ಮಂಗಳವಾರ ಈ ಕೆಲಸ ಮಾಡಿದ್ರೆ ಕಷ್ಟ ನಿಮ್ಮ ಬೆನ್ನೇರುವುದು ನಿಶ್ಚಿತ!

ಮಂಗಳವಾರ ಮಂಗಳ ಗ್ರಹದ ದಿನ. ಮಂಗಳವಾರದಂದು ಆಂಜನೇಯ ಸ್ವಾಮಿಯನ್ನು ಪೂಜಿಸಲಾಗುತ್ತದೆ. ಭಜರಂಗಬಲಿಯ ಆಶೀರ್ವಾದ ಪಡೆಯಲು ಮಂಗಳವಾರ ಆತನಿಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇದರೊಂದಿಗೆ, ಜನರು ಈ ದಿನದಂದು ಮಂಗಳ ದೇವರನ್ನು ಮೆಚ್ಚಿಸಲು ಕೆಲವು ಜ್ಯೋತಿಷ್ಯ ಕ್ರಮಗಳನ್ನು ಸಹ ಮಾಡುತ್ತಾರೆ. ಮಂಗಳನ ಶುಭ ಫಲಗಳು ವ್ಯಕ್ತಿಯ ಜೀವನಕ್ಕೆ ಎಲ್ಲಾ ರೀತಿಯ ಭೌತಿಕ ಸೌಕರ್ಯಗಳನ್ನು ಒದಗಿಸುತ್ತವೆ. ಧಾರ್ಮಿಕವಾಗಿ ಹೇಳುವುದಾದರೆ ಮಂಗಳವಾರ ಹನುಮಂತನ ದಿನ. ಈ ದಿನದಂದು ಆತನನ್ನು ಪೂಜಿಸುವುದರಿಂದ ಎಲ್ಲಾ ದುಃಖಗಳು ನಿವಾರಣೆಯಾಗುತ್ತದೆ ಮತ್ತು ಆತನ ಆಶೀರ್ವಾದದಿಂದ ನಮ್ಮ ಜೀವನದಲ್ಲಿ ಮಳೆಯಾಗುತ್ತದೆ. ನಂಬಿಕೆಗಳ ಪ್ರಕಾರ ಮಂಗಳವಾರ ಕೆಲವೊಂದು ಕೆಲಸಗಳನ್ನ ಎಂದಿಗೂ ಮಂಗಳವಾರ ಮಾಡಬಾರದು. ಹಾಗಾದ್ರೆ ಮಂಗಳವಾರ ಯಾವ ಕೆಲಸಗಳನ್ನ ಮಾಡಬಾರದು ಎಂಬುದು ಇಲ್ಲಿದೆ.
ಮಂಗಳವಾರ ಕ್ಷೌರ ಮಾಡುವುದು ಅಶುಭವೆಂದು ಪರಿಗಣಿಸಲಾಗಿದೆ. ಅಂದರೆ ಮಂಗಳವಾರ ಯಾವುದೇ ಕಾರಣಕ್ಕೂ ಕೂದಲು ಕಟ್ ಮಾಡಬಾರದು ಎನ್ನಲಾಗುತ್ತದೆ. ಇದರಿಂದ ಮಂಗಳ ದೋಷ ಉಂಟಾಗುತ್ತದೆ ಎನ್ನಲಾಗುತ್ತದೆ. ಕೂದಲು ಕತ್ತರಿಸಲು ಬುಧವಾರವನ್ನು ಅತ್ಯುತ್ತಮ ದಿನವೆಂದು ಪರಿಗಣಿಸಲಾಗುತ್ತದೆ. ಮಂಗಳವಾರ ಉಗುರುಗಳನ್ನು ಕತ್ತರಿಸುವುದು ಸಹ ಅಶುಭವೆಂದು ಪರಿಗಣಿಸಲಾಗಿದೆ. ನೀವು ಅಪ್ಪಿ-ತಪ್ಪಿ ಉಗುರು ಕಟ್ ಮಾಡಿದರೆ ನೀವು ಅನೇಕ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.
ಮಂಗಳವಾರ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳನ್ನ ಮಾಡಬಾರದು ಎನ್ನಲಾಗುತ್ತದೆ. ಈ ದಿನ ಯಾವುದಾದರೂ ಹೊಸ ಯೋಜನೆ ಆರಂಭ ಮಾಡಿದರೆ ಅದರಲ್ಲಿ ಮತ್ತು ಅಡಚಣೆಗಳ ಸಾಧ್ಯತೆಯೂ ಇದೆ. ಇದು ಹಣಕಾಸಿನ ವಹಿವಾಟುಗಳ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ ಆದರೆ ಜೀವನದ ಇತರ ಕ್ಷೇತ್ರಗಳಲ್ಲಿ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಬಹುದು. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ನಿಮ್ಮನ್ನ ಕಾಡಬಹುದು.
