ನಟಿ ಸೌಂದರ್ಯ ಸಾವು ಆಕಸ್ಮಿಕ ಅಲ್ಲ, ಕೊಲೆ: 20 ವರ್ಷಗಳ ಬಳಿಕ ಮತ್ತೆ ಜೀವ ಪಡೆದ ಪ್ರಕರಣ!

ಬಹುಭಾಷಾ ನಟಿ ಸೌಂದರ್ಯ, ಅಗಲಿಕೆ ಎರಡು ದಶಕವೇ ಕಳೆದೋಗಿದೆ. ಆದ್ರೆ, ಅಭಿಮಾನಿಗಳ ಮನದಲ್ಲಿ ಸುಮಧುರ ನೆನಪು. ಅಚ್ಚಳಿಯದ ಬೆಳಕು. ಅಂದ್ಹಾಗೆ ಸೌಂದರ್ಯ ಸಾವಿನ ವಿಚಾರದಲ್ಲಿ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ.
2004 ಏಪ್ರಿಲ್ 17ನೇ ತಾರೀಖಿನಂದು, ಬೆಂಗಳೂರಿನಿಂದ ಹಾರಿದ್ದ ಲಘು ವಿಮಾನ ಕೆಲವೇ ನಿಮಿಷಗಳಲ್ಲಿ ಪತನ ಆಗಿ ಧಗ್ಗನೆ ಹೊತ್ತಿ ಉರಿದಿತ್ತು. ಜಸ್ಟ್ 31 ವಯಸ್ಸಷ್ಟೇ, ಸೌಂದರ್ಯ ಎಂಬ ಬೆಳದಿಂಗಳ ಬೆಳ್ಮುಗಿಲು ಶಾಶ್ವತವಾಗಿ ಮರೆಯಾಗಿತ್ತು. ಸೌಂದರ್ಯ ಸತ್ತ 21 ವರ್ಷಗಳ ಬಳಿಕ ಕೇಸ್ ಮತ್ತೆ ಎದ್ದು ಕೂತಿದೆ. ಸೌಂದರ್ಯ ಸಾವು ಅಪಘಾತವಲ್ಲ, ಅದೊಂದು ಕೊಲೆ ಅನ್ನೋ ಆರೋಪ ಮೋಡ ಕವಿಸಿದೆ. ಪೊಲೀಸ್ ಠಾಣೆಯಲ್ಲಿ ಟಾಲಿವುಡ್ನ ಸ್ಟಾರ್ ನಟ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ.
ಕೆಲ ತಿಂಗಳಿಂದ ತೆಲುಗಿನ ಹಿರಿಯ ನಟ ಮೋಹನ್ ಬಾಬು, ತಮ್ಮ ಕೌಟುಂಬಿಕ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈಗ ಆಂಧ್ರದ ಖಮ್ಮಂ ಜಿಲ್ಲೆಯಲ್ಲಿ ಮೋಹನ್ ಬಾಬು ವಿರುದ್ಧ ಊಹೆ ಮಾಡೋಕೆ ಆಗದೇ ಇರೋ ಕೇಸ್ ದಾಖಲಾಗಿದೆ. ಸೌಂದರ್ಯ ಜೀವ ಕಳೆದುಕೊಳ್ಳೋದ್ರ ಹಿಂದೆ ಮೋಹನ್ ಬಾಬು ಕೈವಾಡ ಇದೆ ಅಂತ ವ್ಯಕ್ತಿಯೊಬ್ಬರು ಆರೋಪ ಮಾಡ್ತಿದ್ದಾರೆ.
ಸೌಂದರ್ಯ ಸಾವಿನ ಕುರಿತ ಈ ಆರೋಪಗಳು ವಾಸ್ತವಕ್ಕೆ ದೂರ ಅಂತ ಕೆಲವರು ಹೇಳ್ತಿದ್ದಾರೆ. ಈ ದೂರು, ಬರೀ ಪ್ರಚಾರದ ಗಿಮಿಕ್ ಅಂತ ಇನ್ನೂ ಕೆಲವರು ಆರೋಪಿಸ್ತಿದ್ದಾರೆ. ಸತ್ಯ ಅಸತ್ಯ ಒಂದೇ ನಾಣ್ಯದ ಎರಡು ಮುಖ. ಒಂದಲ್ಲ, ಒಂದು ದಿನ ಸತ್ಯ ಹೊರಗಡೆ ಬರಲೇಬೇಕು. ಅಷ್ಟಕ್ಕೂ ಇದು ಸತ್ಯನಾ? ಸುಳ್ಳಾ? ತನಿಖೆ ನಡೆಸಿದ್ರೆ ನಿಜ ಹೊರ ಬಂದ್ರೂ ಬರಬಹುದು.
ನಿಮ್ಮ ಪ್ರತಿಕ್ರಿಯೆ ಏನು?






