ಬೆಳಗಾವಿ, ಬಳ್ಳಾರಿ ಬೆನ್ನಲ್ಲೇ ಬೆಂಗಳೂರಲ್ಲೂ ಬಾಣಂತಿ ದುರಂತ ಸಾವು!

ಬೆಂಗಳೂರು:- ಬೆಳಗಾವಿ, ಬಳ್ಳಾರಿ ಬೆನ್ನಲ್ಲೇ ಬೆಂಗಳೂರಲ್ಲೂ ಬಾಣಂತಿ ದುರಂತವಾಗಿ ಸಾವನ್ನಪ್ಪಿದ್ದಾರೆ.
ಬಳ್ಳಾರಿ ಬಾಣಂತಿಯರ ಸಾಲು, ಸಾಲು ದುರಂತ ಕಣ್ಣ ಮುಂದೆ ಇರುವಾಗಲೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಅಂತಹದೇ ಘಟನೆ ಮರುಕಳಿಸಿದೆ. ಒಂದು ತಿಂಗಳಿನಿಂದ ಖಾಸಗಿ ಆಸ್ಪತ್ರೆಯಲ್ಲಿದ್ದ ಮಹಿಳೆ ಕೊನೆಗೂ ಜೀವ ಬಿಟ್ಟಿದ್ದಾರೆ.
ಅನುಷಾ ಮೃತ ಬಾಣಂತಿ. ಒಂದು ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಶಿವಮೊಗ್ಗದಲ್ಲಿ ಮೊದಲ ಆಪರೇಷನ್ ಮಾಡಿಸಿಕೊಂಡಿದ್ದ ಅನುಷಾ, ಬೆಂಗಳೂರಿನ ನಾಗರಬಾವಿ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಲೇ ಅನುಷಾ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಕಳೆದ ಬುಧವಾರ ಖಾಸಗಿ ಆಸ್ಪತ್ರೆಗೆ ದಾಖಲಾದ ಮಹಿಳೆಗೆ ಸಿಟಿ ಸ್ಕ್ಯಾನಿಂಗ್, ಎಂಆರ್ಐ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಗುರುವಾರ ಲಿವರ್ ಪ್ರಾಬ್ಲಂ ಎಂದ ವೈದ್ಯರು ಶುಕ್ರವಾರ ಅನುಷಾಗೆ ಆಪರೇಷನ್ ಮಾಡಿದ್ದಾರೆ. ಆಪರೇಷನ್ ಆದ ಮೇಲೆ ಅನುಷಾ ಯಾರ ಜೊತೆನೂ ಮಾತನಾಡಿಲ್ಲ.
ಆಪರೇಷನ್ ಆದ ಮೇಲೆ ಮೂರು ದಿನ ಕಣ್ಣೇ ಬಿಡಲಿಲ್ಲ ಎಂದು ಅನುಷಾ ಪತಿ ಹೇಳಿದ್ದಾರೆ. ಇದಾದ ಮೇಲೆ ವೈದ್ಯರು ಹಾರ್ಟ್ ಪ್ರಾಬ್ಲಂ ಆಗಿದೆ ಎಂದಿದ್ದಾರೆ. ಕೊನೆಗೆ ಇಂದು ಬೆಳಗಿನ ಜಾವ 4 ಗಂಟೆಗೆ ಅನುಷಾ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