ಮಂಗಳವಾರ ಮೇಕಪ್ ವಸ್ತುಗಳನ್ನು ಖರೀದಿಸಬೇಡಿ. ಈ ದಿನ ಸೌಂದರ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದರಿಂದ ವೈವಾಹಿಕ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಎನ್ನಲಾಗುತ್ತದೆ. ಅಲ್ಲದೇ, ಈ ದಿನ ನೀವು ಯಾವುದೇ ಕಾರಣಕ್ಕೂ ಸಾಲವನ್ನ ತೆಗೆದುಕೊಳ್ಳಬಾರದು. ನೀವು ಮಂಗಳವಾರ ಕುಟುಂಬ ಸದಸ್ಯರಿಂದ ಸಾಲವನ್ನು ತೆಗೆದುಕೊಂಡರೆ, ಘರ್ಷಣೆಗಳು ಉಂಟಾಗುತ್ತವೆ.
ಮಂಗಳವಾರ ಯಾವುದೇ ಕಾರಣಕ್ಕೂ ಮನೆಯವರ ಜೊತೆ ಜಗಳ ಮಾಡಬಾರದು. ಅದರಲ್ಲೂ ನೀವು ಹಿರಿಯ ಸಹೋದರರೊಂದಿಗೆ ಜಗಳವಾಡಬಾರದು. ಮಂಗಳ ಅಣ್ಣನ ಜೊತೆಗಿನ ಸಂಬಂಧವನ್ನ ಸೂಚಿಸುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಸಹೋದರನ ಜೊತೆಗಿನ ಜಗಳ ಮಂಗಳ ಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇದರಿಂದ ನಿಮ್ಮ ಸಮಸ್ಯೆಗಳು ಜಾಸ್ತಿ ಆಗುತ್ತದೆ. ಅಲ್ಲದೇ. ಕೌಟುಂಬಿಕ ಜೀವನದಲ್ಲಿ ಕಷ್ಟಗಳು ಸಹ ಡಬಲ್ ಆಗುತ್ತದೆ
ಮಂಗಳವಾರ ಕೇವಲ ಮೇಕಪ್ ವಸ್ತುಗಳು ಮಾತ್ರವಲ್ಲದೇ, ಯಾವುದೇ ಹೊಸ ವಸ್ತುಗಳನ್ನ ಖರೀದಿ ಮಾಡಲು ಹೋಗಬಾರದು. ಇದರಿಂದಾ ವಸ್ತುಗಳು ಬೇಗ ಹಾಳಾಗುತ್ತದೆ ಎನ್ನಲಾಗುತ್ತದೆ. ನೀವು ಹೊಸ ಕೆಲಸಕ್ಕಾಗಿ ಈ ವಸ್ತುಗಳನ್ನ ಖರೀದಿ ಮಾಡಿದರೆ ಕಷ್ಟ ಹೆಚ್ಚಾಗುತ್ತದೆ. ಇಂದು ಮಾಡಿದ ಹೂಡಿಕೆಯೂ ಕೊನೆಗೆ ನಷ್ಟಕ್ಕೆ ಕಾರಣವಾಗಲಿದೆ ಎನ್ನಲಾಗುತ್ತದೆ. ಅಲ್ಲದೇ, ಹಣಕಾಸಿನ ವಿಚಾರವಾಗಿ ಸಹ ಯಾವುದೇ ನಿರ್ಧಾರಗಳನ್ನ ಮಾಡುವುದು ಸರಿಯಲ್ಲ.
ಮಂಗಳವಾರದಂದು ಗಾಢ ಬಣ್ಣದ ಬಟ್ಟೆಗಳನ್ನು ಖರೀದಿಸಬೇಡಿ ಅಥವಾ ಧರಿಸಬೇಡಿ. ಈ ದಿನ ಕೆಂಪು ಬಟ್ಟೆಗಳನ್ನು ಧರಿಸುವುದರಿಂದ ಮಂಗಳದೋಷದ ಪರಿಣಾಮ ಕಡಿಮೆಯಾಗುತ್ತದೆ. ಮಂಗಳವಾರ ಮೀನನ್ನು ಖರೀದಿಸಿ ತಿನ್ನುವುದು ಸಹ ಅಶುಭದ ಸಂಕೇತ ಎನ್ನಲಾಗುತ್ತದೆ.
ನಿಮ್ಮ ಪ್ರತಿಕ್ರಿಯೆ ಏನು?






