ಗೃಹ ಇಲಾಖೆ ಅನುಮತಿ ನೀಡಿದ್ರೆ ದರ್ಶನ್ ಮಧ್ಯಂತರ ಬೇಲ್ ರದ್ದಾಗುವ ಸಾಧ್ಯತೆ!

ಬೆಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ 6 ವಾರಗಳ ಬೇಲ್ ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ದರ್ಶನ್ಗೆ ಆಪರೇಷನ್ ಕಂಟಕ ಎದುರಾಗಿದೆ. ದಾಸ ಸರ್ಜರಿ ಮಾಡಿಸಿಕೊಳ್ಳದಿದ್ರೆ, ಮತ್ತೆ ಬಳ್ಳಾರಿ ಜೈಲು ಪಾಲಾಗೋದು ಗ್ಯಾರಂಟಿ ಎನ್ನಲಾಗಿದೆ. ಇದರ ಬೆನ್ನಲ್ಲೇ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲುಪಾಲಾಗಿದ್ದ ದರ್ಶನ್ಗೆ ಅನಾರೋಗ್ಯ ಹಿನ್ನೆಲೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಕೆ
ಲ ಷರತ್ತುಗಳನ್ನ ವಿಧಿಸಿ ಬೇಲ್ ನೀಡಲಾಗಿತ್ತು. ಷರತ್ತಿನ ಅನ್ವಯ ಇವತ್ತು ದರ್ಶನ್ ಚಿಕಿತ್ಸಾ ವರದಿ ಕೋರ್ಟ್ಗೆ ಸಲ್ಲಿಕೆಯಾಗಿದೆ. ದರ್ಶನ್ ಪರ ವಕೀಲರು ಬಿಜಿಎಸ್ ವೈದ್ಯರು ನೀಡಿರೋ ವರದಿಯನ್ನ ಕೋರ್ಟ್ ಸಲ್ಲಿಸಿದ್ದಾರೆ. ಆದ್ರೆ, ಸರ್ಕಾರದ ಪರ ವಕೀಲರಿಗೆ ವರದಿ ಪ್ರತಿ ನೀಡಿಲ್ಲ.
ಸದ್ಯಕ್ಕೆ ದರ್ಶನ್ ಆಪರೇಷನ್ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. ದರ್ಶನ್ರ ಎಲ್5 ಎಸ್1ಗೆ ಫಿಸಿಯೋ ಥೆರಫಿ ನೀಡಲಾಗ್ತಿದೆ. ಆಡ್ಮಿಟ್ ಮಾಡಿಕೊಂಡು, ಸಂಪ್ರಾದಾಯಿಕ ಚಿಕಿತ್ಸೆಯನ್ನ ನೀಡಲಾಗ್ತಿದೆ. ಸದ್ಯ ಫಿಸಿಯೋ ಥೆರಫಿ ಮಾಡಲಾಗ್ತಿದೆ, ಆದ್ರೆ, ಈ ಚಿಕಿತ್ಸೆಯೇ ದರ್ಶನ್ಗೆ ಅಂತಿಮ ಅಲ್ಲ. ಸರ್ಜರಿಯ ವಿಧಾನದ ಬಗ್ಗೆ ಸಂಪೂರ್ಣ ವಿವರಣೆ ನೀಡಲಾಗಿದೆ. ಅವರು ಒಪ್ಪಿದ ಬಳಿಕ ಚಿಕಿತ್ಸೆಯ ಬಗ್ಗೆ ನಿರ್ಧಾರ ಮಾಡಲಾಗುತ್ತೆ. ಆತ ಒಪ್ಪಿದ ಬಳಿಕ ಚಿಕಿತ್ಸೆ ಪ್ಲಾನ್ ಆಫ್ ಆ್ಯಕ್ಷನ್ ಮಾಡಲಾಗುತ್ತೆ.
ಇನ್ನೂ, ಮಧ್ಯಂತರ ರಿಲೀಫ್ ನೀಡಿರೋ ಹೈಕೋರ್ಟ್ ಆದೇಶ ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ರಾಜ್ಯ ಗೃಹ ಇಲಾಖೆ ಒಪ್ಪಿಗೆ ಪಡೆದುಕೊಂಡು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲು ಚಿಂತನೆ ನಡೆಸ್ತಿದ್ದಾರೆ. ಶಸ್ತ್ರ ಚಿಕಿತ್ಸೆ ನೆಪದಿಂದ ದರ್ಶನ್ ಮಧ್ಯಂತರ ಜಾಮೀನು ಪಡೆದಿದ್ದಾರೆ. ಆದ್ರೆ, ಸದ್ಯಕ್ಕೆ ಆರೋಪಿ ದರ್ಶನ್ಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇಲ್ಲ ಎಂದಾದರೆ ಇದನ್ನೇ ಅಧಾರವಾಗಿಟ್ಟುಕೊಂಡು ಸುಪ್ರೀಂಕೋರ್ಟ್ ಮೆಟ್ಟಿಲೇರಲು ಪೊಲೀಸರು ಸಿದ್ಧತೆ ನಡೆಸ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






