಸಲಿ ಆಟ ಆಡೋಕೆ ಆಗಲ್ಲ. ಹೀಗಾಗಿ, ಇಂದು  ಸುದೀಪ್ ಅವರು ಈ ವಿಚಾರವಾಗಿ ಪಂಚಾಯ್ತಿಯಲ್ಲಿ ಮಾತನಾಡುವ ಸಾಧ್ಯತೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow