ಕಾನೂನು ಕ್ರಮ ಗ್ಯಾರಂಟಿ: ನಗುಮುಖದ ಚಲುವೆ ಸಾಯಿಪಲ್ಲವಿ ಕೊಟ್ಟ ವಾರ್ನಿಂಗ್ ಯಾರಿಗೆ?

ಇಷ್ಟು ದಿನ ಸಹಿಸಿಕೊಂಡೆ, ಇನ್ಮೇಲೆ ಸಹಿಸಲ್ಲ ಎಂದು ಹೇಳುವ ಮೂಲಕ ಸಾಯಿ ಪಲ್ಲವಿ ಬಹಿರಂಗವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ನಗುಮುಖದ ಚಲುವೆ, ನ್ಯಾಚುರಲ್ ಬ್ಯೂಟಿ, ರೌಡಿಬೇಬಿ ಹೀಗೆ ಸಾಕಷ್ಟು ಬಿರುದು ಪಡೆದಿರುವ ಸಾಯಿಪಲ್ಲವಿ ನಟನೆಗೂ ಸೈ, ಡ್ಯಾನ್ಸಿಂಗ್ ಸೈ. ನೋಡಲು ಸುಂದರವಾಗಿ ಅಟ್ರ್ಯಾಕ್ಟ್ ಫೇಸ್ ಹೊಂದಿರುವ ಸಾಯಿಪಲ್ಲವಿ ಅವರು, ತಮ್ಮ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳ ವಿರುದ್ಧ ಗರಂ ಆಗಿದ್ದಾರೆ.
ಹಿಂದಿಯ ಬಿಗ್ ಬಜೆಟ್ ಸಿನಿಮಾವಾದ ರಾಮಾಯಣದಲ್ಲಿ ರಣಬೀರ್ ಶ್ರೀರಾಮನಾಗಿ ಅಭಿಯಿಸುತ್ತಿದ್ದರೇ, ಸಾಯಿ ಪಲ್ಲವಿ ಸೀತೆಯಾಗಿ ನಟನೆ ಮಾಡುತ್ತಿದ್ದಾರೆ. ಮೂವಿಯಲ್ಲಿ ಸೀತೆ ಪಾತ್ರ ಮಾಡುತ್ತಿದ್ದರಿಂದ ಸಾಯಿ ಪಲ್ಲವಿ ತನ್ನ ದಿನಚರಿ ಬದಲಾಯಿಸಿಕೊಂಡಿದ್ದಾರೆ. ಈ ಬದಲಾವಣೆಯಲ್ಲಿ ನಾನ್ವೆಜ್ ತಿನ್ನುವುದನ್ನೂ ಬಿಟ್ಟಿದ್ದಾರೆ ಎನ್ನಲಾಗಿದೆ. ಹೋಟೆಲ್ನಲ್ಲೂ ನಾನ್ವೆಜ್ ತಿನ್ನುವುದಿಲ್ಲ. ಅಷ್ಟೇ ಯಾಕೆ, ವಿದೇಶಕ್ಕೆ ಹೋದರೂ ಜೊತೆಯಲ್ಲಿ ಅಡುಗೆ ಭಟ್ಟರನ್ನ ಕರೆದುಕೊಂಡು ಹೋಗುತ್ತಿದ್ದಾರೆ. ರಾಮಾಯಣ ಸಿನಿಮಾ ಮುಗಿಯುವವರೆಗೆ ನಾನ್ವೆಜ್ ತಿನ್ನುವುದಿಲ್ಲ ಎನ್ನಲಾಗಿದೆ.
ಆದರೆ ಇದು ಸತ್ಯವೋ, ಸುಳ್ಳೋ ಎಂಬುದು ನಿಖರವಾಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದರಿಂದ ಬೇಸರ ವ್ಯಕ್ತಪಡಿಸಿದ ನಟಿ ಸಾಯಿ ಪಲ್ಲವಿ ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಸಾಯಿ ಪಲ್ಲವಿಯವರು, ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದರೇ ಎಂತಹ ದೊಡ್ಡ ಸಂಸ್ಥೆಯಾದರೂ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ವಾರ್ನಿಂಗ್ ಮಾಡಿದ್ದಾರೆ.
ನನ್ನ ಬಗ್ಗೆ ಎಷ್ಟೋ ಸುಳ್ಳು ಸುದ್ದಿ, ಕಟ್ಟು ಕಥೆಗಳನ್ನು ಹಬ್ಬಿಸುವಾಗ ಬಹುತೇಕವಾಗಿ ನಾನು ಮೌನವಾಗಿರಲು ಬಯಸುತ್ತೇನೆ. ನಿಜ ಏನು ಅನ್ನೋದು ದೇವರಿಗೆ ಗೊತ್ತಿದೆ. ಮೌನವಾಗಿ ಇದ್ದಿದ್ದಕ್ಕೇನೋ ಇದು ನಿರಂತರವಾಗಿ ನಡೆಯುತ್ತಿದೆ. ಈಗ ಅದಕ್ಕೆ ಉತ್ತರಿಸುವ ಸಮಯ ಬಂದಿದೆ. ನನ್ನ ಸಿನಿಮಾ ರಿಲೀಸ್, ಪ್ರಕಟಣೆ, ನನ್ನ ಲೈಫ್ ಕುರಿತು ಯಾವುದೇ ಆಧಾರ ಇಲ್ಲದೇ ಪ್ರಕಟಿಸಿದರೆ, ಅದು ಎಂತಹ ದೊಡ್ಡ ಸಂಸ್ಥೆ ಆದ್ರೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






